More

    10 ದಿನಗಳ ಕಾಲ ಆಗುಂಬೆ ಘಾಟ್ ಬಂದ್: ಶಿವಮೊಗ್ಗ ಡಿಸಿ ಆದೇಶ

    ಶಿವಮೊಗ್ಗ: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಕ್ಕೆ ಪ್ರಮುಖ ಸಂಪರ್ಕದ ಕೊಂಡಿಯಾಗಿರುವ ಆಗುಂಬೆ ಘಾಟ್​​ ರಸ್ತೆ ದುರಸ್ತಿಗಾಗಿ 10 ದಿನಗಳ ಕಾಲ ಸಂಚಾರ ಬಂದ್ ಮಾಡಿ ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

    ಆಗುಂಬೆ ರಸ್ತೆಯು ರಾಷ್ಟ್ರೀಯ ಹೆದ್ದಾರಿ 169(ಎ) ಆಗಿದ್ದು, ಘಾಟ್​​ನಲ್ಲಿ ರಸ್ತೆ ದುರಸ್ತಿ ಮಾಡುವ ಸಲುವಾಗಿ ವಾಹನ ಸಂಚಾರ ನಿಷೇಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಶಿವಮೊಗ್ಗ ವಿಭಾಗದ ಕಾರ್ಯಪಾಲಕ ಇಂಜಿನಿಯರ್, ಜಿಲ್ಲಾ ಎಸ್​​ಪಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಶಿಫಾರಸಿನ ಮೇರೆಗೆ ರಸ್ತೆ ಸಂಚಾರವನ್ನು ಮಾರ್ಚ್ 5ರಿಂದ ಮಾರ್ಚ್ 15ರ ತನಕ ಬೆಳಗ್ಗೆ 7ರಿಂದ ಸಂಜೆ 7ರ ತನಕ ಬಂದ್​ ಮಾಡಲಾಗುತ್ತಿದೆ.

    ಪರ್ಯಾಯ ಮಾರ್ಗ: ಲಘು ವಾಹನಗಳು ತೀರ್ಥಹಳ್ಳಿಯಿಂದ ಕೊಪ್ಪ ಮಾರ್ಗವಾಗಿ ಶೃಂಗೇರಿ ಮಾಳಘಾಟ್, ಕಾರ್ಕಳದ ಮೂಲಕ ಉಡುಪಿಯ ರಾಷ್ಟ್ರೀಯ ಹೆದ್ದಾರಿ ತಲುಪಬಹುದಾಗಿದೆ. ಭಾರಿ ವಾಹನಗಳು ಶಿವಮೊಗ್ಗದಿಂದ ಆಯನೂರು-ಆನಂದಪುರ, ಸಾಗರದಿಂದ ಹೊನ್ನಾವರ ಮೂಲಕ ಸಂಚರಿಸಲು ಆದೇಶಿಸಲಾಗಿದೆ.

    ನಾಳೆಯ ಬಜೆಟ್’ಅನ್ನು ಕನ್ನಡ ಚಿತ್ರರಂಗ ಯಾವತ್ತೂ ಮರೆಯೋದಿಲ್ಲ: ಮುನಿರತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts