More

    ಟೋಲ್​ ಗೇಟ್​ ಬಳಿ ಕರ್ತವ್ಯದಲ್ಲಿದ್ದ ಪೊಲೀಸ್​ ಅಧಿಕಾರಿಗೆ ಒದ್ದು, ಹಲ್ಲೆ ನಡೆಸಿದ ಮಾಜಿ ಸಂಸದ….

    ಸೇಲಂ: ಮಾಜಿ ಶಾಸಕನೋರ್ವ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಕರ್ತವ್ಯದಲ್ಲಿದ್ದ ಪೊಲೀಸ್​ ಮೇಲೆ ಹಲ್ಲೆ ನಡೆಸಿದ್ದಾರೆ.

    ತಮಿಳುನಾಡಿನ ಸೇಲಂನಲ್ಲಿ ಟೋಲ್​ ಗೇಟ್​ ಬಳಿ ಕರ್ತವ್ಯದಲ್ಲಿದ್ದ ಪೋಲೀಸ್ ಅಧಿಕಾರಿ ವಿರುದ್ಧ ಕೂಗಾಡಿದ ಎಐಎಡಿಎಂಕೆ ಮಾಜಿ ಶಾಸಕ, ಡಿಎಂಕೆ ಮಾಜಿ ಸಂಸದನೂ ಆಗಿರುವ ಅರ್ಜುನನ್​, ಅವರ ಮೇಲೆ ಹಲ್ಲೆಯನ್ನೂ ಮಾಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ.
    ತಮಿಳುನಾಡಿನಲ್ಲಿ ಲಾಕ್​ಡೌನ್​ ಇರುವುದರಿಂದ ಹೊರಗೆ ಓಡಾಡುವವರಿಗೆ ಇ ಪಾಸ್​ ಕಡ್ಡಾಯವಾಗಿದೆ. ಸೇಲಂ ಬಳಿ ಶಾಸಕ ಅರ್ಜುನನ್​ ಕಾರನ್ನು ತಡೆದ ಪೊಲೀಸರು ಇ ಪಾಸ್​ ತೋರಿಸುವಂತೆ ಕೇಳಿದ್ದಾರೆ. ಆದರೆ ಮಾಜಿ ಸಂಸದ ಸಂಯಮ ಕಳೆದುಕೊಂಡು ಪೊಲೀಸರ ವಿರುದ್ಧ ಕೂಗಾಡಲು ಆರಂಭಿಸಿದ್ದಾರೆ. ಬಳಿಕ ಕಾರಿನಿಂದ ಇಳಿದು ಬಂದು ಅಲ್ಲಿದ್ದ ಪೊಲೀಸ್​ ಅಧಿಕಾರಿಯನ್ನು ತಳ್ಳಿದ್ದಲ್ಲದೆ, ಕ್ರೂರವಾಗಿ ಒದ್ದಿದ್ದಾರೆ. ಇದನ್ನೂ ಓದಿ:  ತಿರುಪತಿ ಭಕ್ತರಿಗೆ ಗುಡ್‌ ನ್ಯೂಸ್‌: ಆನ್‌ಲೈನ್‌ ಟಿಕೆಟ್‌ ಸಂಖ್ಯೆ ಹೆಚ್ಚಿಸಿದ ಟಿಟಿಡಿ

    ಪೊಲೀಸರು ಮತ್ತು ಅರ್ಜುನನ್​ ನಡುವೆ ಕೆಲ ಹೊತ್ತು ಗಲಾಟೆ ನಡೆದಿದೆ. ಲಾಕ್​ಡೌನ್​ ಮಾರ್ಗಸೂಚಿಯಲ್ಲಿ ಹೇಳಲ್ಪಟ್ಟಂತಹ ಇ ಪಾಸ್ ಸೇರಿ ಯಾವುದೇ ದಾಖಲೆಯನ್ನೂ ಅರ್ಜುನನ್​ ಹೊಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
    ಅರ್ಜುನನ್​ ಐಪಿಸಿ ಮತ್ತು ಸಿಆರ್​ಪಿಸಿಯ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಆದರೆ ಇದುವರೆಗೂ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts