More

    ಬಡವರ ಮನೆ ಮಕ್ಕಳು ಹೀರೋ ಆಗ್ಬಾರ್ದಾ? ಸೋಷಿಯಲ್ ಮಿಡಿಯಾದಲ್ಲಿ ಹೀಗೊಂದು ಪ್ರಶ್ನೆ

    ಬೆಂಗಳೂರುವ: ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಕೆಲವೊಂದು ಚಿತ್ರಗಳಲ್ಲಿ ದೇವರು ಮತ್ತು ಧರ್ಮಕ್ಕೆ ಅಪಮಾನ ಮಾಡುವ ಸಾಕಷ್ಟು ದೃಶ್ಯಗಳಿವೆ. ಆಗೆಲ್ಲ ಸುಮ್ಮನಿದ್ದವರು, ಅದೊಂದು ಅವಮಾನ ಎಂದು ಭಾವಿಸದವರು ಈಗ ಮಾತ್ರ ಯಾಕೆ ಗಲಾಟೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಯೊಂದು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಕೇಳಿಬರುತ್ತಿದೆ.

    ಇದನ್ನೂ ಓದಿ: ಹೆಡ್ ಬುಷ್: ಜುಜುಬಿ ಕರಗ ಎಂಬ ಪದಬಳಕೆಗೆ ತಿಗಳ ಸಮುದಾಯದ ಆಕ್ರೋಶ

    ಬಡವರ ಮನೆ ಮಕ್ಕಳು ಹೀರೋ ಆಗ್ಬಾರ್ದಾ? ಸೋಷಿಯಲ್ ಮಿಡಿಯಾದಲ್ಲಿ ಹೀಗೊಂದು ಪ್ರಶ್ನೆ

    ಬೆಂಗಳೂರು: ‘ಹೆಡ್​ ಬುಷ್​’ ಚಿತ್ರದಲ್ಲಿ ದೈವದ ಬಗ್ಗೆ ಹಗುರವಾದ ಪದಗಳ ಬಳಕೆ ಮಾಡುವುದರ ಜತೆಗೆ ಸಂಪ್ರದಾಯ ಬದ್ಧ ದೈವ ಆಚರಣೆಯನ್ನ ಚಿತ್ರದಲ್ಲಿ ಬೇಕಾಬಿಟ್ಟಿ ತೋರಿಸಲಾಗಿದೆ ಎಂಬ ಆಕ್ಷೇಪಗಳು ಚಿತ್ರದ ಕುರಿತು ಕೇಳಿಬರುತ್ತಿದೆ. ಈ ಎಲ್ಲ ವಿವಾದಗಳಿಂದ ಚಿತ್ರದ ಗಳಿಕೆ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ‘ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯ …’ ಎಂಬ ಅಭಿಯಾನದ ಜತೆಗೆ ‘ಬಡವರ ಮೆನ ಮಕ್ಕಳು ಹೀರೋ ಆಗ್ಬಾರ್ದಾ?’ ಎಂಬ ಇನ್ನೊಂದು ಅಭಿಯಾನವೂ ಪ್ರಾರಂಭವಾಗಿದೆ.

    ಇದನ್ನೂ ಓದಿ: ‘ಹೆಡ್-ಬುಷ್’ನಲ್ಲಿ ವೀರಗಾಸೆಗೆ ಅಪಮಾನ ಮಾಡಿಲ್ಲ ಎಂದ ಧನಂಜಯ್

    ಉಪೇಂದ್ರ ಗಣೇಶನಿಗೆ ಗನ್ ಹಿಡಿದಾಗ ಧರ್ಮಕ್ಕೆ ಅಪಚಾರ ಆಗಲಿಲ್ಲ, ನಿರ್ದೇಶಕ ಗುರುಪ್ರಸಾದ್​ ಮಠದೊಳಗೆ ಕಾವಿಧಾರಿಗಳು ಎಣ್ಣೆ ಹೊಡೀತಾರೆ ಅಂದಾಗ ಧರ್ಮಕ್ಕೆ ಅಪಮಾನ ಆಗಲಿಲ್ಲ, ಶೂದ್ರರ ಹುಲಿವೇಷಧಾರಿಗೆ ಹೊಡೆದಾಗ ಧರ್ಮಕ್ಕೆ ಅಪಚಾರವಾಗಲಿಲ್ಲ, ದಲಿತರ ಗುಳಿಗದೈವಕ್ಕೆ ದಣಿಯ ಗುಲಾಮರು ಹೊಡೆದಾಗ ಧರ್ಮಕ್ಕೆ ಅವಮಾನವಾಗಲಿಲ್ಲ, ‘ಕಠಾರಿವೀರ ಸುರಸುಂದರಾಂಗಿ ಸಿನಿಮಾದಲ್ಲಿ ಉಪೇಂದ್ರ ಹಿಂದೂ ದೇವರ ಪಾತ್ರಧಾರಿಗಳನ್ನು ಬೂಟುಕಾಲಲ್ಲಿ ಒದ್ದು ಫೈಟ್​ ಮಾಡುವಾಗ ಆಗದ ಅವಮಾನ, ವೀರಗಾಸೆ ವೇಷ ಧರಿಸಿ ಜಯರಾಜ್​ ಕೊಲ್ಲಲು ಬಂದ ಖಳರಿಗೆ ನಾಯಕ ಹೊಡೆದಾಗ ಮಾತ್ರ ಧರ್ಮಕ್ಕೆ ಅಪಮಾನವಾಗುತ್ತದೆ? ಎಂದು ಪ್ರಶ್ನಿಸಲಾಗುತ್ತಿದೆ. ಬಡವರ ಮನೆಯಿಂದ ಬಂಡ ಧನಂಜಯ್​ ಮೇಲೆ ಯಾಕೆ ಪ್ರತಾಪವನ್ನು ತೋರಿಸುತ್ತಿದ್ದೀರಾ? ಬಡವರ ಮನೆ ಮಕ್ಕಳು ಯಾಕೆ ಹೀರೋ ಆಗ್ಬಾರ್ದಾ? ಎಂದು ಪ್ರಶ್ನಿಸಲಾಗುತ್ತಿದೆ.

    ‘ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯ’; ಸೋಷಿಯಲ್ ಮಿಡಿಯಾದಲ್ಲಿ ಹೊಸ ಅಭಿಯಾನ ಪ್ರಾರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts