More

    ವಿವಾದದ ಗೂಡಾಯ್ತು ಅಕ್ಷಯ್​ ಕುಮಾರ್ ‘ರಾಮ್​ ಸೇತು’ ಪೋಸ್ಟರ್; ನೆಟ್ಟಿಗರಿಂದ ತರಾಟೆ

    ಮುಂಬೈ: ಲಕ್ಷ್ಮೀ ಚಿತ್ರದ ಯಶಸ್ಸಿನಲ್ಲಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ದೀಪಾವಳಿಗೆ ಅಭಿಮಾನಿಗಳಿಗೆ ಹೊಸ ಉಡುಗೊರೆಯೊಂದನ್ನು ನೀಡಿದ್ದರು. ‘ರಾಮ್‌ಸೇತು’ ಹೆಸರಿನ ಹೊಸ ಸಿನಿಮಾ ಘೋಷಣೆ ಮಾಡಿ ಅದರ ಫಸ್ಟ್ ಲುಕ್ ಪೋಸ್ಟರನ್ನೂ ಅಕ್ಷಯ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಆ ಪೋಸ್ಟರ್​ಗೆ ವಿರೋಧದ ಸುರಿಮಳೆಯನ್ನೇ ನೆಟ್ಟಿಗರು ಸುರಿಸುತ್ತಿದ್ದಾರೆ.

    ಇದನ್ನೂ ಓದಿ: PHOTOS| ಮಗುವಿನಂತೆ ಸಂಭ್ರಮಿಸಿದ ತಲೈವಾ, ದೀಪ ಬೆಳಗಿದ ಪಿಗ್ಗಿ-ಕರೀನಾ

    ‘ರಾಮನ ಆದರ್ಶಗಳನ್ನು ಜೀವಂತವಾಗಿಸುವ ನಿಟ್ಟಿನಲ್ಲಿ ಮತ್ತು ಮುಂದಿನ ತಲೆಮಾರಿಗೆ ಅದನ್ನು ದಾಟಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸೇತುವೆಗಳಾಗೋಣ’ ಎಂದು ಪೋಸ್ಟ್​ ಹಾಕಿ ಬರೆದುಕೊಂಡಿರುವ ಅವರು, ಮಿಥ್​ ವರ್ಸಸ್​ ರಿಯಾಲಿಟಿ ಎಂಬ ಉಪಶೀರ್ಷಿಕೆಯನ್ನೂ ಹಾಕಿದ್ದರು. ಇದೀಗ ಈ ಚಿತ್ರದ ಮೊದಲ ಪೋಸ್ಟರ್​ ವಿವಾದದ ಕೇಂದ್ರಬಿಂದುವಾಗಿದೆ.

    ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಮಂದಿ ಅಕ್ಷಯ್​ ಕುಮಾರ್​ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ‘ದಯಮಾಡಿ ತಾವು ಮತ್ತೊಮ್ಮೆ ರಾಮಾಯಣವನ್ನು ವೀಕ್ಷಿಸಿ’ ಎಂದರೆ, ‘ಧನ್ಯವಾದಗಳು ನಮ್ಮ ಹಿಂದೂಗಳಿಗೆ ನಿಮ್ಮ ಕಲಗಚ್ಚು ಬೇಡ’, ರಾಮ್​ ಎನ್ನಬೇಡ, ಶ್ರೀರಾಮ್​ ಎಂದು ಸಂಬೋಧಿಸು. ಏಕವಚನದಲ್ಲಿ ಮಾತನಾಡೋಕೆ ಶ್ರೀರಾಮ್ ನಿನ್ನ ಗೆಳೆಯನಲ್ಲ’, ‘ನಮಗೆ ನಿಮ್ಮ ಬೋಧನೆ ಬೇಡ’ ಹೀಗೆ ಬಗೆಬಗೆ ರೀತಿಯಲ್ಲಿ ಟ್ರೋಲ್​ ಮಾಡುತ್ತಿದ್ದಾರೆ.

    ಇದನ್ನೂ ಓದಿ: ದೀಪಾವಳಿ ಹಬ್ಬದ ಶುಭಾಶಯ ಹೇಳಿದ ಚಂದನವನದ ಸೆಲೆಬ್ರಿಟಿಗಳು …

    ಈ ಹಿಂದೆ ಶೌಕಿನ್ಸ್ ಸಿನಿಮಾದಲ್ಲಿ ಅಕ್ಷಯ್ ಜತೆಗೆ ಸಿನಿಮಾ ಮಾಡಿದ್ದ ನಿರ್ದೇಶಕ ಅಭಿಷೇಕ್ ಶರ್ಮಾ, ಇದೀಗ ರಾಮ ಸೇತುವೆಯನ್ನೇ ಪ್ರಧಾನವಾಗಿಸಿಕೊಂಡು ಚಿತ್ರ ಮಾಡುತ್ತಿದ್ದಾರೆ. ಅಕ್ಷಯ್ ಕೈಯಲ್ಲಿ ಸದ್ಯ ಮೂರ್ನಾಲ್ಕು ಚಿತ್ರಗಳಿದ್ದು, ಮೊದಲು ‘ಪೃಥ್ವಿರಾಜ್’ ಮುಗಿಸಬೇಕಿದೆ. ಆ ನಂತರ ‘ಅತರಂಗಿ ರೇ’, ‘ಬಚ್ಚನ್ ಪಾಂಡೆ’ ಮತ್ತು ‘ರಕ್ಷಾ ಬಂಧನ್’ ಚಿತ್ರಗಳಲ್ಲಿ ನಟಿಸಬೇಕಿದೆ. ಈ ಚಿತ್ರಗಳ ನಂತರ ‘ರಾಮ್ ಸೇತು’ ಚಿತ್ರದಲ್ಲಿ ಅಕ್ಷಯ್ ನಟಿಸಲಿದ್ದಾರೆ. -(ಏಜೆನ್ಸೀಸ್)

    ರಾಧಾಕೃಷ್ಣ ಅವತಾರದಲ್ಲಿ ‘ಶುಗರ್​ಲೆಸ್’​ ಚಿತ್ರದ ಫಸ್ಟ್ ಲುಕ್​ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts