ಬೆಂಗಳೂರು: ಮಳೆಗಾಲದಲ್ಲಿ ರಾಜ್ಯಾದ್ಯಂತ ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತಗೊಳ್ಳುವುದು ಸಾಮಾನ್ಯ. ಅದರಲ್ಲೂ ಈ ಥರದ ಸಮಸ್ಯೆಗಳು ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಸರ್ವೇಸಾಮಾನ್ಯ. ಇದೀಗ ಹೊರನಾಡು ದೇವಸ್ಥಾನದ ಭಕ್ತರಿಗೂ ಇಂಥ ಒಂದು ಅಡಚಣೆ ಎದುರಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತಲುಪಲು ಎರಡು ಮಾರ್ಗಗಳಿದ್ದು, ಆ ಪೈಕಿ ಒಂದು ಮಾರ್ಗ ಮಳೆಯ ಕಾರಣದಿಂದ ಮುಚ್ಚಲ್ಪಟ್ಟಿದೆ. ಹೀಗಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಕಳಸ ಮತ್ತು ಹೊರನಾಡು ಸಂಪರ್ಕಿಸುವ ಸೇತುವೆ ಮಳೆಯ ಕಾರಣದಿಂದ ಮುಳುಗಡೆ ಆಗಿದ್ದು, ಈ ಮಾರ್ಗವಾಗಿ ಹೊರನಾಡು ತಲುಪುವವರಿಗೆ ಬದಲಿ ಮಾರ್ಗವನ್ನು ಸೂಚಿಸಲಾಗಿದೆ. ಜನರು ಕಳಸ-ಹಳುವಳ್ಳಿ ಮಾರ್ಗದ ಮೂಲಕ ಹೊರನಾಡನ್ನು ತಲುಪಬಹುದು.
ಜನಪ್ರತಿನಿಧಿಗಳನ್ನು ಪ್ರಶ್ನಿಸಲಾರಂಭಿಸಿದ ಸಾರ್ವಜನಿಕರು; ಇಂದು ಮತ್ತೊಬ್ಬ ಶಾಸಕರನ್ನು ತರಾಟೆಗೆ ತಗೊಂಡ ಜನರು..