More

    ಹುಟ್ಟುಕುರುಡು ಮಗುವಿನ ಕಣ್ಣುಗಳಿಗೆ ತಾರಾ ಕಳೆ; ನಟಿ ಜಯಂತಿಯ ನೇತ್ರದಾನ..

    ಬೆಂಗಳೂರು: ಡಾ.ರಾಜ್​ಕುಮಾರ್​ ಮುಂತಾದವರೊಂದಿಗೆ ನಟಿಸಿದ್ದ, ಅಭಿನಯ ಶಾರದೆ ಎಂದೇ ಹೆಸರಾಗಿದ್ದ ನಟಿ ಜಯಂತಿ ಅವರ ಮರಣೋತ್ತರ ಪ್ರಕ್ರಿಯೆಗಳು ಡಾ.ರಾಜ್ ಮುಂತಾದವರ ಹಾದಿಯಲ್ಲೇ ಸಾಗಿದೆ. ಅರ್ಥಾತ್​, ಜಯಂತಿ ಅವರ ನೇತ್ರಗಳನ್ನು ದಾನ ಮಾಡಲಾಗಿದೆ.

    ನಟಿ ಜಯಂತಿ ಅವರ ಕಣ್ಣುಗಳನ್ನು ಬೆಂಗಳೂರಿನ ನಾರಾಯಣ ನೇತ್ರಾಲಯದ ಡಾ.ರಾಜ್​ಕುಮಾರ್ ಐ ಬ್ಯಾಂಕ್​ಗೆ ದಾನ ಮಾಡಲಾಗಿದ್ದು, ಆ ಕುರಿತ ಪ್ರಕ್ರಿಯೆ ರುದ್ರಭೂಮಿಯಲ್ಲೇ ನಡೆದಿದೆ. ವಿಶೇಷವೆಂದರೆ ಈ ನೇತ್ರದಾನದಿಂದ ಹುಟ್ಟುಕುರುಡು ಮಗುವೊಂದರ ಕಣ್ಣುಗಳಿಗೆ ತಾರಾ ಕಳೆ ಬರಲಿದೆ.

    ಹುಟ್ಟಿದಾಗಿನಿಂದಲೇ ಅಂಧತ್ವಕ್ಕೆ ಒಳಗಾಗಿರುವ ಮಗುವೊಂದಕ್ಕೆ ಜಯಂತಿ ಅವರ ಕಣ್ಣುಗಳನ್ನು ಅಳವಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದುವರೆಗೆ ಜಗತ್ತನ್ನೇ ನೋಡಿರದ ಈ ಮಗು ಇನ್ನು ಅಭಿನಯ ಶಾರದೆಯ ಕಣ್ಣುಗಳಿಂದ ಪ್ರಪಂಚವನ್ನು ನೋಡಲಿದೆ.

    ಅವರಿಬ್ಬರಿಗೆ ಕಣ್ಣೀರು ಬರಲ್ಲ, ಯಡಿಯೂರಪ್ಪ ಅವರಿಗೆ ಕಣ್ಣೀರು ಬಂದಿದ್ದರಲ್ಲಿ ತಪ್ಪಿಲ್ಲ: ಶಾಸಕ ರಘುಪತಿ ಭಟ್​

    ಇದು ಕಿಕ್ಕಿಳಿಸೋ ವಿಷಯ: ರಾಷ್ಟ್ರೀಯ-ರಾಜ್ಯ ಹೆದ್ದಾರಿ ಬಳಿ ಮದ್ಯದಂಗಡಿಗೆ ಪರವಾನಗಿ ಕೊಡಬೇಡಿ ಎಂದ ಸುಪ್ರೀಂ ಕೋರ್ಟ್​

    ಮೂರು ವರ್ಷಗಳ ಹಿಂದೆಯೇ ನಟಿ ಜಯಂತಿ ವಿಚಾರದಲ್ಲಾಗಿತ್ತು ಮಹಾ ಎಡವಟ್ಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts