ವಿಜಯವಾಡ: ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡ ಪಟ್ಟಣದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯೂಟಿಷಿಯನ್ ಸುರೇಖಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸುರೇಖಾ ಮೃತ ಎಸ್ಐ ವಿಜಯ್ ಕುಮಾರ್ ಅವರ ಗರ್ಲ್ಫ್ರೆಂಡ್. ಮೊದಲೇ ಮದುವೆಯಾಗಿದ್ದ ಸುರೇಖಾ ಮತ್ತು ವಿಜಯ್ ನಡುವೆ ವಿವಾಹೇತರ ಸಂಬಂಧವಿತ್ತು. ಸದ್ಯ ಬಂಧಿಯಾಗಿರುವ ಆಕೆಯನ್ನು ಕೋರ್ಟ್ ಮುಂದೆ ಹಾಜರುಪಡಿಸಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದ್ದು, ವಿಜಯವಾಡ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿರಿ: ಎಷ್ಟೇ ಸಂಧಾನ ಮಾಡಿದ್ರೂ ಸಹಿಸದ ಮನಸ್ಸು: ಹೊಂಚು ಹಾಕಿ ಮಲಗಿದ್ದ ಪತ್ನಿಯನ್ನೇ ಕೊಂದ ಪತಿರಾಯ!
ಪ್ರಕರಣ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಎಸ್ಪಿ ಸತ್ಯಾನಂದಂ, ಕೆಲ ವೈಯಕ್ತಿಕ ಕಾರಣಗಳಿಂದ ವಿಜಯ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಪೊಲೀಸ್ ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳ ಒತ್ತಡವೇ ಕಾರಣ ಎಂಬ ಮಾಜಿ ಸಚಿವ ದೇವಿನೇನಿ ಉಮಾ ಆನಂದ್ ಆರೋಪ ಸತ್ಯಕ್ಕೆ ದೂರವಾದದ್ದು, ಪೊಲೀಸರನ್ನು ನಿಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬೇಡಿ ಎಂದು ಸಲಹೆ ನೀಡಿರುವ ಡಿಎಸ್ಪಿ, ಆರೋಪ ಸಾಬೀತು ಮಾಡುವಂತೆ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ, ಎಸ್ಐ ಸಾವಿನ ಪ್ರಕರಣದ ತನಿಖೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ವೆಸ್ಟ್ ಗೋದಾವರಿ ಜಿಲ್ಲೆಯ ಏಳೂರಿನ 2012ನೇ ಬ್ಯಾಚ್ ಎಸ್ಐ ಆಗಿದ್ದ ವಿಜಯ್ಕುಮಾರ್, ಗುಡಿವಾಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಠಾಣೆಯ ಸಮೀಪವೇ ಅಪಾರ್ಮೆಂಟ್ ಒಂದರಲ್ಲಿ ವಾಸವಿದ್ದ ವಿಜಯ್ಗೆ ಹನುಮಾನ್ ಜಂಕ್ಷನ್ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್ ಸುರೇಖಾ ಎಂಬಾಕೆಯ ಪರಿಚಯವಾಗಿತ್ತು. ಇಬ್ಬರ ನಡುವೆ ಲವ್ವಿಡವ್ವಿ ಇರುವುದು ಸುರೇಖಾ ಪತಿಗೆ ಗೊತ್ತಾಗಿ ಆತ ಮೇಲಾಧಿಕಾರಿಗಳಿಗೆ ದೂರು ನೀಡಿದ್ದ. ಇದರಿಂದಾಗಿ ಕೆಲ ತಿಂಗಳವರೆಗೆ ವಿಜಯ್ ಅಮಾನತ್ತು ಶಿಕ್ಷೆಗು ಗುರಿಯಾಗಿದ್ದರು.
ಇದನ್ನೂ ಓದಿರಿ: ಗೇ ಲವ್ವರ್ಗಾಗಿ ಪತ್ನಿಯನ್ನೇ ಕೊಂದ ಸಲಿಂಗಕಾಮಿ: ನಾದಿನಿ ಬಿಚ್ಚಿಟ್ಟ ಭಯಾನಕ ರಹಸ್ಯ ಇಲ್ಲಿದೆ..
ಎರಡೂವರೆ ತಿಂಗಳ ಹಿಂದಷ್ಟೇ ಏಳೂರು ಮೂಲದ ಮಹಿಳೆಯೊಬ್ಬರನ್ನು ವಿಜಯ್ ಕುಮಾರ್ ಮದುವೆಯಾಗಿದ್ದರು. ವಿವಾಹವಾದರೂ ಪತ್ನಿಯನ್ನು ಕರೆತರದೆ ಕಪೂರಾದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಬ್ಯೂಟಿಷಿಯನ್ ಜತೆಯಲ್ಲೇ ವಿಜಯ್ ಉಳಿದುಕೊಂಡಿದ್ದರು. ಪತ್ನಿಯನ್ನು ಕರೆತರದಂತೆ ಆಗಾಗ ವಿಜಯ್ ಮೇಲೆ ಸುರೇಖಾ ಒತ್ತಡ ಹಾಕುತ್ತಿದ್ದಳಂತೆ. ಹೀಗಿರುವಾಗ ಕಳೆದ ಸೋಮವಾರ ರಾತ್ರಿ 8 ಗಂಟೆಗೆ ವಿಜಯ್ ಅಪಾರ್ಟ್ಮೆಂಟ್ಗೆ ತೆರಳಿದ ಸುರೇಖಾ ಇದೇ ವಿಚಾರವಾಗಿ ಆತನನ್ನು ಪ್ರಶ್ನಿಸಿ, ವಾಗ್ದಾದ ನಡೆಸಿರುವುದು ಬೆಳಕಿಗೆ ಬಂದಿದೆ.
ಜಗಳವಾಡಿರುವುದಲ್ಲದೆ, ಪತ್ನಿಯನ್ನು ಮನೆಗೆ ಕರೆತಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮತ್ತು ಡೆತ್ನೋಟ್ನಲ್ಲಿ ವಿಜಯ್ ಹೆಸರು ಬರೆಯುವುದಾಗಿ ಹೆದರಿಸಿದ್ದಾಳೆ. ಅಲ್ಲದೆ, ಅಪಾರ್ಟ್ಮೆಂಟ್ ಬಾತ್ರೂಮ್ಗೆ ಹೋಗಿ ಬಾಗಿಲು ಲಾಕ್ ಮಾಡಿಕೊಂಡು ಆತ್ಮಹತ್ಯೆ ನಾಟವಾಡಿ ಬೆದರಿಸಿದ್ದಾಳೆ. ಇದರಿಂದ ಮತ್ತಷ್ಟು ಭಯಭೀತಗೊಂಡ ವಿಜಯ್ ತಾನೇ ನೇಣಿಗೆ ಶರಣಾಗಿ ಪ್ರಾಣ ಬಿಟ್ಟಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. (ಏಜೆನ್ಸೀಸ್)
ಮದ್ವೆಯಾದ ಮೂರೇ ತಿಂಗಳಲ್ಲಿ ಎಸ್ಐ ಸಾವು: ಬ್ಯೂಟಿ ಹಿಂದೆ ಬಿದ್ದ ಪೊಲೀಸಪ್ಪನ ದುರಂತ ಕತೆ ಇದು!
ಕಾಲೇಜು ಯುವತಿಯ ಬೆತ್ತಲೆ ಫೋಟೋ ಸ್ನೇಹಿತರ ಕೈಯಲ್ಲಿ! ಮುಂದೆ ನಡೆದೇ ಹೋಯ್ತು ಅವಾಂತರ…
ಪ್ಲೀಸ್ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!