More

    ವಿವಾದಕ್ಕೆ ಸಂಬಂಧಿಸಿದಂತೆ ಮೌನ ಮುರಿದ ನಟಿ ಸಾಯಿಪಲ್ಲವಿ, ವಿಡಿಯೋ ಮೂಲಕ ಸ್ಪಷ್ಟೀಕರಣ..

    ಬೆಂಗಳೂರು: ಕಾಶ್ಮೀರ ಪಂಡಿತರ ಹತ್ಯಾಕಾಂಡ ಹಾಗೂ ಗೋ ಕಳ್ಳಸಾಗಣೆ ಮಾಡಿದ ಮುಸ್ಲಿಮರ ಮೇಲಿನ ಹಲ್ಲೆ ಇವೆರಡನ್ನೂ ಉಲ್ಲೇಖಿಸಿ ಮಾತನಾಡಿ ವಿವಾದಕ್ಕೆ ಒಳಗಾಗಿರುವ ತೆಲುಗಿನ ಖ್ಯಾತ ನಟಿ ಸಾಯಿ ಪಲ್ಲವಿ, ಇದೀಗ ಮೌನ ಮುರಿದಿದ್ದು, ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನೂ ನೀಡಿದ್ದಾರೆ.

    ಈ ಹಿಂದಿನ ಸಂದರ್ಶನದಲ್ಲಿ ನಾನು ಎಡವಾ-ಬಲವಾ ಎಂದು ಪ್ರಶ್ನಿಸಿದ್ದರು. ನಾನು ನ್ಯೂಟ್ರಲ್​ ಎಂಬುದನ್ನು ಅವರಿಗೆ ಸ್ಪಷ್ಟಪಡಿಸಿದ್ದೇನೆ. ನಾನು ಮಾತಾಡಿದ್ದನ್ನೆಲ್ಲ ತಪ್ಪಾಗಿ ಭಾವಿಸಲಾಗಿದೆ. ಅಷ್ಟಕ್ಕೂ ಬಹಳಷ್ಟು ಮಂದಿ ನಾನು ಕೊಟ್ಟಿರುವ ಸಂದೇಶವನ್ನು ಪೂರ್ತಿಯಾಗಿ ನೋಡಿಲ್ಲ. ಕೆಲವೆಡೆ ಸಂದರ್ಶನದ ಆಯ್ದ ಭಾಗವನ್ನಷ್ಟೇ ಪ್ರಸಾರ ಮಾಡಿದ್ದಾರೆ ಎಂದು ಸಾಯಿಪಲ್ಲವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಮ್ಮ ನಂಬಿಕೆಗಳಿಗೆ ಬದ್ಧರಾಗುವ ಮೊದಲು ನಾವು ಒಳ್ಳೆಯ ಮನುಷ್ಯರಾಗಿರಬೇಕು. ನರಮೇಧದ ಬಗ್ಗೆ ನನ್ನ ವಿರೋಧವಿದೆ. ಯಾರಿಗೂ ಯಾರನ್ನೂ ಕೊಲ್ಲುವ ಹಕ್ಕಿಲ್ಲ. ಯಾವುದೇ ಥರದ ಹಿಂಸೆ, ಯಾವುದೇ ಧರ್ಮದ ವಿಚಾರಲ್ಲೂ ಹಿಂಸೆ ಸರಿಯಲ್ಲ ಎಂಬುದು ನನ್ನ ಭಾವನೆ. ವೈದ್ಯೆಯಾಗಿ ನನಗೆ ಎಲ್ಲ ಜೀವವೂ ಒಂದೇ, ನಾನು ಎಲ್ಲ ಜೀವವನ್ನೂ ಗೌರವಿಸುತ್ತೇನೆ. ನಾವೆಲ್ಲರೂ ಸಮಾನರು ಎಂಬುದನ್ನು ಶಾಲಾದಿನಗಳಿಂದಲೂ ಓದುತ್ತ ಬಂದಿದ್ದೇನೆ. ಮುಂದೆ ಯಾವುದೇ ಮಗು ಕೂಡ ಅದರ ಗುರುತಿನ ಕಾರಣಕ್ಕೆ ಭಯದಲ್ಲಿ ಬದುಕುವಂಥ ವಾತಾವರಣ ಉಂಟಾಗದಿರಲಿ ಎಂದು ಆಶಿಸುತ್ತೇನೆ ಎಂದಿರುವ ಸಾಯಿ ಪಲ್ಲವಿ, ಎಲ್ಲರಿಗೂ ಸಂತೋಷ, ಶಾಂತಿ-ಪ್ರೀತಿಯನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ.

    29 ವರ್ಷಗಳ ಬಳಿಕ ಪಿಯು ಪರೀಕ್ಷೆ ಬರೆದ ಶಾಸಕರ ಪತ್ನಿ ಫಸ್ಟ್​ ಕ್ಲಾಸ್​ನಲ್ಲಿ ಪಾಸ್

    ಪತಿಗೆ ‘ಬ್ಯಾಡ್​ ನ್ಯೂಸ್​’ ಕೊಟ್ಟ ಪತ್ನಿ ; ಒಂದೂವರೆ ತಿಂಗಳ ನವವಿವಾಹಿತೆ 4 ತಿಂಗಳ ಗರ್ಭಿಣಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts