ಸಾಗರ: ತಾಲೂಕಿನ ಭೀಮನಕೋಣೆ ಗ್ರಾಪಂ ವ್ಯಾಪ್ತಿಯ ಯಲಗಳಲೆ ಗ್ರಾಮದ ಸರ್ವೆ ನಂ.105ರಲ್ಲಿ ಕೆಎಸ್ಐಎಸ್ಎಫ್ 2ನೇ ಪಡೆ ಕೇಂದ್ರಸ್ಥಾಪನೆ ಉದ್ದೇಶದಿಂದ ಮೀಸಲಿರಿಸಿರುವ 50 ಎಕರೆ ಜಾಗವನ್ನು ಆಂತರಿಕ ಭದ್ರತೆ ಎಡಿಜಿಪಿ ಭಾಸ್ಕರ್ರಾವ್ ಬá-ಧವಾರ ಪರಿಶೀಲನೆ ನಡೆಸಿದರು.
ಕರ್ನಾಟಕ ಪೊಲೀಸ್ ಭದ್ರತಾ ತರಬೇತಿ ಕೇಂದ್ರ ಸ್ಥಾಪಿಸಲು ಗುರುತಿಸಿರುವ 50 ಎಕರೆ ಪ್ರದೇಶ ಉತ್ತಮವಾಗಿದೆ. ಇದಕ್ಕೆ ಸಂಪರ್ಕ ರಸ್ತೆ ಅಗತ್ಯವಿದ್ದು ರಸ್ತೆ ನಿರ್ವಣಕ್ಕೆ ಸಂಬಂಧಪಟ್ಟ ಇಲಾಖೆ ಜತೆ ಚರ್ಚೆ ನಡೆಸಲಾಗುವುದು. ಇಲ್ಲಿ ಕೆಎಸ್ಐಎಸ್ಎಫ್ 2ನೇ ಪಡೆ ಕೇಂದ್ರಸ್ಥಾಪನೆಯಾಗುವುದರಿಂದ ಈ ಭಾಗದ ಅಭಿವೃದ್ಧಿ್ದೂ ಸಹಕಾರಿಯಾಗಲಿದೆ. ಜಾಗ ಹಸ್ತಾಂತರಕ್ಕೆ ಶೀಘ್ರ ಗಮನ ಹರಿಸಬೇಕು ಎಂದು ತಿಳಿಸಿದರು.
ಡಿವೈಎಸ್ಪಿ.ಸುದರ್ಶನ್, ಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್, ಕಂದಾಯ ನಿರೀಕ್ಷಕ ಆನಂದ್ ನಾಯ್ಕ, ಕಂದಾಯ ಇಲಾಖೆಯ ಸುರೇಶ್, ರಾಜಶೇಖರ್, ಜಗದೀಶ್, ಪಿಡಿಒ ಕೃಷ್ಣಪ್ಪ ಇದ್ದರು.