More

    ಸಿಎಂ ಜಗನ್​ ಮೋಹನ್​ ರೆಡ್ಡಿ ಒಬ್ಬ ಸೈಕೋ, ರಾವಣನಂತೆ ಅವನನ್ನು ಸುಡಬೇಕು: ನಾರಾ ಲೋಕೇಶ್

    ಅಮರಾವತಿ: ಆಡಳಿತರೂಢ ವೈಎಸ್​ಆರ್​ ಕಾಂಗ್ರೆಸ್​ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಟಿಡಿಪಿ ನಾಯಕ ನಾರಾ ಲೋಕೇಶ್​, ಸಿಎಂ ಜಗನ್​ ಮೋಹನ್​ ರೆಡ್ಡಿ ಅವರನ್ನು ರಾವಣನಿಗೆ ಹೋಲಿಸಿ ಸೈಕೋ ಎಂದು ಕರೆದಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ನಾರಾ ಲೋಕೇಶ್​, ಜನರು ಪೇಪರ್​ಗಳನ್ನು ಸುಡುವ ಮೂಲಕ ಆಡಳಿತರೂಢ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಬೇಕು ಎಂದು ಕರೆ ನೀಡಿದ್ದಾರೆ.

    ಇದನ್ನೂ ಓದಿ: ಮಧ್ಯಪ್ರದೇಶ ಚುನಾವಣೆ| ಮತ್ತಷ್ಟು ಭುಗಿಲೆದ್ದ ಭಿನ್ನಾಭಿಪ್ರಾಯ; ಕಾಂಗ್ರೆಸ್​ ವಿರುದ್ಧ ಪಿಡಿಎ ಅಸ್ತ್ರ ಉಪಯೋಗಿಸಿದ ಎಸ್​ಪಿ

    ದಸರಾ ಪ್ರಯುಕ್ತ ಇಡೀ ದೇಶವು ರಾವಣನನ್ನು ಸುಡುತ್ತಿದೆ. ಅದೇ ರೀತಿ ನಾವು ವಿಧ್ವಂಸಕ ಆಡಳಿತ ನಡೆಸುತ್ತಿರುವ ಮನೋರೋಗಿ ಜಗನ್ನಾಸುರನನ್ನು ಸುಟ್ಟು ರಾಜ್ಯದಲ್ಲಿ ಸೃಷ್ಟಿಯಾಗಿರುವ ಅರಾಜಕತೆಯನ್ನು ನಿಲ್ಲಿಸೋಣ. ವಿಜಯದಶಮಿಯಂದು ಪ್ರತಿಯೊಬ್ಬರು ಬೀದಿಗಿಳಿದು “ಸೈಕೋ ಪೋವಾಲಿ” ಎಂದು ಬರೆದಿರುವ ಪೇಪರ್​ಗಳನ್ನು ಸುಟ್ಟು ಹಾಕಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ. ಚಂದ್ರಬಾಬು ನಾಯ್ಡು ಬಾಬು ಅವರು ಆದಷ್ಟು ಬೇಗ ಹೊರಬರಲಿ ಎಂದು ಈ ದಸರಾವನ್ನು ಆಚರಿಸೋಣ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

    ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಹಾಗೂ ಜನಸೇನಾ ಪಕ್ಷವು ಜಂಟಿಯಾಗಿ ಸ್ಪರ್ಧಿಸಲಿದ್ದು, 175 ವಿಧಾನಸಭಾ ಕ್ಷೇತ್ರಗಳ ಪೈಕಿ 160 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts