More

    ಅಂಬಿಕಾ ಟು ಪ್ರಿಯಾ ಭವಾನಿ ಶಂಕರ್​… ಏನಿದು ಫಾರ್ಮ್​ಹೌಸ್​ ರಹಸ್ಯ? ಸಂಚಲನ ಸೃಷ್ಟಿಸಿದ ನಟನ ಹೇಳಿಕೆ

    ಚೆನ್ನೈ: ವಡಿವೇಲು ಅವರು ತಮಿಳು ಸಿನಿಮಾ ರಂಗದ ಖ್ಯಾತ ಹಾಸ್ಯ ಕಲಾವಿದ. ಕಳೆದ ವರ್ಷ ಜೂನ್​ ತಿಂಗಳಲ್ಲಿ ತೆರೆಕಂಡ ಮಾಮನ್ನನ್​ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿಯೂ ನಟಿಸಿದ್ದಾರೆ. ಇವರು ಒಂದು ಕಾಲದಲ್ಲಿ ತಮಿಳು ಹಾಸ್ಯಲೋಕದ ಅಧಿಪತಿಯಾಗಿದ್ದರು. ವಡಿವೇಲು ಇದ್ದರೆ ಆ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂಬ ಮಾತಿತ್ತು. ಅಷ್ಟರಮಟ್ಟಿಗೆ ವಡಿವೇಲು ತಮಿಳು ಸಿನಿಮಾ ರಂಗವನ್ನು ಆವರಿಸಿಕೊಂಡಿದ್ದರು.

    ಇದೀಗ ವಡಿವೇಲು ವಿರುದ್ಧ ಕಾಲಿವುಡ್​ ನಟ ಹಾಗೂ ಹಿರಿಯ ಪತ್ರಕರ್ತ ಬೈಲ್ವಾನ್ ರಂಗನಾಥನ್ ಕೆಲವೊಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ರಂಗನಾಥನ್​ ಆಡಿರುವ ಮಾತುಗಳು ವಡಿವೇಲು ಅಭಿಮಾನಿಗಳ ಮನಸ್ಸಿಗೆ ಘಾಸಿ ಉಂಟುಮಾಡಿದೆ.

    ಅಂದಹಾಗೆ ಈ ಬೈಲ್ವಾನ್ ರಂಗನಾಥನ್ ಕಳೆದ ಕೆಲ ವರ್ಷಗಳಿಂದ ತಮ್ಮ ಯೂಟ್ಯೂಬ್​ ಚಾನೆಲ್​ ಮೂಲಕ ನಟ ಹಾಗೂ ನಟಿಯರನ್ನು ಗುರಿಯಾಗಿರಿಸಿಕೊಂಡು ಅವರ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡುವ ಮೂಲಕ ಭಾರೀ ಸುದ್ದಿಯಾಗುತ್ತಿರುವುದಲ್ಲದೆ ಕಲಾವಿದರ ಆಕ್ರೋಶಕ್ಕೂ ಕಾರಣವಾಗಿದ್ದಾರೆ. ಅನೇಕ ಕಲಾವಿದರು ರಂಗನಾಥನ್​ ವಿರುದ್ಧ ತಮ್ಮ ಧ್ವನಿ ಕೂಡ ಎತ್ತಿದ್ದಾರೆ. ಅದರಲ್ಲೂ ನಟಿಯರೇ ಹೆಚ್ಚು. ಆದರೆ, ಈಗ ರಂಗನಾಥ್​ ಕಣ್ಣು ವಡಿವೇಲು ಮೇಲೆ ಬಿದ್ದಿದ್ದು ಅವರ ಬಗ್ಗೆ ಶಾಕಿಂಗ್​ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

    ವಡಿವೇಲು ಅವರು ತಮಗೆ ಬೇಕಾದ ಸಹ ನಟಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರಂತೆ. ತಮಿಳುನಾಡಿನ ಖ್ಯಾತ ಹಿರಿಯ ನಟ ರಾಜ್​ಕಿರಣ್​ ಅವರು ವಡಿವೇಲು ಅವರನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಿದರು. ಆರಂಭದಲ್ಲಿ ವಡಿವೇಲು ಎಲ್ಲರಿಗೂ ಟೀ, ಕಾಫಿ ಕೊಡುವ ಕೆಲಸ ಮಾಡುತ್ತಿದ್ದರು. ರಾಜ್​ಕಿರಣ್​ ಅಭಿನಯದ ಎನ್​ ರಾಸವಿನ್​ ಮನಸಿಲೆ ಚಿತ್ರದ ಮೂಲಕ ತಮಿಳು ಚಿತ್ರರಂಗವನ್ನು ವಡಿವೇಲು ಪ್ರವೇಶ ಮಾಡಿದರು.

    ತಮ್ಮ ವಿಶೇಷ ಹಾಸ್ಯ ಪ್ರತಿಭೆ ಮೂಲಕವೇ ಮೊದಲ ಚಿತ್ರದಲ್ಲೇ ವಡಿವೇಲು ಎಲ್ಲರ ಗಮನ ಸೆಳೆದರು. ಬಳಿಕ ಸಾಲು ಸಾಲು ಸಿನಿಗಳಲ್ಲಿ ನಟಿಸಿದರು. ವಿಜಯ್​ಕಾಂತ್​, ರಜಿನಿಕಾಂತ್​, ಶರತ್​ಕುಮಾರ್​, ವಿಜಯ್​, ಸೂರ್ಯ, ವಿಕ್ರಮ್​ ಸೇರಿದಂತೆ ಸ್ಟಾರ್​ ನಟರ ಜತೆ ನಟಿಸಿದರು. ಅವರು ನಟಿಸಿದ ಬಹುತೇಕ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದರಿಂದ ವಡಿವೇಲು ಅವರಿಗೆ ಸ್ಟಾರ್​ ಪಟ್ಟವು ಸಿಕ್ಕಿತು. ಒಂದು ಕಾಲದಲ್ಲಿ ನಟರ ಸಮಾನಕ್ಕೆ ವಡಿವೇಲು ಸಂಭಾವನೆ ಪಡೆಯುತ್ತಿದ್ದರು.

    ಯಾವಾಗ ವಡಿವೇಲು ಅವರಿಗೆ ಸ್ಟಾರ್​ ಪಟ್ಟ ಸಿಕ್ಕಿತೋ ಆಗ ತಮಗೆ ಬೇಕಾದ ನಟಿಯರಿಗೆ ಅವಕಾಶ ನೀಡುತ್ತಿದ್ದರು. ಎರಡು ಸಿನಿಮಾಗೆ ಅವಕಾಶ ಕೊಟ್ಟ ಬಳಿಕ ಆ ನಟಿಗೆ ಮತ್ತೆ ಅವಕಾಶ ನೀಡುತ್ತಿರಲಿಲ್ಲ ಎಂದು ಬೈಲ್ವಾನ್​ ರಂಗನಾಥನ್​ ಹೇಳಿದ್ದಾರೆ. ಸುವರ್ಣ ಮ್ಯಾಥಿವ್ಸ್​ ಅವರಿಗೆ ಚಂದ್ರಮುಖಿ ಸಿನಿಮಾದಲ್ಲಿ ಅವಕಾಶ ನೀಡಿದರು. ಅದೇ ರೀತಿ ನಟಿ ಸೋನಾ ಪರ ವಡಿವೇಲು ಶಿಫಾರಸು ಮಾಡಿದರು ಮತ್ತು ಅನೇಕ ಸಿನಿಮಾಗಳಲ್ಲಿ ಸೋನಾ ಸಖತ್​ ಹಾಟ್​ ಆಗಿ ನಟಿಸಿದ್ದಾರೆ ಎಂದರು.

    ನಟಿ ಅಂಬಿಕಾ ಅವರ ಸಿನಿ ಮಾರ್ಕೆಟ್​ ಸಂಪೂರ್ಣ ಬಿದ್ದು ಹೋಗಿದ್ದ ಸಂದರ್ಭದಲ್ಲಿ ಸ್ವತಃ ಅಂಬಿಕಾ ಅವರೇ ವಡಿವೇಲು ಬಳಿ ಅವಕಾಶವನ್ನು ಕೇಳಿದ್ದರು. ಎರಡು ಸಿನಿಮಾಗಳಲ್ಲಿ ಅಂಬಿಕಾಗೂ ಅವಕಾಶ ನೀಡಿದ್ದಾರೆ. ಕೋವೈ ಸರಳಾಗೂ ವಡಿವೇಲು ಅವಕಾಶ ನೀಡಿದರು. ಇಂದಿಗೂ ಕೋವೈ ಸರಳಾ ಮದುವೆಯಾಗದೇ ಇರುವುದಕ್ಕೆ ವಡಿವೇಲು ಅವರೇ ಕಾರಣ ಎಂದು ಬೈಲ್ವಾನ್​ ರಂಗನಾಥನ್​ ಹೇಳಿದ್ದಾರೆ.

    ನಟಿ ಶ್ರೇಯಾ ಚರಣ್​, ಸದಾ ಮುಮ್ತಾಜ್​ ಸೇರಿದಂತೆ ಕೆಲವು ನಟಿಯರಿಗೆ ವಡಿವೇಲು ಅವಕಾಶ ನೀಡಿದ್ದಾರೆ. ಅದೇ ರೀತಿ ಚೆನ್ನೈನ ಇಸಿಆರ್​ನಲ್ಲಿರುವ ಫಾರ್ಮ್​ ಹೌಸ್​ಗೆ ನಟಿಯರನ್ನು ವಡಿವೇಲು ಆಹ್ವಾನಿಸಿದ್ದಾರೆ. ಈ ಲೀಸ್ಟಿನಲ್ಲಿ ಇತ್ತೀಚಿನ ನಟಿಯರಾದ ಪ್ರಿಯಾ ಶಂಕರ್​ ಭವಾನಿ ಮತ್ತು ಶಿವಾನಿ ಕೂಡ ಇದಾರೆ. ಗಮನಾರ್ಹ ಸಂಗತಿ ಏನೆಂದರೆ, ಇತ್ತೀಚೆಗಷ್ಟೇ ಪ್ರಿಯಾ ಭವಾನಿ ಶಂಕರ್​ ಇಸಿಆರ್​ ಪ್ರದೇಶದಲ್ಲಿ ಭಾರಿ ಮೊತ್ತದ ಹಣ ನೀಡಿ ಮನೆ ಖರೀದಿ ಮಾಡಿ ನೆಲೆಸಿದ್ದಾರೆ ಎಂದು ಬೈಲ್ವಾನ್​ ರಂಗನಾಥನ್​ ಹೇಳಿದ್ದಾರೆ. (ಏಜೆನ್ಸೀಸ್​)

    ಎಂಬಿಬಿಎಸ್​ ಮುಗಿಸಬೇಕಾದ್ರೆ ಹಾಸ್ಟೆಲ್​ನಲ್ಲಿ ಹುಡುಗರ ಜತೆ ಇರಬೇಕಂತೆ! ವಿದೇಶದಲ್ಲಿ ಭಾರತೀಯ ಯುವತಿಯ ಕಣ್ಣೀರು

    ಲೋಕಸಭೆ ಚುನಾವಣೆ ಟಿಕೆಟ್​​ಗಾಗಿ ರಾತ್ರೋರಾತ್ರಿ ಹುಡುಗಿ ನೋಡಿ ಮದುವೆಯಾದ ಗ್ಯಾಂಗ್​​ಸ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts