More

    ಸಾಹಿತಿ ಡಾ. ಲೀಲಾದೇವಿ ಆರ್. ಪ್ರಸಾದ ಅಭಿಪ್ರಾಯ; ಅಕ್ಕ ಮಹಾದೇವಿ ಮಹಿಳಾ ಕುಲಕ್ಕೆ ಮಾದರಿ

    ಧಾರವಾಡ: ಅಕ್ಕಮಹಾದೇವಿ ಸಾಹಿತ್ಯ ಲೋಕದ ದಿಗ್ಗಜರು. ಅವರು ಜಗತ್ತಿನ ಮೊದಲ ಕವಯತ್ರಿ ಅಷ್ಟೆ ಅಲ್ಲ, ಶಿವಶರಣೆಯಾಗಿ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದು ಮಾಜಿ ಸಚಿವೆ, ಸಾಹಿತಿ ಡಾ. ಲೀಲಾದೇವಿ ಆರ್. ಪ್ರಸಾದ ಹೇಳಿದರು.
    ನಗರದ ಶ್ರೀ ಮೃತ್ಯುಂಜಯಪ್ಪಗಳ ಭವನದಲ್ಲಿ ಅಕ್ಕನ ಬಳಗದಿಂದ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಕ್ಕ' ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ೧೨ನೇ ಶತಮಾನದಲ್ಲಿ ೪ ಗೋಡೆಗಳ ಮಧ್ಯೆ ಜೀವನ ನಡೆಸುತ್ತಿದ್ದ ಮಹಿಳೆಗೆ ಸ್ತಿçà ಸ್ವಾತಂತ್ರ‍್ಯ ಇರಲಿಲ್ಲ. ಅಂದಿನ ಪುರುಷ ಪ್ರಧಾನ ಸಮಾಜದಲ್ಲಿ ಸ್ತಿçÃಯರ ಬದುಕು ಕಷ್ಟಕರವಾಗಿತ್ತು. ಇದನ್ನರಿತ ಅಕ್ಕಮಹಾದೇವಿ ಸ್ತಿçà ಸ್ವತಂತ್ರಳಾಗಬೇಕು ಎಂದು ಹಂಬಲಿಸಿ ಕೌಶಿಕ ಮಹಾರಾಜನ ಕೈಸೆರೆಯಿಂದ ಹೊರ ಬಂದು ಚನ್ನಮಲ್ಲಿಕಾರ್ಜುನ ದೇವರನ್ನು ಹುಡುಕುತ್ತ ಹೊರಟಳು. ಮಾರ್ಗದುದ್ದಕ್ಕೂ ಕಷ್ಟ, ನೋವು ಅನುಭವಿಸಿ ಪ್ರತಿ ಗ್ರಾಮದಲ್ಲೂ ಅನುಭಾವ ಚಿಂತನೆ ಮಾಡುತ್ತ ಹೊರಟಳು ಎಂದರು. ಬಸವಣ್ಣನವರ ಅನುಭವ ಮಂಟಪಕ್ಕೆ ಆಗಮಿಸಿ ಅಲ್ಲಿ ವಚನಗಳನ್ನು ರಚಿಸುತ್ತ ಕಾಲ ಕಳೆದರು. ಅದೇ ಸಮಯದಲ್ಲಿ ನೂರಾರು ಸ್ತಿçÃಯರನ್ನು ಅಕ್ಷರಸ್ಥರನ್ನಾಗಿ ಮಾಡಿ ವಚನಗಳನ್ನು ರಚಿಸಲು ಪ್ರೇರೇಪಿಸಿದರು. ಅಂದು ಅಕ್ಕ ಮಹಿಳೆಯರನ್ನು ವಚನಕಾರ್ತಿಯರನ್ನಾಗಿ ಮಾಡಿದ್ದರಿಂದ ಇಂದು ಮಹಿಳೆಯರು ಸಾಹಿತ್ಯ ಲೋಕದಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದ್ದಾರೆ. ನಾನು ರಾಜಕಾರಣದಲ್ಲಿದ್ದರೂ ಸತ್ಯಶುದ್ಧ ಕಾಯಕ ಮಾಡಿ ಅಕ್ಕಮಹಾದೇವಿ ಕುರಿತು ಅನೇಕ ಗ್ರಂಥಗಳನ್ನು ರಚಿಸಿದ್ದೇನೆ. ಟೆಲಿಫಿಲ್ಮ್, ಪ್ರಬಂಧ, ಸಂಕಲನ, ಕಿರುನಾಟಕದಂಥ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ೯೩ನೇ ವಯಸ್ಸಿನಲ್ಲೂ ರಾಜ್ಯವ್ಯಾಪಿ ಸುತ್ತಿ ಅಕ್ಕನ ವಚನ ಪ್ರಸಾರ ಮಾಡುತ್ತಿರುವ ನನಗೆ ಅಕ್ಕ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ಎಂದರು. ಅಕ್ಕನ ಬಳಗ ವತಿಯಿಂದ ಸಾಹಿತಿ ಡಾ. ಲೀಲಾದೇವಿ ಆರ್. ಪ್ರಸಾದ ಅವರಿಗೆ ೧೦ ಸಾವಿರ ರೂಪಾಯಿ ನಗದು ಸಹಿತಅಕ್ಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
    ಅಕ್ಕನ ಬಳಗದ ಅಧ್ಯಕ್ಷೆ ಮುಕ್ತಾ ಸವಡಿ ಅಧ್ಯಕ್ಷತೆವ ಹಿಸಿದ್ದರು. ಸಾಹಿತಿ ಡಾ. ರಾಜೇಶ್ವರಿ ಮಹೇಶ್ವರಯ್ಯ, ಲೀಲಾವತಿ ಬೆಲ್ಲದ, ಪ್ರೇಮಾ ಹಲಕಿ, ಗೌರಾ ಹಾಲಭಾವಿ, ಸುನಂದಾ ಗುಡ್ಡದ, ವೀಣಾ ಹರಿಹರ, ಶಾರದಾ ಕೌದಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts