More

    ಪುನೀತ್ ನಿಧನಕ್ಕೆ ಮನ ನೊಂದು ಮತ್ತೊಬ್ಬ ಅಭಿಮಾನಿ ಆತ್ಮಹತ್ಯೆ

    ಚಿಕ್ಕಮಗಳೂರು: ನಟ ಪುನೀತ್ ರಾಜ್‌ಕುಮಾರ್ ಸಾವಿನಿಂದ ಮನ ನೊಂದು ಅವರ ಇನ್ನೊಬ್ಬ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಮಗಳೂರು ತಾಲೂಕಿನ ರಾಂಪುರದ ಶರತ್ (30) ಮೃತ ವ್ಯಕ್ತಿ.

    ನಿನ್ನೆ ಪುನೀತ್ ನಿಧನರಾದಾಗಿನಿಂದಲೂ ಶರತ್ ಅಳುತ್ತಲೇ ಇದ್ದ. ಆತನನ್ನು ಮನೆಯವರು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದರು. ಸತತವಾಗಿ ಟಿವಿ ನ್ಯೂಸ್‌ನಲ್ಲಿ ಪುನೀತ್ ಸಾವಿನ ವಿಷಯಗಳನ್ನು ನೋಡುತ್ತಿದ್ದ. ಇಂದು ಏಕಾಏಕಿ ರೂಮಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಶರತ್ ಹೋಟೆಲ್‌ಗಳಿಗೆ ಮರದ ಹೊಟ್ಟು ತುಂಬುವ ಕೆಲಸ ಮಾಡುತ್ತಿದ್ದ. ಆತನಿಗೆ ಒಂದು ಮಗುವಿದ್ದು, ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದಾಳೆ. ಆಕ್ಕಮಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ‘ಸಿನಿಮಾ-ಗಿನಿಮಾ ಬೇಡ’ ಅಂದುಕೊಂಡಿದ್ದ ಅಪ್ಪು ಹೀರೋ ಆಗಿದ್ದೇ ರೋಚಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts