More

    ವಯಸ್ಸಿಗೆ ಬಂದ ಮಗಳಿರುವ ವ್ಯಕ್ತಿಯ ಜತೆ ವರು ನಿಶ್ಚಿತಾರ್ಥ! ಶಾಕಿಂಗ್​ ಕಾಮೆಂಟ್​ ಮಾಡಿದ ವಿಶಾಲ್

    ಚೆನ್ನೈ: ವರಲಕ್ಷ್ಮೀ ಶರತ್ ಕುಮಾರ್ ಅವರು ದಕ್ಷಿಣ ಭಾರತ ಸಿನಿರಂಗದಲ್ಲಿ ಟಾಪ್ ಹೀರೋಯಿನ್​ಗಳನ್ನು ಮೀರಿಸಿ ಕ್ರೇಜ್ ಗಳಿಸಿದ್ದಾರೆ. ವೃತ್ತಿಬದುಕಿನ ಆರಂಭದಲ್ಲಿ ಬರೀ ಹೀರೋಯಿನ್ ಪಾತ್ರಗಳನ್ನೇ ಮಾಡಿದ್ದ ಈ ಚೆಲುವೆ, ನಂತರ ಖಳನಾಯಕಿ ಸೇರಿದಂತೆ ತನಗೆ ಅರಸಿ ಬಂದು ವಿವಿಧ ಪಾತ್ರಗಳನ್ನು ಮಾಡಿದರು. ಅದರಲ್ಲೂ ಲೇಡಿ ವಿಲನ್ ಆಗಿ ಉತ್ತಮ ಖ್ಯಾತಿಯನ್ನು ಪಡೆದರು. ಪ್ರಸ್ತುತ, ಅವರು ಟಾಲಿವುಡ್, ಕಾಲಿವುಡ್ ಮತ್ತು ಮಾಲಿವುಡ್‌ನಂತಹ ಎಲ್ಲ ಇಂಡಸ್ಟ್ರಿಗಳಲ್ಲಿ ಸರಣಿ ಚಿತ್ರಗಳನ್ನು ಮಾಡುತ್ತಿದ್ದಾರೆ. ಒಳ್ಳೆಯ ಪಾತ್ರ ಬಂದರೆ ಸಾಕು ಪೋಷಕ, ವಿಲನ್ ಇದಾವುದನ್ನೂ ಲೆಕ್ಕಿಸದೆ ತಮ್ಮ ಕೆರಿಯರ್​ನಲ್ಲಿ ಮುನ್ನಡೆಯುತ್ತಿದ್ದಾರೆ.

    ಸದ್ಯ ಕೆಲವೊಂದಿಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ವರಲಕ್ಷ್ಮಿ, ನಲವತ್ತರ ಹರೆಯಕ್ಕೆ ಕಾಲಿಡುವ ಸಂದರ್ಭದಲ್ಲಿ ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವರು ನಿಶ್ಚಿತಾರ್ಥ ಮಾಡಿಕೊಂಡರು. ಈ ಸುದ್ದಿ ಕೇಳಿ ಎಲ್ಲರೂ ಶಾಕ್​ ಆದರು. ಏಕೆಂದರೆ, ವರಲಕ್ಷ್ಮಿ ಅವರ ಪ್ರೇಮವಿವಾಹವೇ ತುಂಬಾ ವಿಶೇಷವಾಗಿದೆ. ವಯಸ್ಸಿಗೆ ಬಂದ ಮಗಳಿರುವ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ವರು ನಿಶ್ಚಿತಾರ್ಥದ ಸುದ್ದಿ ತಿಳಿದಾಗಿನಿಂದ ನಟ ವಿಶಾಲ್ ಅವರ ಪ್ರತಿಕ್ರಿಯೆಗಾಗಿ ಎಲ್ಲರೂ ಕಾಯುತ್ತಿದ್ದರು. ಏಕೆಂದರೆ, ಇಬ್ಬರೂ ಹಿಂದೊಮ್ಮೆ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಶರತ್ ಕುಮಾರ್ ಅವರ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ. ಈ ಕಾರಣದಿಂದ ಇಬ್ಬರ ಪ್ರೀತಿ ಮುರಿದುಬಿದ್ದಿತು ಎಂಬ ಸುದ್ದಿ ಕಾಲಿವುಡ್​ ಗಲ್ಲಿಯಲ್ಲಿ ಆಗಾಗ ಹರಿದಾಡುತ್ತಲೇ ಇರುತ್ತದೆ.

    ಇತ್ತೀಚೆಗಷ್ಟೇ ನಡೆದ ವರಲಕ್ಷ್ಮಿ ನಿಶ್ಚಿತಾರ್ಥದ ಬಗ್ಗೆ ಪ್ರತಿಕ್ರಿಯಿಸಿದ ವಿಶಾಲ್ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಸದ್ಯ ವಿಶಾಲ್​ ರತ್ನಂ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ವಿಶಾಲ್, ಯೂಟ್ಯೂಬ್ ಚಾನೆಲ್​ವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ವರಲಕ್ಷ್ಮಿ ಅವರ ಇತ್ತೀಚಿನ ನಿಶ್ಚಿತಾರ್ಥದ ಬಗ್ಗೆ ವಿಶಾಲ್​ ಅಭಿಪ್ರಾಯ ಕೇಳಲಾಯಿತು. ಈ ವೇಳೆ ವಿಶಾಲ್ ನೀಡಿದ ಉತ್ತರ ಎಲ್ಲರಿಗೂ ಆಶ್ಚರ್ಯ ತಂದಿದೆ.

    ವರಲಕ್ಷ್ಮಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ತುಂಬಾ ಖುಷಿ ತಂದಿದೆ ಎನ್ನುತ್ತಾರೆ ವಿಶಾಲ್. ಸದ್ಯ ತಮಿಳು, ತೆಲುಗಿನಲ್ಲೂ ಉತ್ತಮ ಪಾತ್ರ ಮಾಡುತ್ತಿದ್ದಾರೆ. ಟಾಲಿವುಡ್​ನಲ್ಲೂ ವರಲಕ್ಷ್ಮಿಗೆ ಉತ್ತಮ ಮಾರುಕಟ್ಟೆ ಇದೆ ಎಂದು ವಿಶಾಲ್ ಹೊಗಳಿದ್ದಾರೆ. ಹನುಮಾನ್ ಚಿತ್ರದಲ್ಲಿ ಅವರ ಪಾತ್ರ ಅದ್ಭುತವಾಗಿದೆ. ಅಷ್ಟೇ ಅಲ್ಲ ಆಕೆ ಅತಿ ಕಡಿಮೆ ಸಮಯದಲ್ಲಿ ಉನ್ನತ ಮಟ್ಟಕ್ಕೆ ತಲುಪಿದ್ದಕ್ಕೆ ವಿಶಾಲ್​ ತುಂಬಾ ಖುಷಿಯಾಗಿದ್ದಾರೆ ಮತ್ತು ಶುಭ ಹಾರೈಸಿದ್ದಾರೆ.

    ಅಂದಹಾಗೆ ವಿಶಾಲ್​ ಅವರು ತಮಿಳಿನ ಜೊತೆಗೆ ತೆಲುಗು ಮಾರುಕಟ್ಟೆಯಲ್ಲೂ ಒಳ್ಳೆಯ ಹೆಸರು ಗಳಿಸಿದ್ದಾರೆ. ಸದ್ಯ ಅವರು ರತ್ನಂ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಈ ಸಿನಿಮಾದಲ್ಲಿ ವಿಶಾಲ್​ಗೆ ನಾಯಕಿಯಾಗಿ ಪ್ರಿಯಾ ಭವಾನಿ ಶಂಕರ್ ನಟಿಸಿದ್ದಾರೆ. ಈ ಚಿತ್ರ ಏಪ್ರಿಲ್ 26 ರಂದು ಬಿಡುಗಡೆಯಾಗುತ್ತಿದೆ.

    ಇತ್ತ ವರಲಕ್ಷ್ಮಿ ಕೂಡ ಸರಣಿ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಶೀಘ್ರದಲ್ಲೇ ವರಲಕ್ಷ್ಮೀ ಮದುವೆ ನಡೆಯಲಿದೆ. (ಏಜೆನ್ಸೀಸ್​)

    ಬಾಲಿವುಡ್​ ಬ್ಯೂಟಿ ಮಲೈಕಾರ ಖಾಸಗಿ ಕ್ಷಣದ ವಿಡಿಯೋ ಸೆರೆ! ನಿಮಗೆ ನಾಚಿಕೆ ಆಗಲ್ವಾ ಅಂದ್ರು ನೆಟ್ಟಿಗರು

    ಟ್ರಾವಿಸ್​​​ ಹೆಡ್​ ವಿನೂತನ ಶತಕ ಆಚರಣೆಯ ಹಿಂದಿರುವ ಅರ್ಥ ಗೊತ್ತಾ? ಆರ್​ಸಿಬಿ ವಿರುದ್ಧದ ಸೇಡಿಗಿದೆ ಲಿಂಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts