More

    ಎಸ್​ಐಗೆ ಸಾವಿನ ದಾರಿ ತೋರಿದ ಬ್ಯೂಟಿಷಿಯನ್​ ಬಂಧನ: ಸುಂದರಿಯ ಹೈಡ್ರಾಮಕ್ಕೆ ಬೆದರಿ ನೇಣಿಗೆ ಶರಣು!

    ವಿಜಯವಾಡ: ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡ ಪಟ್ಟಣದ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯೂಟಿಷಿಯನ್ ಸುರೇಖಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಸುರೇಖಾ ಮೃತ ಎಸ್​ಐ ವಿಜಯ್​ ಕುಮಾರ್​ ಅವರ ಗರ್ಲ್​ಫ್ರೆಂಡ್​. ಮೊದಲೇ ಮದುವೆಯಾಗಿದ್ದ ಸುರೇಖಾ ಮತ್ತು ವಿಜಯ್​ ನಡುವೆ ವಿವಾಹೇತರ ಸಂಬಂಧವಿತ್ತು. ಸದ್ಯ ಬಂಧಿಯಾಗಿರುವ ಆಕೆಯನ್ನು ಕೋರ್ಟ್​ ಮುಂದೆ ಹಾಜರುಪಡಿಸಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದ್ದು, ವಿಜಯವಾಡ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

    ಇದನ್ನೂ ಓದಿರಿ: ಎಷ್ಟೇ ಸಂಧಾನ ಮಾಡಿದ್ರೂ ಸಹಿಸದ ಮನಸ್ಸು: ಹೊಂಚು ಹಾಕಿ ಮಲಗಿದ್ದ ಪತ್ನಿಯನ್ನೇ ಕೊಂದ ಪತಿರಾಯ!

    ಪ್ರಕರಣ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಎಸ್​ಪಿ ಸತ್ಯಾನಂದಂ, ಕೆಲ ವೈಯಕ್ತಿಕ ಕಾರಣಗಳಿಂದ ವಿಜಯ್​ ಕುಮಾರ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಪೊಲೀಸ್​ ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳ ಒತ್ತಡವೇ ಕಾರಣ ಎಂಬ ಮಾಜಿ ಸಚಿವ ದೇವಿನೇನಿ ಉಮಾ ಆನಂದ್​ ಆರೋಪ ಸತ್ಯಕ್ಕೆ ದೂರವಾದದ್ದು, ಪೊಲೀಸರನ್ನು ನಿಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬೇಡಿ ಎಂದು ಸಲಹೆ ನೀಡಿರುವ ಡಿಎಸ್​ಪಿ, ಆರೋಪ ಸಾಬೀತು ಮಾಡುವಂತೆ ನೋಟಿಸ್​ ಕಳುಹಿಸಿದ್ದಾರೆ. ಅಲ್ಲದೆ, ಎಸ್​ಐ ಸಾವಿನ ಪ್ರಕರಣದ ತನಿಖೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ವೆಸ್ಟ್​ ಗೋದಾವರಿ ಜಿಲ್ಲೆಯ ಏಳೂರಿನ 2012ನೇ ಬ್ಯಾಚ್ ಎಸ್​ಐ ಆಗಿದ್ದ ವಿಜಯ್​ಕುಮಾರ್​, ಗುಡಿವಾಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಠಾಣೆಯ ಸಮೀಪವೇ ಅಪಾರ್ಮೆಂಟ್​ ಒಂದರಲ್ಲಿ ವಾಸವಿದ್ದ ವಿಜಯ್​ಗೆ ಹನುಮಾನ್​ ಜಂಕ್ಷನ್​ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್​ ಸುರೇಖಾ ಎಂಬಾಕೆಯ ಪರಿಚಯವಾಗಿತ್ತು. ಇಬ್ಬರ ನಡುವೆ ಲವ್ವಿಡವ್ವಿ ಇರುವುದು ಸುರೇಖಾ ಪತಿಗೆ ಗೊತ್ತಾಗಿ ಆತ ಮೇಲಾಧಿಕಾರಿಗಳಿಗೆ ದೂರು ನೀಡಿದ್ದ. ಇದರಿಂದಾಗಿ ಕೆಲ ತಿಂಗಳವರೆಗೆ ವಿಜಯ್​ ಅಮಾನತ್ತು ಶಿಕ್ಷೆಗು ಗುರಿಯಾಗಿದ್ದರು.

    ಇದನ್ನೂ ಓದಿರಿ: ಗೇ ಲವ್ವರ್​ಗಾಗಿ ಪತ್ನಿಯನ್ನೇ ಕೊಂದ ಸಲಿಂಗಕಾಮಿ: ನಾದಿನಿ ಬಿಚ್ಚಿಟ್ಟ ಭಯಾನಕ ರಹಸ್ಯ ಇಲ್ಲಿದೆ..

    ಎರಡೂವರೆ ತಿಂಗಳ ಹಿಂದಷ್ಟೇ ಏಳೂರು ಮೂಲದ ಮಹಿಳೆಯೊಬ್ಬರನ್ನು ವಿಜಯ್​ ಕುಮಾರ್​ ಮದುವೆಯಾಗಿದ್ದರು. ವಿವಾಹವಾದರೂ ಪತ್ನಿಯನ್ನು ಕರೆತರದೆ ಕಪೂರಾದಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಬ್ಯೂಟಿಷಿಯನ್​ ಜತೆಯಲ್ಲೇ ವಿಜಯ್​ ಉಳಿದುಕೊಂಡಿದ್ದರು. ಪತ್ನಿಯನ್ನು ಕರೆತರದಂತೆ ಆಗಾಗ ವಿಜಯ್​ ಮೇಲೆ ಸುರೇಖಾ ಒತ್ತಡ ಹಾಕುತ್ತಿದ್ದಳಂತೆ. ಹೀಗಿರುವಾಗ ಕಳೆದ ಸೋಮವಾರ ರಾತ್ರಿ 8 ಗಂಟೆಗೆ ವಿಜಯ್​ ಅಪಾರ್ಟ್​ಮೆಂಟ್​ಗೆ ತೆರಳಿದ ಸುರೇಖಾ ಇದೇ ವಿಚಾರವಾಗಿ ಆತನನ್ನು ಪ್ರಶ್ನಿಸಿ, ವಾಗ್ದಾದ ನಡೆಸಿರುವುದು ಬೆಳಕಿಗೆ ಬಂದಿದೆ.

    ಜಗಳವಾಡಿರುವುದಲ್ಲದೆ, ಪತ್ನಿಯನ್ನು ಮನೆಗೆ ಕರೆತಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮತ್ತು ಡೆತ್​ನೋಟ್​ನಲ್ಲಿ ವಿಜಯ್​ ಹೆಸರು ಬರೆಯುವುದಾಗಿ ಹೆದರಿಸಿದ್ದಾಳೆ. ಅಲ್ಲದೆ, ಅಪಾರ್ಟ್​ಮೆಂಟ್​ ಬಾತ್​ರೂಮ್​ಗೆ ಹೋಗಿ ಬಾಗಿಲು ಲಾಕ್​ ಮಾಡಿಕೊಂಡು ಆತ್ಮಹತ್ಯೆ ನಾಟವಾಡಿ ಬೆದರಿಸಿದ್ದಾಳೆ. ಇದರಿಂದ ಮತ್ತಷ್ಟು ಭಯಭೀತಗೊಂಡ ವಿಜಯ್​ ತಾನೇ ನೇಣಿಗೆ ಶರಣಾಗಿ ಪ್ರಾಣ ಬಿಟ್ಟಿದ್ದಾನೆಂದು ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ. (ಏಜೆನ್ಸೀಸ್​)

    ಇದನ್ನೂ ಓದಿರಿ: 15ರ ವಿದ್ಯಾರ್ಥಿಗೆ ಬಲೆ ಬೀಸಿದ 35ರ ಶಿಕ್ಷಕಿ: ಸೆಕ್ಸ್​ ಬಳಿಕ ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಅಪ್ರಾಪ್ತ!

    ಮದ್ವೆಯಾದ ಮೂರೇ ತಿಂಗಳಲ್ಲಿ ಎಸ್​ಐ ಸಾವು: ಬ್ಯೂಟಿ ಹಿಂದೆ ಬಿದ್ದ ಪೊಲೀಸಪ್ಪನ ದುರಂತ ಕತೆ ಇದು!

    ಕಾಲೇಜು ಯುವತಿಯ ಬೆತ್ತಲೆ ಫೋಟೋ ಸ್ನೇಹಿತರ ಕೈಯಲ್ಲಿ! ಮುಂದೆ ನಡೆದೇ ಹೋಯ್ತು ಅವಾಂತರ…

    ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts