ಮುಂಬೈ: ಬಾಲಿವುಡ್ನ ಸ್ಟಾರ್ ನಟ ನಟಿಯರಲ್ಲಿ ಆಗಿದ್ದಾಂಗೆ ಸಣ್ಣ ಪುಟ್ಟ ಜಗಳಗಳು ನಡೆಯುತ್ತಿರುತ್ತವೆ. ಆದರೆ ಸದಾ ಬೇರೆಯವರ ಕಾಲೆಳೆಯುವದಕ್ಕೇ ಕಾಯುವ ರಂಗೋಲಿ ಚಾಂದೇಲ್ ಮತ್ತು ಆಲಿಯಾ ನಡುವಿನ ಒಳಬೇಗುದಿ ಮಾತ್ರ ಸದ್ಯ ಕಡಿಮೆಯಾಗುವಂತೆ ಕಾಣುತ್ತಿಲ್ಲ. ರಂಗೋಲಿ ಚಾಂದೇಲ್ ನೀಡಿರುವ ಹೇಳಿಕೆಗೆ ಆಲಿಯಾ ನೀಡಿರದ ಪ್ರತಿಕ್ರಿಯೆಯನ್ನು ಪ್ರಕಟ ಮಾಡಿರುವ ಕುರಿತಾಗಿ ಆಲಿಯಾ ಮಾಧ್ಯಮದ ಮೇಲೆ ಗರಂ ಆಗಿದ್ದು, ನೀವು ಕಾಲ್ಪನಿಕ ಸಂದರ್ಶನವನ್ನೂ ಮಾಡಲಾರಂಭಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು, ಅದರಲ್ಲಿ ನಟಿ ಕಂಗನಾ ರಾವತ್ ಅವರ ಹೆಸರೂ ಸಹ ಇದೆ. ಪದ್ಮಶ್ರೀ ಪಡೆಯಲಿರುವ ನಟಿಗೆ ಪುಷ್ಪಗುಚ್ಛ ಕಳುಹಿಸಿ, ಶುಭ ಹಾರೈಸಿದ್ದರು ಆಲಿಯಾ. ಆದರೆ ಈ ಕುರಿತಾಗಿ ಟ್ವೀಟ್ ಮಾಡಿದ್ದ ಕಂಗನಾ ಸಹೋದರಿ ರಂಗೋಲಿ, ಇಲ್ಲಿ ನೋಡಿ ಆಲಿಯಾ ಕೂಡ ಹೂಗುಚ್ಛ ಕಳಿಸಿದ್ದಾರೆ. ಕಂಗನಾಗೆ ಹೇಗೆನಿಸಿತೋ ತಿಳಿದಿಲ್ಲ ಆದರೆ ನನಗಂತೂ ಇದರಿಂದ ಬಹಳ ಮಜವೆನಿಸುತ್ತಿದೆ ಎಂದು ಹೇಳಿದ್ದರು.
ಈ ವಿಚಾರವಾಗಿ ಆಲಿಯಾ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಬಾಲಿವುಡ್ನ ಸುದ್ದಿಗಳನ್ನು ಪ್ರಕಟಿಸುವ ಪಿಂಕ್ವಿಲ್ಲಾ ಹೆಸರಿನ ವೆಬ್ಸೈಟ್ ಆಲಿಯಾ ಈ ವಿಚಾರವಾಗಿ, ಅವರು ಏನಾದರೂ ಎಂದುಕೊಳ್ಳಲಿ ಎಂದು ಹೇಳಿದ್ದಾರೆ ಎಂದು ಇನ್ಸ್ಟಾಗ್ರಾಂನಲ್ಲಿ ಹಾಕಿತ್ತು. ಇದನ್ನು ಕಂಡು ಕೋಪಗೊಂಡಿರುವ ಆಲಿಯಾ, ಪಿಂಕ್ವಿಲ್ಲಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೀತಿಯಲ್ಲಿ ನಾನು ನಿಮಗೆ ಯಾವಾಗ ಹೇಳಿದೆ? ಯಾರಿಗೆ ಹೇಳಿದೆ? ಕಾಲ್ಪನಿಕ ಪತ್ರಕರ್ತರೊಬ್ಬರಿಗೆ ಈ ರೀತಿಯಲ್ಲಿ ನಾನು ಯಾವಾಗ ಹೇಳಿದೆ ಎನ್ನುವುದನ್ನು ನನಗೆ ತಿಳುಹಿಸಿಕೊಡಿ. ಬಹುಶಃ ನೀವು ಕಾಲ್ಪನಿಕ ಸಂದರ್ಶನಗಳನ್ನೂ ಸಹ ಮಾಡುತ್ತಿರಬೇಕು ಎಂದು ಹೇಳಿದ್ದಾರೆ.
ರಂಗೋಲಿ ಚಾಂದೇಲ್ ಇದೇ ಮೊದಲು ಕಂಗನಾ ಅವರನ್ನು ಹೀಯಾಳಿಸುವಂತಹ ಪೋಸ್ಟ್ ಮಾಡಿರುವುದಲ್ಲ. ಕಳೆದ ವರ್ಷ ಗಲ್ಲಿ ಬಾಯ್ ಸಿನಿಮಾ ಬಿಡುಗಡೆಗೊಂಡಾಗ ಕಂಗನಾ ಹಾಗೂ ರಂಗೋಲಿ ಇಬ್ಬರೂ ಸೇರಿ ಆಲಿಯಾ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಕೇವಲ ಆಲಿಯಾ ಮಾತ್ರವಲ್ಲದೆ ಬಾಲಿವುಡ್ನ ಅನೇಕ ಸ್ಟಾರ್ಗಳ ಕುರಿತಾಗಿ ರಂಗೋಲಿ ಟ್ವಿಟ್ಟರ್ನಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. (ಏಜೆನ್ಸೀಸ್)