More

    ಎಲ್ಲರೂ ತಪ್ಪದೆ ಮತ ಚಲಾಯಿಸಿ

    ಕೊಕಟನೂರ: ಪ್ರತಿಯೊಬ್ಬರೂ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ತಪ್ಪದೆ ಚಲಾಯಿಸಬೇಕು ಎಂದು ಕಟಗೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜ ಬಳೋಜ ಹೇಳಿದರು.

    ಕಟಗೇರಿ ಗ್ರಾಮದಲ್ಲಿ ಜಿಪಂ ಬೆಳಗಾವಿ, ತಾಪಂ ಅಥಣಿ, ಗ್ರಾಪಂ ಕಟಗೇರಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್-19 ಸುರಕ್ಷತಾ ಕ್ರಮ ಪಾಲಿಸುವುದರ ಜತೆಗೆ ಪಕ್ಷ ರಹಿತವಾಗಿ ಸಂವಿಧಾನ ಬದ್ಧವಾದ ಮತದಾನವನ್ನು ಮಾರಿಕೊಳ್ಳದೇ ಯುವಜನರು ಮತದಾನ ಮಾಡಬೇಕು ಎಂದು ಅವರು ಸಲಹೆ ನೀಡಿದರು.

    ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತದಾನದ ಜಾಗೃತಿ ಮೂಡಿಸಿದರು. ವೈಶಾಲಿ ಅನಂತಪುರ, ಲಕ್ಕಪ್ಪ ಘಟನಟ್ಟಿ, ಮಹಾಂತೇಶ ಸಂಕೇಶ್ವರ, ಅಶೋಕ ಮರೇಗುದ್ದಿ, ಮಲ್ಲಯ್ಯ ಮಠಪತಿ, ಅಸ್ಲಾಂ ಕುಡಚಿ, ಬಿ.ಐ ಮಠಪತಿ, ಗಂಗಾ ಪಾಟೀಲ, ಜಿ.ಆರ್. ಆಲಕನೂರ, ಎಸ್.ಎಸ್.ಬದ್ರಣ್ಣವರ, ಬಿ.ಎ ಬಳವಾಡ, ಎಸ್.ಜಿ. ಪೂಜಾರಿ ಇದ್ದರು.

    ನಂದೇಶ್ವರ ವರದಿ: ಪ್ರತಿಯೊಬ್ಬರೂ ತಪ್ಪದೇ ಮತದಾನದ ಹಕ್ಕು ಚಲಾಯಿಸಬೇಕು ಎಂದು ತಾಪಂ ಇಒ ರವೀಂದ್ರ ಬಂಗಾರೆಪ್ಪನವರ ಹೇಳಿದ್ದಾರೆ. ಸಮೀಪದ ಸತ್ತಿ, ರಡ್ಡೇರಹಟ್ಟಿ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗ್ರತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತಕ್ಷೇತ್ರಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಿಡಿಒ ಬಿ.ಎಸ್.ಹಿರೇಮಠ, ವಿನಾಯಕ ಹಾಲಳ್ಳಿ, ವಿವೇಕ ಮಠದ, ಜಿ.ಎನ್.ಪೂಜಾರಿ, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts