ಉಡುಪಿ: ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ನನ್ನು ಪೊಲೀಸರು ಮಹಜರಿಗಾಗಿ ಶನಿವಾರ ಉಡುಪಿಗೆ ಕರೆತಂದಿದ್ದರು. ಆರೋಪಿ ಆದಿತ್ಯ ಕುಂಜಿಬೆಟ್ಟಿನಲ್ಲಿರುವ ಕರ್ಣಾಟಕ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದು, ಲಾಕರ್ ಸೌಲಭ್ಯ ಪಡೆದುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಕರ್ಣಾಟಕ ಬ್ಯಾಂಕ್ಗೆ ಆರೋಪಿಯನ್ನು ಕರೆತಂದು ಲಾಕರ್ ಮತ್ತು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದರು. ಬಳಿಕ ಮಲ್ಪೆಗೆ ಕರೆದುಕೊಂಡು ಹೋಗಿ ಮಲ್ಪೆಯ ಗೂಡಂಗಡಿಯೊಂದರಲ್ಲಿ ಕುಳಿತು ಏರ್ಲೈನ್ಸ್ ಒಂದಕ್ಕೆ ಕರೆ ಮಾಡಿ ಹುಸಿಬಾಂಬ್ ಬೆದರಿಕೆ ಒಡ್ಡಿದ್ದ. ಈ ಬಗ್ಗೆ ಪೊಲೀಸರು ಸ್ಥಳದಲ್ಲಿ ಆರೋಪಿ ಹೇಳಿಕೆ ಪಡೆದು ಮಹಜರು ನಡೆಸಿದರು.