More

    ಮೋಹನ ಮಾಳಶೆಟ್ಟಿ ನಿವಾಸಕ್ಕೆ ಅನೀಲ ಮೆಣಸಿನಕಾಯಿ ಭೇಟಿ

    ಗದಗ:

    ಗದಗ ಕ್ಷೇತ್ರದ ಟಿಕೆಟ್ ಅಕಾಂಕ್ಷಿಗಳಾಗಿದ್ದ ರಾಜು ಕುರಡಗಿ, ಶ್ರೀಕಾಂತ ಖಟವಟೆ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ಹಿರಿಯ ಮುಖಂಡ ತೋಟೂಸಾ ಭಾಂಡಗೆ ಅವರ ನಿವಾಸಕ್ಕೆ ಗುರುವಾರ ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನೀಲ ಮೆಣಸಿನಕಾಯಿ ಭೇಟಿ ನೀಡಿ ಚುನಾವಣೆ ಕುರಿತು ಚರ್ಚಿಸಿದರು.
    ಗದಗ ನಗರ ಮತ್ತು ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪಕ್ಷದ ಗೆಲುವಿಗೆ ಸಹಕಾರ ನೀಡಬೇಕು ಎಂದು ಅನೀಲ ಮೆಣಸಿನಕಾಯಿ ಮನವಿ ಮಾಡಿಕೊಂಡರು. ಮುಂಬರುವ ದಿನಗಳಲ್ಲಿ ಚುನಾವಣೆ ಪ್ರಚಾರ, ಬಹಿರಂಗ ಸಭೆ ಆಯೋಜನೆ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
    ಈ ಸಂದರ್ಭದಲ್ಲಿ ಸಂಗಮೇಶ ದುಂದೂರ, ನಗರಸಭೆ ಸದಸ್ಯರಾದ ಅನೀಲ ಅಬ್ಬಿಗೇರಿ, ಮಹಾಂತೇಶ ನಲವಡಿ, ಎಂ ಎಂ ಹಿರೇಮಠ, ಕಾಂತಿಲಾಲ ಬನ್ಸಾಲಿ, ಶಿವರಾಜಗೌಡ ಹಿರೇಮನಿ ಪಾಟೀಲ ಮತ್ತಿತರರು ಇದ್ದರು. ಇದನ್ನೂ ಮುನ್ನು ಅನೀಲ ಮೆಣಸಿನಕಾಯಿ ಅವರು ಶ್ರೀ ವೀರನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.


    ದೀಡ ನಮಸ್ಕಾರ:
    ಗದಗ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಅನೀಲ ಮೆಣಸಿನಕಾಯಿ ಅವರು ಕಳೆದೆರಡು ದಿನಗಳಿಂದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಂಗಳವಾರ ಬಿಜೆಪಿ ಹೈಕಮಾಂಡ್ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಅನೀಲ ಮೆಣಸಿನಕಾಯಿ ಅವರು ತಮ್ಮ ಅಪರ ಬೆಂಬಲಿಗರು, ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರಲ್ಲದೇ, ದೀಡ ನಮಸ್ಕಾರ ಹಾಕಿದರು. ನಂತರ ವೀರಭದ್ರೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಗೆಲುವುವಿಗಾಗಿ ಪ್ರಾರ್ಥಿಸಿದರು. ಗದಗ ನಗರದ ತೋಂಟದಾರ್ಯಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ಕರ್ತೃ ಗದ್ದುಗೆ, ಬೆಟಗೇರಿಯ ರಂಗಪ್ಪಜ್ಜನಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಂತರ ಶ್ರೀ ಸಿದ್ಧರಾಮ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ನಗರಸಭೆ ಸದಸ್ಯ ಅನೀಲ ಅಬ್ಬಿಗೇರಿ, ಸಿದ್ದಲಿಂಗೇಶ ಮೆಣಸಿನಕಾಯಿ, ಪರಮೇಶ ನಾಯಕ ಮತ್ತಿತರರು ಇದ್ದರು.  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts