More

    ಹೆಲಿಕಾಪ್ಟರ್​ ದುರಂತದಲ್ಲಿ ಹುತಾತ್ಮರಾದವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಅಪಘಾತ!

    ತಮಿಳುನಾಡು: ನಿನ್ನೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಅದರಲ್ಲಿದ್ದ ಸೇನಾ ಮುಖ್ಯಸ್ಥರು ಸೇರಿ 13 ಮಂದಿ ಮೃತಪಟ್ಟಿದ್ದ ದೊಡ್ಡ ಆಘಾತದ ಸುದ್ದಿಯ ಬೆನ್ನಿಗೇ ಈಗ ಮತ್ತೊಂದು ಬೇಸರದ ಸುದ್ದಿ ಕೇಳಿ ಬಂದಿದೆ.

    ಹೆಲಿಕಾಪ್ಟರ್​ ದುರಂತದಲ್ಲಿ ಸಾವಿಗೀಡಾದ 13 ಮಂದಿಯ ಪೈಕಿ ಒಬ್ಬರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ ಅಪಘಾತಕ್ಕೀಡಾಗಿದೆ. ತಮಿಳುನಾಡಿನ ಮೆಟ್ಟುಪಾಳ್ಯಂ ಬಳಿ ಈ ಅಪಘಾತ ಸಂಭವಿಸಿದೆ.

    ಇದನ್ನೂ ಓದಿ: ವೈಡ್ ಬಾಲ್​ಗೆ ತಲೆ ಕೆಳಗಾದ ಅಂಪೈರ್​!; ಅಷ್ಟಕ್ಕೂ ಆಗಿದ್ದೇನು..?

    ಸುಲೂರ್​ ಏರ್​ಫೋರ್ಸ್​ ಬೇಸ್​ಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯುವಾಗ ಈ ಅಪಘಾತ ಸಂಭವಿಸಿದೆ. ಬಳಿಕ ಇನ್ನೊಂದು ಆ್ಯಂಬುಲೆನ್ಸ್​ಗೆ ಪಾರ್ಥಿವ ಶರೀರವನ್ನು ಸ್ಥಳಾಂತರಿಸಿ ತೆಗೆದುಕೊಂಡು ಹೋಗಲಾಗಿದೆ.

    26 ಮಕ್ಕಳಿದ್ದ ಶಾಲಾ ಬಸ್​ ಅಪಘಾತ; ದಾರಿ ತಪ್ಪಿ ಹೊಲದ ಏರಿಗೆ ಡಿಕ್ಕಿ ಹೊಡೆದ ಬಸ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts