ಮುಂಬೈ: ಲಾಕ್ಡೌನ್ ತೆರವಾಗುತ್ತಿದ್ದಂತೆಯೇ, ಅಕ್ಷಯ್ ಕುಮಾರ್ ತಮ್ಮ ತಂಡದೊಂದಿಗೆ ಸ್ಕಾಟ್ಲ್ಯಾಂಡ್ಗೆ ಹೋಗಿ ‘ಬೆಲ್ ಬಾಟಮ್’ ಚಿತ್ರದ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿ ಬಂದಿದ್ದಾರೆ. ಮುಂದೇನು ಎಂಬ ಪ್ರಶ್ನೆಯೇ ಇಲ್ಲ. ಅಕ್ಷಯ್ ಇದೀಗ ‘ಪೃಥ್ವಿರಾಜ್’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ: ಕಿರುತೆರೆಯ ‘ಸೀತೆ’ ಬೆಳ್ಳಿತೆರೆಗೆ
ಪೃಥ್ವಿರಾಜ್ ಚೌಹಾನ್ ಕುರಿತು ಡಾ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶಿಸುತ್ತಿರುವ ಸಿನಿಮಾ ‘ಪೃಥ್ವಿರಾಜ್’. ಯಶ್ರಾಜ್ ಫಿಲಂಸ್ನಡಿ ಆದಿತ್ಯ ಚೋಪ್ರಾ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಮುಗಿದು, ದೀಪಾವಳಿಗೆ ಚಿತ್ರ ಬಿಡುಗಡೆಯಾಗಬೇಕಿತ್ತು.
ಆದರೆ, ಲಾಕ್ಡೌನ್ನಿಂದಾಗಿ ಚಿತ್ರತಂಡದ ಪ್ಲಾನ್ಗಳೆಲ್ಲಾ ತಲೆಕೆಳಗಾದವು. ಇದೀಗ ಶನಿವಾರದಿಂದ ಚಿತ್ರೀಕರಣ ಪ್ರಾರಂಭವಾಗಿದ್ದು, ಮುಂಬೈನ ಯಶ್ರಾಜ್ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ವಿಶೇಷ ಸೆಟ್ಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಜಗ್ಗೇಶ್ ಅವರನ್ನು ನೆನಪಿಸಿಕೊಂಡ ನಟಿ ಮೇಘನಾ; ಕಾರಣ…
ಈ ಹಂತದ ಚಿತ್ರೀಕರಣದಲ್ಲಿ ಅಕ್ಷಯ್ ಕುಮಾರ್ ಜತೆಗೆ ಸೋನು ಸೂದ್ ಸಹ ಭಾಗವಹಿಸಿದ್ದಾರಂತೆ. ಇನ್ನು ಅಕ್ಟೋಬರ್ 13ರ ನಂತರ ಮಾನುಷಿ ಚಿಲ್ಲರ್ ಚಿತ್ರತಂಡ ಸೇರ್ಪಡೆಯಾಗಲಿದ್ದು, ದೀಪಾವಳಿ ನಂತರ ಸಂಜಯ್ ದತ್ ಸಹ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.