ಬೆಂಗಳೂರು: ಮೊದಲ ಲಾಕ್ಡೌನ್ಗಿಂತ ಮೊದಲೇ ಘೋಷಣೆಯಾಗಿತ್ತು ಧನಂಜಯ್ ‘ಹೆಡ್-ಬುಷ್’ ಚಿತ್ರ. ‘ಅಗ್ನಿ’ ಶ್ರೀಧರ್ ಕಥೆ-ಚಿತ್ರಕಥೆ ಇರುವ ಈ ಚಿತ್ರದಲ್ಲಿ ಬೆಂಗಳೂರಿನ ಮಾಜಿ ಡಾನ್ ಎಂ.ಪಿ. ಜಯರಾಜ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಧನಂಜಯ್ ಹೇಳಿಕೊಂಡಿದ್ದರು. ಇದೀಗ ಇದೇ ತಿಂಗಳ 9ರಂದು ಚಿತ್ರೀಕರಣ ಶುರುವಾಗಲಿದ್ದು, 23ಕ್ಕೆ ಫಸ್ಟ್ ಲುಕ್ ಬಿಡುಗಡೆ ಆಗಲಿದೆ.
ಈ ಮಧ್ಯೆ, ಚಿತ್ರದ ನಿರ್ಮಾಪಕರು ಬದಲಾಗಿದ್ದಾರೆ. ಮುಂಚೆ ಈ ಚಿತ್ರವನ್ನು ಅಶು ಬೆದ್ರ ನಿರ್ವಿುಸಬೇಕಿತ್ತು. ಆದರೆ, ಈಗ ಧನಂಜಯ್, ಸೋಮಣ್ಣ ಎನ್ನುವವರ ಜತೆ ಸೇರಿ ಈ ಚಿತ್ರ ನಿರ್ವಿುಸುತ್ತಿದ್ದಾರೆ. ‘ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜತೆಯಾಗಿ ಸಿನಿಮಾ ನಿರ್ವಿುಸಲಿವೆ. ಸೋಮವಾರದಿಂದ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಪಾತ್ರವರ್ಗ ಇನ್ನೂ ಫೈನಲ್ ಆಗಬೇಕಿದೆ’ ಎಂಬುದು ಧನಂಜಯ್ ಮಾತು.
ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..
ಪೊಲೀಸರಿನ್ನು ಕ್ರಿಮಿನಲ್ಗಳ ಜತೆ ಪಾರ್ಟಿಗೆ ಹಾಜರಾಗುವಂತಿಲ್ಲ; ರೌಡಿ-ಗೂಂಡಾಗಳ ಸಮಾರಂಭಗಳಲ್ಲಿ ಭಾಗಿ ಆಗುವಂತಿಲ್ಲ