More

    ಸ್ನ್ಯಾಪ್​ಚಾಟ್​ ಸ್ನೇಹಿತೆ ಎಂದು ಅಪಾರ್ಥ; ಮಹಿಳೆ ಹತ್ಯೆ

    ಅಮರಾವತಿ: ಯುವಕನೋರ್ವ ತನ್ನ ಸ್ನ್ಯಾಪ್​ಚಾಟ್​ ಸ್ನೇಹಿತೆ ಎಂದು ಭಾವಿಸಿ ಮಹಿಳೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಡಾ.ಬಿ.ಆರ್​.ಅಂಬೇಡ್ಕರ್​ ಕೋನಸೀಮಾ ಜಿಲ್ಲೆಯ ಅಮಲಾಪುರಂನಲ್ಲಿ ನಡೆದಿದೆ.

    ನೆಲ್ಲೂರು ಮೂಲದ ಕೋಟಾ ಹರಿಕೃಷ್ಣ(25) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಮೃತ ದುರ್ದೈವಿ ಮನ್ನೆ ಶ್ರೀದೇವಿ(35) ಎಂದು ತಿಳಿದು ಬಂದಿದ್ದು ಆರೋಪಿ ಕೊಲೆ ಮಾಡಲು ಹೋಗಿದ್ದ ಮನೆಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಘಟನೆ ಏಪ್ರಿಲ್​ 4ರಂದು ನಡೆದಿದ್ದು ಬಂಧಿತ ಯುವಕ ಹರಿಕೃಷ್ಣ ಹಾಗೂ ನಾಗದುರ್ಗ ಎಂಬ ಮಹಿಳೆ ಸ್ನ್ಯಾಪ್​ಚಾಟ್​ ಮೂಲಕ ಪರಿಚಯವಾಗಿದ್ದರು. ನಾಗದುರ್ಗಗೆ ಈ ಮೊದಲೇ ಮದುವೆಯಾಗಿತ್ತು ಅದಾಗಿಯೂ ಆರೋಪಿಯೂ ಮಹಿಳೆಯನ್ನು ಪೀಡಿಸುತ್ತಿದ್ದ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ರಿಷಭ್​ ನಹೀ ಹೇ ತೋ ನಸೀಮ್​ ಹೇ; ಬಾಲಿವುಡ್​ ನಟಿ ಕಾಲೆಳೆದ ನೆಟ್ಟಿಗರು!

    ಇದರಿಂದ ಕುಪಿತಗೊಂಡ ಮಹಿಳೆ ಆತನೊಂದಿಗೆ ಮಾತನಾಡಲು ನಿಲ್ಲಿಸಿದಳು ಮತತ್ಉ ಬ್ಲಾಕ್​ ಮಾಡಿದ್ದಳು. ಈ ಮೊದಲು ಚಾಟ್​ ಮಾಡುವ ವೇಳೆ ಮಹಿಳೆ ಆಕೆಯ ಮನೆಯ ವಿಳಾಸವನ್ನು ಶೇರ್​ ಮಾಡಿದ್ದಳು.

    ಪಾನಮತ್ತನಾಗಿ ಮಹಿಳೆ ಮನೆ ಬಳಿ ಬಂದ ಆರೋಪಿಯೂ ಮನೆ ಕೆಲಸದಾಕೆ ಶ್ರೀದೇವಿಯನ್ನು ನಾಗದುರ್ಗ ಎಂದು ಭಾವಿಸಿ ಚಾಕುವಿನಿಂದ ಕತ್ತಿನ ಭಾಗವನ್ನು ಇರಿದು ಹತ್ಯೆ ಮಾಡಿದ್ಧಾನೆ. ಅಲ್ಲೇ ಇದ್ದ ನಾಗದುರ್ಗ ತಾಯಿ ವೇಂಕಟಮ್ಮ ಕೂಗಿಕೊಂಡಿದ್ಧಾರೆ. ಅವರ ಮೇಲೆಯೂ ಆರೋಪಿ ಹಲ್ಲೆ ಮಾಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ತಿಳಿಸಿದ್ಧಾರೆ.

    ಮಹಿಳೆಯರ ಚೀರಾಟದಿಂದ ಮನೆ ಬಳಿ ಧಾವಿಸಿದ ನೆರೆ ಹೊರೆಯವರು ಆರೋಪಿ ಹರಿಕೃಷ್ಣನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts