More

    ನನ್ನ ಅಂತ್ಯಕ್ರಿಯೆಗೆ ಹಣ ಕೂಡಿಟ್ಟು ಹೋಗ್ತೀನಿ; ನಟಿ ಲಕ್ಷ್ಮಿ ಪುತ್ರಿ ಐಶ್ವರ್ಯ ಹೀಗೆ ಹೇಳಿದ್ಯಾಕೆ?

    ಬೆಂಗಳೂರು: ಸ್ಯಾಂಡಲ್​​ವುಡ್​ ನಟಿ ಲಕ್ಷ್ಮಿ ಪುತ್ರಿ ಐಶ್ವರ್ಯ ಟಾಲಿವುಡ್​​ನಲ್ಲಿ ಮಿಂಚುತ್ತಿದ್ದಾರೆ. ಈ ನಟಿ ಈ ಹಿಂದೆ ಹೇಳಿದ್ದ ಮಾತೊಂದು ಇಂದು ಮತ್ತೆ ವೈರಲ್​​ ಆಗುತ್ತಿದೆ. ಕನ್ನಡ ಚಿತ್ರರಂಗ ಹಿರಿಯ ನಟಿ ಲಕ್ಷ್ಮಿ ಅವರ ಮುದ್ದಿನ ಮಗಳು ಐಶ್ವರ್ಯ ಭಾಸ್ಕರನ್ ಸ್ಟಾರ್ ನಟಿ ಮಗಳ ಅನ್ನೋ ಪಟ್ಟವನ್ನು ದೂರ ಇಟ್ಟು ಹೇಗೆ ಜೀವನ ಮಾಡುತ್ತಿದ್ದಾರೆ ಗೊತ್ತಾ? ಟೀಕೆಗಳಿಗೆ ಉತ್ತರ ಇಲ್ಲಿದೆ…

    18 ವರ್ಷದವರೆಗೂ ನಾನು ನನ್ನ ತಾಯಿ  ಒಳ್ಳೆ ವಿದ್ಯಾಭ್ಯಾಸ ಕೊಟ್ಟಿದ್ದಾರೆ . ನಂತ್ರ ನಾವು ನಮ್ಮ ಕೆಲಸ ಮಾಡಬೇಕು. ದೊಡ್ಡವರಾದ ಮೇಲೆ ಮಕ್ಕಳು ತಂದೆ ತಾಯಿ ಬಳಿ ಸಹಾಯ ಪಡೆಯುವುದು ಹಣ ಕೇಳುವುದು ತುಂಬಾನೇ ತಪ್ಪು. ನಾನು ಬಾಲ್ಯದಿಂದಲೂ ಅವರ ಮಗಳು ಇವರ ಮಗಳು ಎಂದು ಬೆಳೆದಿಲ್ಲ ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು. ನೀನು ಸ್ಟಾರ್ ನಟಿಯ ಮಗಳು, ನಿನ್ನ ಬಳಿ ಇಷ್ಟಿದೆ ಅಷ್ಟಿದೆ ಎಂದು. ನಮ್ಮ ಕೆಲಸ ನಾವು ಮಾಡಬೇಕು ತಾಯಿ ಅವರು ಲೆಜೆಂಡ್ ಅವರು ರಿಯಲ್ ಸ್ಟಾರ್. ನಾನು ಲೆಜೆಂಡ್ ಅಲ್ಲ ಯಾವ ಸ್ಟಾರ್‌ ಅಲ್ಲ ಎಂದಿದ್ದಾರೆ.

    ದೊಡ್ಡ ಮನೆ ದೊಡ್ಡ ನಟಿ ಅವರನ್ನು ನೋಡಿ ಕಲಿಯಬೇಕು.ಅವರ ಮನೆಯಲ್ಲಿ ಕುಳಿತುಕೊಂಡು ಅವರ ಪ್ರಾಣ ತೆಗೆಯಬಾರದು. ನನ್ನ ಜೀವನ ಪೂರ್ತಿ ಕೆಲಸ ಮಾಡುವೆ ತಂದೆ ತಾಯಿ ಗಂಡ ಮಕ್ಕಳು ಯಾರ ಮೇಲೂ ಡಿಪೆಂಡ್ ಆಗುವುದಿಲ್ಲ. ನಾನು ಸತ್ತ ಮೇಲೆ ನನ್ನ ಅಂತ್ಯಕ್ರಿಯೆಗೆ ಹಣ ಮುಂದಿಟ್ಟು ಹೋಗುತ್ತೀನಿ ಎಂದು ಹೇಳಿದ್ದಾರೆ.

    ಸ್ಟಾರ್ ನಟ-ನಟಿಯರ ಮಕ್ಕಳು, ರಾಜಕಾರಣಿಗಳ ಮಕ್ಕಳು ಯಾರೇ ಆಗಿದ್ದರು ಸಾವು ಎಲ್ಲರಿಗೂ ಬರುತ್ತದೆ ಇದನ್ನು ಅರ್ಥ ಮಾಡಿಕೊಳ್ಳಬೇಕು. ಈಗಾಗಲೇ ನನ್ನ ಜೀವನದ 50 ವರ್ಷ ಕಳೆದಿರುವೆ ಇನ್ನು ಎಷ್ಟು ವರ್ಷ ಉಳಿದಿದೆ ನನ್ನ ಗಮನ ನನ್ನ ಕೆಲಸ ಮತ್ತು ಭೂಮಿ ತಾಯಿ ಮೇಲೆ ಇರುತ್ತದೆ’ ಎಂದು ಐಶ್ವರ್ಯ ಹೇಳಿದ್ದಾರೆ.

    ಮದುವೆ ಮನೆಯಲ್ಲಿ ಊಟ ಬಡಿಸ್ತಿದ್ದವಳು ಇಂದು ಸ್ಟಾರ್​​ ಹೀರೋಯಿನ್​​;​ ನಟಿಗೆ ಈ ಕೆಲಸಕ್ಕೆ ಸಿಗ್ತಾ ಇದ್ದದ್ದು 50 ರೂ. ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts