ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಅವರನ್ನು ಇಂದು ಮುಂಬೈನಲ್ಲಿ ಯುವಕನೊಬ್ಬ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಪಾಪ್ ತಾರೆ ರಿಯಾನ್ ಎನ್ನುವಳು ಟ್ವೀಟ್ ಮಾಡಿ ಗಮನ ಸೆಳೆದಿದ್ದಳು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅಜಯ್ ದೇವಗನ್ ರಿಯಾನ್ ನ್ನು ತರಾಟೆಗೆ ತೆಗೆದುಕೊಂಡು ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಮೂಗು ತೋರಿಸಬೇಡಿ ಎಂದಿದ್ದರು.
ಈ ಘಟನೆಯಿಂದ ಸಿಟ್ಟಾಗಿದ್ದ ಸಿಖ್ ಸಮುದಾಯದ ವ್ಯಕ್ತಿಯೊಬ್ಬ ಮುಂಬೈನ ಗೋರೆಗಾಂವ್ ಬಳಿ ಅಜಯ್ ದೇವಗನ್ ತಮ್ಮ ಬಿಎಂಡಬ್ಲೂ ಕಾರ್ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿ ತರಾಟೆಗೆ ತೆಗೆದುಕೊಂಡಿದ್ದಾನೆ. ಅಜಯ್ ದೇವಗನ್ ನೀನು ಪಂಜಾಬ್ ವಿರುದ್ಧ ಇದ್ದೀಯಾ ಎಂದು ಹೇಳಿದ್ದಾನೆ.
A visibly deranged man claiming to be a supporter of farmers, stops Ajay Devgn’s moving car and hurls expletives at him for urging farmers to not indulge in violence at the instigation of foreign forces. pic.twitter.com/yHDpaMc84x
— Sonam Mahajan (@AsYouNotWish) March 2, 2021
ನಿನಗೆ ಪಂಜಾಬ್ ಆಹಾರ ಕೊಟ್ಟಿದೆ, ನೀನು ಪಂಜಾಬ್ ವಿರುದ್ಧ ಮಾತನಾಡುತ್ತೀಯಾ, ನಿನಗೆ ನಾಚಿಕೆ ಆಗುವುದಿಲ್ಲವಾ? ಸಿಖ್ ರು ತೊಡುವ ಪೇಟಾಗಳನ್ನು ಸಿನಿಮಾದಲ್ಲಿ ಹೆಮ್ಮೆಯಿಂದ ತೊಡುತ್ತಿಯಾ, ಆದರೆ, ಅವರಿಗೆ ಅವಮಾನ ಆಗುವ ರೀತಿ ಮಾತನಾಡುತ್ತಿಯಾ? ನನ್ನ ಮೇಲೆ ಕಾರ್ ಹತ್ತಿಸು ನೋಡೋಣ, ಯಾಕೆ ಕಾರ್ ಇಳಿದು ಹೊರ ಬರುತ್ತಿಲ್ಲ ಎಂದು ಸೆಲ್ಪಿ ಮೊಬೈಲ್ ವಿಡಿಯೋ ಮಾಡುತ್ತಾ ಯುವಕ ಮಾತನಾಡಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ. ನಂತರ ಭದ್ರತಾ ಸಿಬ್ಬಂದಿ ಯುವಕನನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ. ಆದರೆ, ಅಜಯ್ ದೇವಗನ್ ಮಾತ್ರ ಕಾರ್ ಬಿಟ್ಟು ಕೆಳಗಡೆ ಇಳಿದಿಲ್ಲ.
ವಿವಾದಿತ ಮೂರು ಕೃಷಿ ಕಾಯ್ದೆಗಳ ಬಗ್ಗೆ ಪಂಜಾಬ್ ಹರ್ಯಾಣ ಭಾಗದ ಹೆಚ್ಚಿನ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
‘ನೀವ್ ಏನೇ ಮಾಡಿ.. ನಾನು ಹೆದರೋಳೇ ಅಲ್ಲ..’; ನಟಿ ಕಂಗನಾ ರಣಾವತ್ ಹೀಗಂದಿದ್ಯಾಕೆ?