ಮುಂಬೈ: ಆಮೀರ್ ಖಾನ್ ಮಗ ಜುನೈದ್ ಖಾನ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿ ಎಂಬ ಸುದ್ದಿಯೊಂದು ಈ ವರ್ಷದ ಆರಂಭದಲ್ಲೇ ಕೇಳಿಬಂದಿತ್ತು. ಚಿತ್ರಕ್ಕೆ ‘ಮಹಾರಾಜ’ ಎಂಬ ಹೆಸರನ್ನು ಇಡಲಾಗಿದ್ದು, ಇವತ್ತಿನಿಂದಲೇ ಮುಂಬೈನಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆಯಂತೆ.
ಇದನ್ನೂ ಓದಿ: ಸಿನಿಮಾದಲ್ಲಿ ರೋಹಿಣಿ ಸಿಂಧೂರಿ! ಲಾಕ್ಡೌನ್ ನಂತರ ಸೆಟ್ಟೇರಲಿದೆ ಬಯೋಪಿಕ್ ‘ಭಾರತ ಸಿಂಧೂರಿ’
ಹೌದು, ಮಹಾರಾಷ್ಟ್ರದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದ್ದು, ‘ಮಹಾರಾಜ’ ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ಪ್ರಾರಂಭವಾಗಿದೆ. ಈ ಮೂಲಕ, ಲಾಕ್ಡೌನ್ ನಂತರ ಚಿತ್ರೀಕರಣ ಪ್ರಾರಂಭವಾದ ಮೊದಲ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮುಂಬೈನ ಮರೋಲ್ನಲ್ಲಿ ಚಿತ್ರಕ್ಕಾಗಿಯೇ ವಿಶೇಷ ಸೆಟ್ ನಿರ್ಮಾಣ ಮಾಡಲಾಗಿದ್ದು, ಅಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆ. ಚಿತ್ರತಂಡದ ಸುಮಾರು 150 ಮಂದಿ ಇತ್ತೀಚೆಗೆ ಕರೊನಾ ಟೆಸ್ಟ್ ಮಾಡಿಸಿಕೊಂಡು, ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಯಾರಿಗೂ ಏನೂ ಆಗದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಚಿತ್ರೀಕರಣ ಮಾಡಲಾಗುತ್ತಿದೆಯಂತೆ.
ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ ಕೆಜಿಎಫ್ ನಿರ್ದೇಶಕ; ಇದೇನು ನಾಚಿಕೇನಾ? ಭಯಾನಾ? ಎಂದು ಪ್ರಶ್ನಿಸ್ತಿದಾರೆ ಅಭಿಮಾನಿಗಳು
1862ರಲ್ಲಿ ನಡೆದ ಒಂದು ನೈಜ ಘಟನೆಯನ್ನಾಧರಿಸಿ ಈ ಚಿತ್ರ ಮಾಡಲಾಗುತ್ತಿದೆಯಂತೆ. ಜುನೈದ್ ಈ ಚಿತ್ರದಲ್ಲಿ ಪತ್ರಕರ್ತ ಕರ್ಸನ್ದಾಸ್ ಮುಲ್ಜಿ ಪಾತ್ರ ಮಾಡುತ್ತಿದ್ದು, ‘ಅರ್ಜುನ್ ರೆಡ್ಡಿ’ ನಾಯಕಿ ಶಾಲಿನಿ ಪಾಂಡೆ, ಜೈದೀಪ್ ಅಹ್ಲುವಾಲಿಯಾ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಯಶ್ರಾಜ್ ಫಿಲಂಸ್ ನಿರ್ಮಾಣದ ಈ ಚಿತ್ರವನ್ನು ಸಿದ್ಧಾರ್ಥ್ ಮಲ್ಹೋತ್ರಾ ನಿರ್ದೇಶನ ಮಾಡುತ್ತಿದ್ದಾರೆ.
24 ಗಂಟೆ ಕ್ಯಾಮೆರಾ ಮುಂದಿರೋಕೆ ಇಷ್ಟ ಇಲ್ಲ … ‘ಬಿಗ್ ಬಾಸ್’ಗೆ ನೋ ಎಂದ ಭೂಮಿಕಾ