More

    ನನ್ನ ತಂದೆ ನಿರ್ದೇಶನದಲ್ಲಿ ನಟಿಸಲು ಇಷ್ಟವಿಲ್ಲ: ಶಾಕಿಂಗ್​ ಹೇಳಿಕೆ ನೀಡಿದ ಖ್ಯಾತ ಡೈರೆಕ್ಟರ್​ ಮಗ! ಕಾರಣ ಹೀಗಿದೆ..

    ಹೈದರಾಬಾದ್​: ದೊಡ್ಡವರನ್ನು ಬೇಕಾದರೆ ಸುಲಭವಾಗಿ ಮೆಚ್ಚಿಸಬಹುದು. ಆದರೆ ಮಕ್ಕಳನ್ನು ಒಪ್ಪಿಸುವುದು ಕಷ್ಟ’ ಎಂಬ ಮಾತಿದೆ. ತೆಲುಗು ಚಿತ್ರರಂಗದಲ್ಲಿ ಈ ಸವಾಲು ನಿರ್ವಹಿಸಿ ಸೈ ಎನಿಸಿಕೊಂಡ ಕೆಲವೇ ಕೆಲ ನಟರಲ್ಲಿ ಮುಖ್ಯರಾದವರು ಟಾಲಿವುಡ್​ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಪುತ್ರ ಆಕಾಶ್​ ಪುರಿ ಒಬ್ಬರು.

    ಇದನ್ನೂ ಓದಿ: ಉತ್ತರಪ್ರದೇಶ: 10 ಸಾವಿರ ಕೋಟಿ ಮೊತ್ತದ 15 ವಿಮಾನಯಾನ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ!

    ನಟ ಆಕಾಶ್​ ಪುರಿ ಟಾಲಿವುಡ್‌ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಮಗ. ಆಕಾಶ್​ ಬಾಲ ನಟನಾಗಿ ಎಂಟ್ರಿ ಕೊಟ್ಟು ತೆಲುಗಿನ ಸೂಪರ್ ಹಿಟ್​ ಸಿನಿಮಾಗಳಾದ ರಾಮ್​ಚರಣ್​ ನಟಿಸಿರುವ ಚಿರತೆ, ಬುಜ್ಜಿಗಾಡು, ಏಕ್ ನಿರಂಜನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕನ ಬಾಲ್ಯದ ಪಾತ್ರವನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದ. ನಂತರ ‘ಆಂಧ್ರ ಪೋರಿ’ ಚಿತ್ರದ ಮೂಲಕ ಹೀರೋ ಆದರು. ಆದರೆ ಆ ಸಿನಿಮಾ ಅಂದುಕೊಂಡಷ್ಟು ಯಶಸ್ಸು ಸಿಗಲಿಲ್ಲ.

    ನಿರ್ದೇಶಕ ಪೂರಿ ಜಗನ್ನಾಥ್​ ತಮ್ಮ ಮಗನ ಜೊತೆಗೂಡಿ ವಿಭಿನ್ನ ಪ್ರೇಮಕಥೆ ‘ಮೆಹಬೂಬಾ’ ಮಾಡಿದ್ದರು ಆದರೆ ಬಾಕ್ಸ್ ಆಫೀಸ್ ನಲ್ಲೂ ಸೋಲು ಕಂಡಿತು. ಇದರಿಂದ ಚಿತ್ರರಂಗದಿಂದ ಬ್ರೇಕ್​ ಪಡೆದು ‘ರೊಮ್ಯಾಂಟಿಕ್’ ಚಿತ್ರಕ್ಕೆ ರೀ ಎಂಟ್ರಿ ಕೊಟ್ಟಿದ್ದರು. ಆ ಸಿನಿಮಾ ಫ್ಲಾಪ್ ಆಯಿತು. ಕೊನೆಗೆ ಚೋರ್ ಬಜಾರ್ ಚಿತ್ರದಲ್ಲಿ ಪ್ರೇಕ್ಷಕರ ಮುಂದೆ ಬಂದರು. ಆದರೆ ಆ ಚಿತ್ರವೂ ಮೊದಲ ದಿನವೇ ಫ್ಲಾಪ್ ಟಾಕ್ ಪಡೆದುಕೊಂಡಿದೆ.

    ಈ ಯುವ ನಟ ಯಾವುದೇ ಸಿನಿಮಾದಲ್ಲೂ ನಟಿಸುತ್ತಿಲ್ಲ. ಸದ್ಯ ಕಥೆ ಹುಡುಕಾಟದಲ್ಲಿದ್ದಾರೆ. ಆದರೆ ಅದೆಷ್ಟೋ ಜನರನ್ನು ಸ್ಟಾರ್ ಹೀರೋಗಳನ್ನಾಗಿ ಮಾಡಿದ ಪುರಿ ಜಗನ್ನಾಥ್ ಗೆ ತಮ್ಮ ಮಗನನ್ನು ಸ್ಟಾರ್ ಹಿರೋ ಮಾಡುವುದು ನೀರು ಕುಡಿದಷ್ಟು ಸುಲಭ, ಆದರೆ ಮೆಹಬೂಬ ನಂತರ ಮಗನ ಜೊತೆ ಮತ್ತೊಂದು ಸಿನಿಮಾ ಮಾಡಲಾಗಲಿಲ್ಲ.

    ನಟ ಆಕಾಶ್​ ಪುರಿ ಮನಸ್ಸು ಮಾಡಿದರೆ ತನ್ನ ತಂದೆ ನಿರ್ದೇಶಕ ಪುರಿ ಜಗನ್ನಾಥ್ ಅವರನ್ನು ಕೇಳಿ ಒಂದು ಸಿನಿಮಾದಲ್ಲಿ ಸ್ಟಾರ್​ ಆಗಬಹುದು ಇದು ಆಕಾಶ್​ಗೆ ಇಷ್ಟವಿಲ್ಲ. ಅಪ್ಪನ ನಿರ್ದೇಶನದಲ್ಲಿ ಸಿನಿಮಾ ಮಾಡುವುದಿಲ್ಲ ಎಂದು ಖಡಕ್​ ಆಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಕಾಶ್ ಇದೇ ಮಾತನ್ನು ಹೇಳಿದ್ದಾರೆ. ‘ನನಗೆ ಅಪ್ಪನ ನಿರ್ದೇಶನದಲ್ಲಿ ಸಿನಿಮಾ ಮಾಡಲು ಇಷ್ಟವಿಲ್ಲ ಎಂದಿದ್ದಾರೆ. ಈ ಹೇಳಿಕೆ ಟಾಲಿವುಡ್​ನಲ್ಲಿ ಸಂಚಲನ ಮೂಡಿಸಿದೆ.

    ‘ನನಗೆ ಅಪ್ಪನ ನಿರ್ದೇಶನದಲ್ಲಿ ಸಿನಿಮಾ ಮಾಡಲು ಇಷ್ಟವಿಲ್ಲ. ನಾನು ನಟ ಎಂದು ಸಾಬೀತುಪಡಿಸಿದ ನಂತರ ನನ್ನ ತಂದೆಯೊಂದಿಗೆ ಸಿನಿಮಾ ಮಾಡುತ್ತೇನೆ. ಅಲ್ಲಿಯವರೆಗೂ ಅಪ್ಪನ ಜೊತೆ ಸಿನಿಮಾ ಮಾಡುವುದಿಲ್ಲ. ಸಿನಿಮಾ ಮಾಡಬೇಕಾದರೆ ‘ಪೂರಿ ಜಗನ್ನಾಥ್-ಆಕಾಶ್ ಕಾಂಬಿನೇಷನ್’ ಬರುತ್ತೆ’ ಎನ್ನುವ ಹಂತಕ್ಕೆ ಬಂದಾಗ ಮಾತ್ರ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಚಿತ್ರರಂಗದ ಪ್ರಮುಖರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ರಾಜಕೀಯ ಅಖಾಡಕ್ಕೆ ಯೂಸುಫ್‌ ಪಠಾಣ್: ಟಿಎಂಸಿ ಅಭ್ಯರ್ಥಿಯಾಗಿ ಈ ಕ್ಷೇತ್ರದಿಂದ ಕಣಕ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts