More

    ‘ನೋಡು ಸಾಯ್ತೀನಿ..’ಎಂದು ಪತ್ನಿಯನ್ನು ಹೆದರಿಸಲು ಹೋದವ ನಿಜಕ್ಕೂ ಸತ್ತೇ ಹೋದ..! ಆಕೆ ಏನು ಮಾಡಿದ್ಳು?

    ಅಮರಾವತಿ: ಈ ಲಾಕ್​ಡೌನ್​ ಇದೆ. ಈತ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮಲಕಪಲ್ಲಿ ಗ್ರಾಮದಲ್ಲಿದ್ದಾನೆ…ಪತ್ನಿ ಕುವೈತ್​ನಲ್ಲಿ ಸಿಕ್ಕಿಬಿದ್ದಿದ್ದಾಳೆ..!

    ದೂರದ ಕುವೈತ್​ನಲ್ಲಿ ಕೆಲಸ ಮಾಡುತ್ತಿರುವ ಪತ್ನಿಗೆ ವಾಪಸ್​ ಬಾ ಎಂದು ಒಂದೇ ಸಮನೆ ಪೀಡಿಸುತ್ತಿದ್ದ ಈತ ಆಕೆಯನ್ನು ಹೆದರಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.

    ಜಿ.ಗಣೇಶ್​ (35) ಮೃತ. ಈತನ ಪತ್ನಿ ಕುವೈತ್​​ನಲ್ಲಿ ಕೆಲಸ ಮಾಡುತ್ತಾರೆ. ಪತ್ನಿ ತನ್ನಿಂದ ದೂರ ಇರುತ್ತಾಳೆ ಎಂಬುದು ಇವನ ನೋವು. ಹಲವು ಬಾರಿ ಇಬ್ಬರೂ ವಿಡಿಯೋ ಕಾಲ್​ ಮಾಡಿಕೊಂಡು ಮಾತನಾಡಿಕೊಂಡಿದ್ದಾರೆ. ಇದೇ ವಿಚಾರಕ್ಕೆ ಜಗಳವನ್ನೂ ಆಡಿಕೊಂಡಿದ್ದಾರೆ.

    ಇದನ್ನೂ ಓದಿ: ಯುವ ಪತ್ರಕರ್ತೆ ಆತ್ಮಹತ್ಯೆ…ರಾಜಕೀಯ ಮುಖಂಡ ಅರೆಸ್ಟ್​..

    ಹಾಗೇ ಸೋಮವಾರವೂ ಕೂಡ ಪತ್ನಿಗೆ ವಿಡಿಯೋ ಕಾಲ್ ಮಾಡಿದ ಗಣೇಶ್​ ಆಕೆಯ ಬಳಿ ಜಗಳವಾಡಿದ್ದಾನೆ. ಕೆಲಸ ಬಿಟ್ಟು ಮನೆಗೆ ಬಾ ಎಂದು ಕರೆದಿದ್ದಾನೆ. ಇವರಿಬ್ಬರ ಮಧ್ಯೆ ಅದೆಷ್ಟೋ ಹೊತ್ತು ಫೋನ್​ನಲ್ಲೇ ಗಲಾಟೆ ನಡೆದಿದೆ.
    ಬಳಿಕ ಗಣೇಶ್​, ನೀನು ಬರದೆ ಇದ್ದರೆ ನಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ನಿಯನ್ನು ಹೆದರಿಸಿದ್ದಾನೆ. ಅಷ್ಟೇ ಅಲ್ಲ, ತಾನಿದ್ದ ಕೋಣೆಯಲ್ಲಿ ಸ್ಟೂಲ್​ ಮೇಲೆ ನಿಂತು, ಫ್ಯಾನ್​ಗೆ ಹಗ್ಗ ಕಟ್ಟಿಕೊಂಡು ಅದರ ಕುಣಿಕೆಯನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು, ವಿಡಿಯೋ ಕಾಲ್​ನಲ್ಲಿ ಪತ್ನಿಗೆ ತೋರಿಸಿ ಹೆದರಿಸಿದ್ದಾನೆ. ಆದರೆ ಹಾಗೆ ಪತ್ನಿಗೆ ಬ್ಲ್ಯಾಕ್​ ಮೇಲ್​ ಮಾಡಲು ಪ್ರಯತ್ನಿಸಿದವನಿಗೆ ಆಕಸ್ಮಿಕವಾಗಿ ಕಾಲು ಜಾರಿದೆ. ಸ್ಟೂಲ್​ನಿಂದ ಜಾರಿದ ಕೂಡಲೇ ಕುತ್ತಿಗೆಗೆ ಕುಣಿಕೆ ಬಿಗಿದು ಪ್ರಾಣ ಹೋಗಿದೆ. ಪತ್ನಿಗೆ ಅಲ್ಲಿಂದ ಏನೂ ಮಾಡಲು ತೋಚದೆ ಆ ಕ್ಷಣಕ್ಕೆ ಕಂಗಾಲಾಗಿದ್ದಾಳೆ.

    ಇದನ್ನೂ ಓದಿ: ‘ಒಮ್ಮೆ ಹೀಗಾದರೆ…ಕರೊನಾದಿಂದ ದೇಶಕ್ಕೊಂದು ಅನುಗ್ರಹ ಸಿಕ್ಕಂತಾಗುತ್ತದೆ’: ಆರೋಗ್ಯ ಸಚಿವ ಹರ್ಷವರ್ಧನ್​

    ಈ ವಿಚಾರವನ್ನು ಕುಟುಂಬದವರು ವಿಸ್ತಾರವಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಸಹ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೇ, ಗಣೇಶ್​ನ ಮೊಬೈಲ್​ನಲ್ಲಿ ರೆಕಾರ್ಡ್​ ಆಗಿರುವ ಮಾತುಕತೆಗಳನ್ನೂ ಪೊಲೀಸರು ಆಲಿಸಿದ್ದಾರೆ. (ಏಜೆನ್ಸೀಸ್)

    ಇದನ್ನೂ ಓದಿ: ಅಣ್ಣೋ….. ಇನ್ನೊಂದು ಕ್ವಾರ್ಟರ್ ಕೊಡಣ್ಣಾ…..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts