More

    ನೃತ್ಯ ಸ್ಪರ್ಧೆಯಲ್ಲಿ ಎಡಿಸಿ ಗ್ರೂಪ್ ಚಾಂಪಿಯನ್

    ಸೋಮವಾರಪೇಟೆ: ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್‌ ಆರ್ಗನೈಜೇಷನ್(ಕೆಟಿಡಿಒ) ತಾಲೂಕು ಸಮಿತಿ ವತಿಯಿಂದ ಗಣರಾಜ್ಯೋತ್ಸವ ಮತ್ತು ಚಾಲಕ ಚೈತನ್ಯೋಭವ ಸಮಾವೇಶದ ಅಂಗವಾಗಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಅಯೋಜಿಸಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯ ಸೀನಿಯರ್ಸ್‌ ವಿಭಾಗದಲ್ಲಿ ಮೊದಲ ಬಹುಮಾನವನ್ನು ಸೋಮವಾರಪೇಟೆ ಎಡಿಸಿ ಗ್ರೂಪ್ ಪಡೆದುಕೊಂಡಿತು.


    ದ್ವಿತೀಯ ಬಹುಮಾನವನ್ನು ಮಡಿಕೇರಿ ಟೀಮ್ ಗಾಡ್ಸ್, ತೃತೀಯ ಬಹುಮಾನವನ್ನು ಮಡಿಕೇರಿ ಅಭಿಷೇಕ್ ತಂಡ, ಸಮಾಧಾನಕರ ಬಹುಮಾನವನ್ನು ಕೋಲಾರದ ಸ್ಟೆಪ್ ರಾಕರ್ಸ್‌ ತಂಡ ಪಡೆಯಿತು.


    ಜಿಲ್ಲಾ ಮಟ್ಟದ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಮಡಿಕೇರಿ ನಾಟ್ಯಕಲಾ ಪ್ರಥಮ, ಪಿರಿಯಾಪಟ್ಟಣದ ನಕ್ಷತ್ರ ತಂಡ ದ್ವಿತೀಯ, ಮಡಿಕೇರಿಯ ವೀರಯೋಧ ತಂಡ ತೃತೀಯ, ಸೋಮವಾರಪೇಟೆ ಕೂರ್ಗ್ ವಿನ್ನರ್ ತಂಡ ಸಮಾಧಾನಕರ ಬಹುಮಾನ ಪಡೆದುಕೊಂಡಿತು.


    ಶುಕ್ರವಾರ ಸಂಜೆ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ್ದ ವರ್ಣರಂಜಿತ ವೇದಿಕೆಯಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭವನ್ನು ರಾಮನಗರ ಜಿಲ್ಲೆಯ ಮುರಾರಿ ಸ್ವಾಮಿಗಳ ಪುಣ್ಯಕ್ಷೇತ್ರದ ಪೀಠಾಧಿಪತಿ ಡಾ.ಕುಮಾರಸ್ವಾಮಿ ಉದ್ಘಾಟಿಸಿದರು.


    ವಕ್ಫ್ ಸಲಹಾ ಸಮಿತಿ ವೈಸ್ ಚೇರ್ಮನ್ ತಣ್ಣೀರುಹಳ್ಳ ಶಾಫಿ ಸ ಅದಿ, ಸೋಮವಾರಪೇಟೆ ಜಯವೀರಮಾತೆ ದೇವಾಲಯದ ಸಹಾಯಕ ಧರ್ಮಗುರು ಜಾನ್ ಫರ್ನಾಂಡಿಸ್ ಶುಭಕೋರಿದರು.


    ಕೆ.ಟಿ.ಡಿ.ಒ. ರಾಜ್ಯ ಗೌರವಾಧ್ಯಕ್ಷ ಇಕ್ಬಲ್ ಬಿ.ಸಿ.ರೋಡ್, ಮಾಜಿ ಸೈನಿಕ ಎನ್.ಯು.ಚಂದ್ರಕಾಂತ್, ಸ್ವಾಮಿ ಟ್ರಾವೆಲ್ಸ್ ರಾಮಚಂದ್ರ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಎಚ್.ಎಂ.ರಾಮದಾಸ್, ಹಾಕಿ ಪ್ರತಿಭೆ ಎಸ್.ಆರ್.ಪುಣ್ಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
    ಕೆಟಿಡಿಒ ಅಧ್ಯಕ್ಷ ರಮೇಶ್ ಕುಂದಾಪುರ, ತಾಲೂಕು ಅಧ್ಯಕ್ಷ ಬಿ.ವಿ.ರವಿ, ಮಾಜಿ ಸಚಿವ ಅಪ್ಪಚ್ಚು ರಂಜನ್, ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕಾಳಪ್ಪ, ಸಂಘದ ಕಾನೂನು ಸಲಹೆಗಾರ ಬಿ.ಇ.ಜಯೇಂದ್ರ, ಜೀರೋ ಟ್ರಾಫಿಕ್ ಆಂಬುಲೆನ್ಸ್ ಚಾಲಕ ರಫೀಕ್, ಪ್ರಮುಖರಾದ ಶೀಲಾ ಡಿಸೋಜ, ಎಂ.ಎ.ರುಬಿನಾ, ಎಸ್.ಮಹೇಶ್, ಮಿಥುನ್ ಹಾನಗಲ್, ಎಚ್.ಎಸ್.ಗಂಗಾಧರ್, ಸಿ.ಸಿ.ನಂದ, ಎಚ್.ಕೆ.ಚಂದ್ರಶೇಖರ್, ಕೆ.ಎನ್.ದೀಪಕ್ ಇತರರು ಇದ್ದರು. ಬೆಂಗಳೂರು ಕಾವೇರಿ ಆಂಬುಲೆನ್ಸ್ ಮಾಲೀಕ ವೆಂಕಟೇಶ್‌ಗೌಡ ಅವರು ಹೈಟೆಕ್ ಆಂಬುಲೆನ್ಸ್‌ಅನ್ನು ಸೋಮವಾರಪೇಟೆ ಕೆಟಿಡಿಒಗೆ ಉಚಿತವಾಗಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts