ಬೆಳಗಾವಿ: ಕರೊನಾ ಸೋಂಕಿತರಿಗೆ ವೆಂಟಿಲೇಟರ್ ಬದಲಾಗಿ ಸುಲಭ ಚಿಕಿತ್ಸೆ ನೀಡಬಹುದಾದ ಹೈ ಪ್ರೊ ನೇಸಲ್ ಕೆನಲ್ ಆಕ್ಸಿಜನ್ ಸಿಲಿಂಡರ್ಗಳನ್ನು ಎಲ್ಲ ಶಾಸಕರು ಸರ್ಕಾರಿ ಆಸ್ಪತ್ರೆಗೆ ನೀಡಬೇಕು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಜರುಗಿದ ಸರಳ ಕಾರ್ಯಕ್ರಮದಲ್ಲಿ 4 ಹೈ ಪ್ರೊ ನೇಸಲ್ ಕೆನಲ್ ಆಕ್ಸಿಜನ್ ಸಿಲಿಂಡರ್ಗಳನ್ನು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್್ಸ) ಆಸ್ಪತ್ರೆಗೆ ಹಸ್ತಾಂತರಿಸಿ ಮಾತನಾಡಿದರು.
ಇದನ್ನೂ ಓದಿ: ಶಾಲಾ- ಕಾಲೇಜು ಮತ್ತೆ ಬಂದ್; ಫ್ಯಾನ್ ಬಳಕೆಗೂ ನಿರ್ಬಂಧ ವಿಧಿಸಿದೆ ಈ ದೇಶ…!
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮೊದಲ ಬಾರಿಗೆ ತಮ್ಮ ಅನುದಾನದಲ್ಲಿ ಈ ಉಪಕರಣ ನೀಡಿ ಅನುಕೂಲ ಕಲ್ಪಿಸಿದ್ದಾರೆ. ಇದೇ ರೀತಿ ಇನ್ನುಳಿದ ಶಾಸಕರೂ ಇಂಥ ಆಕ್ಸಿಜನ್ ಸಿಲಿಂಡರ್ ನೀಡಬೇಕು. ಅದಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಲಾಗುವುದು ಎಂದರು.
ಕೇರಳ ಸಚಿವಾಲಯದ ಬೆಂಕಿಯಲ್ಲಿ ಸುಟ್ಟು ಹೋದವೇ ಚಿನ್ನ ಕಳ್ಳ ಸಾಗಾಟದ ದಾಖಲೆಗಳು? ವಿಪಕ್ಷಗಳು ಹೇಳೋದೇನು?