ತಮಿಳುನಾಡು: ನಿನ್ನೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಅದರಲ್ಲಿದ್ದ ಸೇನಾ ಮುಖ್ಯಸ್ಥರು ಸೇರಿ 13 ಮಂದಿ ಮೃತಪಟ್ಟಿದ್ದ ದೊಡ್ಡ ಆಘಾತದ ಸುದ್ದಿಯ ಬೆನ್ನಿಗೇ ಈಗ ಮತ್ತೊಂದು ಬೇಸರದ ಸುದ್ದಿ ಕೇಳಿ ಬಂದಿದೆ.
ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾದ 13 ಮಂದಿಯ ಪೈಕಿ ಒಬ್ಬರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ ಅಪಘಾತಕ್ಕೀಡಾಗಿದೆ. ತಮಿಳುನಾಡಿನ ಮೆಟ್ಟುಪಾಳ್ಯಂ ಬಳಿ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ವೈಡ್ ಬಾಲ್ಗೆ ತಲೆ ಕೆಳಗಾದ ಅಂಪೈರ್!; ಅಷ್ಟಕ್ಕೂ ಆಗಿದ್ದೇನು..?
ಸುಲೂರ್ ಏರ್ಫೋರ್ಸ್ ಬೇಸ್ಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯುವಾಗ ಈ ಅಪಘಾತ ಸಂಭವಿಸಿದೆ. ಬಳಿಕ ಇನ್ನೊಂದು ಆ್ಯಂಬುಲೆನ್ಸ್ಗೆ ಪಾರ್ಥಿವ ಶರೀರವನ್ನು ಸ್ಥಳಾಂತರಿಸಿ ತೆಗೆದುಕೊಂಡು ಹೋಗಲಾಗಿದೆ.
26 ಮಕ್ಕಳಿದ್ದ ಶಾಲಾ ಬಸ್ ಅಪಘಾತ; ದಾರಿ ತಪ್ಪಿ ಹೊಲದ ಏರಿಗೆ ಡಿಕ್ಕಿ ಹೊಡೆದ ಬಸ್…