ಅಹಮದಾಬಾದ್: ಏಕದಿನ ವಿಶ್ವಕಪ್ನಲ್ಲಿ ಆತಿಥೇಯ ಭಾರತ ಮತ್ತು ಪಾಕಿಸ್ತಾನ ನಡುವೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ಪಂದ್ಯಕ್ಕೆ ಗಣ್ಯರ ದಂಡು ಹಾಜರಾಗಲಿದೆ. ಗೃಹ ಸಚಿವ ಅಮಿತ್ ಷಾ, ಬಾಲಿವುಡ್ ತಾರೆ ಅಮಿತಾಭ್ ಬಚ್ಚನ್, ಸೂಪರ್ಸ್ಟಾರ್ ರಜಿನಿಕಾಂತ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮುಂತಾದವರು ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಕಾ ಅಶ್ರ್ ಕೂಡ ಪಂದ್ಯಕ್ಕೆ ಹಾಜರಾಗಲಿದ್ದಾರೆ. ಬಚ್ಚನ್, ರಜಿನಿ, ಸಚಿನ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಈ ಮುನ್ನ 50 ಸಾವಿರ ರೂ. ಮೇಲ್ಪಟ್ಟ ಮೌಲ್ಯದ ಗೋಲ್ಡನ್ ಟಿಕೆಟ್ ವಿತರಿಸಿದ್ದರು. ಬಚ್ಚನ್, ರಜಿನಿ ಈ ಮುನ್ನವೂ ಭಾರತ ತಂಡದ ಹಲವು ಪಂದ್ಯಗಳಿಗೆ ಸಾಕ್ಷಿಯಾಗಿದ್ದರು.
ಭಾರತ-ಪಾಕ್ ಪಂದ್ಯಕ್ಕೆ ಮುನ್ನ ವಿಶೇಷ ಸಮಾರಂಭ
ಕೊನೇ ಕ್ಷಣದಲ್ಲಿ ಉದ್ಘಾಟನಾ ಸಮಾರಂಭ ಕೈಬಿಟ್ಟಿದ್ದ ಬಿಸಿಸಿಐ, ಭಾರತ-ಪಾಕ್ ಪಂದ್ಯಕ್ಕೆ ಮುನ್ನ ಅಹಮದಾಬಾದ್ನಲ್ಲಿ ವಿಶೇಷ ಸಮಾರಂಭ ನಡೆಸಲಿದ್ದು, ಖ್ಯಾತ ಗಾಯಕ ಅರ್ಜಿತ್ ಸಿಂಗ್ ಗಾನಸುಧೆ ಹರಿಸಲಿದ್ದಾರೆ. ಪಂದ್ಯ ಮಧ್ಯಾಹ್ನ 2ರಿಂದ ನಡೆಯಲಿದ್ದರೆ, ಅದಕ್ಕೆ ಮುನ್ನ ಮಧ್ಯಾಹ್ನ 12.30ರಿಂದ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ.