ಮುಂಬೈ: ಲಾಕ್ಡೌನ್ನಿಂದಾಗಿ ಸಾಕಷ್ಟು ತಡವಾದ ಒಂದು ಚಿತ್ರವೆಂದರೆ, ಅದು ಅಕ್ಷಯ್ ಕುಮಾರ್ ಅಭಿನಯದ ‘ಸೂರ್ಯವಂಶಿ’. ಕಳೆದ ವರ್ಷ (2020) ಮಾರ್ಚ್ ತಿಂಗಳಲ್ಲೇ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್ಡೌನ್ನಿಂದ ಬಿಡುಗಡೆ ತಡವಾಯಿತು. ಆ ನಂತರ ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಯಿತಾದರೂ, ಚಿತ್ರತಂಡ ಮಾತ್ರ ಯಾವುದೇ ಕಾರಣಕ್ಕೆ ಒಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡುವುದಿಲ್ಲ, ಚಿತ್ರ ನೇರವಾಗಿ ಚಿತ್ರಮಂದಿರಗಳಲ್ಲೇ ಬಿಡಗುಡೆಯಾಗುತ್ತದೆ ಎಂದು ಸ್ಪಷ್ಟಪಡಿಸಿತು.
ಇದನ್ನೂ ಓದಿ: ಬ್ಲೂಫಿಲ್ಮ್ಂ ಕೇಸ್ನಲ್ಲಿ ಅಪ್ಪ ಜೈಲುಪಾಲು- ಅಮ್ಮನ ಕಣ್ಣೀರು: ಇನ್ಸ್ಟಾಗ್ರಾಂನಲ್ಲಿ ಮಗನ ಪೋಸ್ಟ್
ಇದೀಗ ಒಂದೊಂದೇ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಅಕ್ಷಯ್ ಕುಮಾರ್ ಅಭಿನಯದ ‘ಬೆಲ್ ಬಾಟಂ’ ಚಿತ್ರ ಇದೇ ಆಗಸ್ಟ್ 19ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ‘ಬೆಲ್ ಬಾಟಂ’ ಚಿತ್ರವೇ ಬಿಡುಗಡೆಯಾಗುತ್ತಿರುವಾಗ, ಅದಕ್ಕೂ ಮುನ್ನ ಬಿಡುಗಡೆಯಾಗಬೇಕಿದ್ದ ‘ಸೂರ್ಯವಂಶಿ’ ಚಿತ್ರವನ್ನು ಯಾಕೆ ಬಿಡುಗಡೆ ಮಾಡುತ್ತಿಲ್ಲ ಎಂಬ ಪ್ರಶ್ನೆಯನ್ನು ಅಕ್ಷಯ್ ಅಭಿಮಾನಿಗಳು ಕೇಳುತ್ತಿದ್ದಾರೆ.
ಈ ಪ್ರಶ್ನೆಯನ್ನು ಅಕ್ಷಯ್ ಕುಮಾರ್ ಅವರ ಎದುರು ಇಟ್ಟಾಗ, ಅವರೇನೆಂದು ಉತ್ತರಿಸಿದ್ದಾರೆ ಗೊತ್ತಾ? ಚಿತ್ರದ ಬಗ್ಗೆ ಗೊತ್ತಿರುವುದು ಇಬ್ಬರಿಗೆ ಮಾತ್ರ. ಅವರೇ ಏನಾದರೂ ಈ ಬಗ್ಗೆ ಹೇಳಬಹುದು ಎಂದು ಅಕ್ಷಯ್ ಹೇಳಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ”ಸೂಯರ್ವವಂಶಿ’ ಚಿತ್ರದ ಬಿಡುಗಡೆ ಬಗ್ಗೆ ಇಬ್ಬರಿಗೆ ಮಾತ್ರ ಗೊತ್ತು. ಒಬ್ಬರು ಆ ದೇವರು. ಇನ್ನೊಬ್ಬರು ನಿರ್ದೇಶಕ ರೋಹಿತ್ ಶೆಟ್ಟಿ. ಅವರಿಬ್ಬರು ಬಿಟ್ಟರೆ ಬೇರೆ ಯಾರಿಗೂ ಚಿತ್ರ ಯಾವಾಗ ಬಿಡುಗಡೆ ಎಂದು ಗೊತ್ತಿಲ್ಲ. ನನಗಂತೂ ನಿಜಕ್ಕೂ ಗೊತ್ತಿಲ್ಲ. ಬಹುಶಃ ಚಿತ್ರಪ್ರದರ್ಶನ ಶುರುವಾಗುತ್ತಿರುವುದರಿಂದ ‘ಸೂರ್ಯವಂಶಿ’ ಸಹ ಬಹಳ ಬೇಗ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಇದೆ. ಇನ್ನೊಂದೆರೆಡು ತಿಂಗಳಲ್ಲಿ ಈ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹೆಡ್-ಬುಷ್ ಸಿನಿಮಾಗೆ ಡಾಲಿ ಧನಂಜಯ ನಿರ್ಮಾಪಕ
‘ಸೂರ್ಯವಂಶಿ’ ಚಿತ್ರದಲ್ಲಿ ಅಕ್ಷಯ್ ಕುಮಾರ್, ಅಜಯ್ ದೇವಗನ್, ಜಾಕಿ ಶ್ರಾಫ್, ಕತ್ರೀನಾ ಕೈಫ್, ರಣವೀರ್ ಸಿಂಗ್ ಮುಂತಾದವರು ನಟಿಸಿದ್ದಾರೆ.
ಶುಭಾ, ಶಮಂತ್ ಎಲಿಮಿನೇಶನ್ನಿಂದ ಲ್ಯಾಗ್ ಮಂಜುಗೆ ಬಂಪರ್, ಅರವಿಂದ್ ಕನಸಿಗೆ ತಣ್ಣೀರು!