More

    ‘ಬೆಲ್​ ಬಾಟಮ್​’ ಮುಗೀತು; ‘ಪೃಥ್ವಿರಾಜ್​’ ಆದ ಅಕ್ಷಯ್​ …

    ಮುಂಬೈ: ಲಾಕ್​ಡೌನ್​ ತೆರವಾಗುತ್ತಿದ್ದಂತೆಯೇ, ಅಕ್ಷಯ್​ ಕುಮಾರ್​ ತಮ್ಮ ತಂಡದೊಂದಿಗೆ ಸ್ಕಾಟ್​ಲ್ಯಾಂಡ್​ಗೆ ಹೋಗಿ ‘ಬೆಲ್​ ಬಾಟಮ್​’ ಚಿತ್ರದ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿ ಬಂದಿದ್ದಾರೆ. ಮುಂದೇನು ಎಂಬ ಪ್ರಶ್ನೆಯೇ ಇಲ್ಲ. ಅಕ್ಷಯ್​ ಇದೀಗ ‘ಪೃಥ್ವಿರಾಜ್​’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

    ಇದನ್ನೂ ಓದಿ: ಕಿರುತೆರೆಯ ‘ಸೀತೆ’ ಬೆಳ್ಳಿತೆರೆಗೆ

    ಪೃಥ್ವಿರಾಜ್​ ಚೌಹಾನ್​ ಕುರಿತು ಡಾ. ಚಂದ್ರಪ್ರಕಾಶ್​ ದ್ವಿವೇದಿ ನಿರ್ದೇಶಿಸುತ್ತಿರುವ ಸಿನಿಮಾ ‘ಪೃಥ್ವಿರಾಜ್​’. ಯಶ್​ರಾಜ್​ ಫಿಲಂಸ್​ನಡಿ ಆದಿತ್ಯ ಚೋಪ್ರಾ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಮುಗಿದು, ದೀಪಾವಳಿಗೆ ಚಿತ್ರ ಬಿಡುಗಡೆಯಾಗಬೇಕಿತ್ತು.

    ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರತಂಡದ ಪ್ಲಾನ್​ಗಳೆಲ್ಲಾ ತಲೆಕೆಳಗಾದವು. ಇದೀಗ ಶನಿವಾರದಿಂದ ಚಿತ್ರೀಕರಣ ಪ್ರಾರಂಭವಾಗಿದ್ದು, ಮುಂಬೈನ ಯಶ್​ರಾಜ್​ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ವಿಶೇಷ ಸೆಟ್​ಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆ.

    ಇದನ್ನೂ ಓದಿ: ಅಮೆರಿಕದಲ್ಲಿ ಜಗ್ಗೇಶ್ ಅವ​ರನ್ನು ನೆನಪಿಸಿಕೊಂಡ ನಟಿ ಮೇಘನಾ; ಕಾರಣ…

    ಈ ಹಂತದ ಚಿತ್ರೀಕರಣದಲ್ಲಿ ಅಕ್ಷಯ್​ ಕುಮಾರ್​ ಜತೆಗೆ ಸೋನು ಸೂದ್​ ಸಹ ಭಾಗವಹಿಸಿದ್ದಾರಂತೆ. ಇನ್ನು ಅಕ್ಟೋಬರ್​ 13ರ ನಂತರ ಮಾನುಷಿ ಚಿಲ್ಲರ್ ಚಿತ್ರತಂಡ ಸೇರ್ಪಡೆಯಾಗಲಿದ್ದು, ದೀಪಾವಳಿ ನಂತರ ಸಂಜಯ್​ ದತ್​ ಸಹ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

    ಖ್ಯಾತ ಹಿರಿಯ ಸಂಗೀತ ನಿರ್ದೇಶಕ ರಾಜನ್​ ವಿಧಿವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts