ಅಳವಂಡಿ: ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಇಂಜಿನಿಯರ್ ಹಾಗೂ ಕಟ್ಟಡ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ ಸ್ಥಳೀಯ ಅಧ್ಯಕ್ಷ ನಾಗಪ್ಪ ಬಿಕನಳ್ಳಿ ಹೇಳಿದರು.
ಬಿಸರಳ್ಳಿಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಇಂಜಿನಿಯರ್ಸ್ ದಿನದ ಅಂಗವಾಗಿ ಏರ್ಪಡಿಸಿದ್ದ ಸರ್ ಎಂ.ವಿ. ಭಾವಚಿತ್ರಕ್ಕೆ ಪೂಜೆ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಉತ್ತಮ ಕಟ್ಟಡಗಳು ದೇಶದ ಅಭಿವೃದ್ಧಿಯ ಸಂಕೇತಗಳಾಗಿದ್ದು, ಕಾರ್ಮಿಕರ ಕೌಶಲವೂ ಬಹಳ ಮುಖ್ಯವಾಗಿದೆ. ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚು ಬಾಳಿಕೆ ಬರುವಂತಹ ಕಟ್ಟಡ ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದರು.
ಪ್ರಮುಖರಾದ ಮಹಾಂತೇಶ ಗಂಡಳ್ಳಿ, ಭರಮಪ್ಪ ದೊಡ್ಡಮನಿ, ಉಮೇಶ ಬಿಕನಳ್ಳಿ, ಬಾಬುಸಾಬ್ ಕವಲೂರು, ದೇವಪ್ಪ ಕಳ್ಳಿ, ಮೌಲಾಸಾಬ್ ಮಕಾಂದರ್, ಮಲ್ಲಪ್ಪ ಕುರದಗಡ್ಡಿ, ದಾದಾಸಾಹೇಬ್ ಮಕಾಂದರ್, ಹನುಮಪ್ಪ ಬಾರಕೇರ, ಮಾಬುಸಾಬ್ ಇತರರಿದ್ದರು.