More

    ಕ್ರಿಯಾಶೀಲತೆ, ಆಸಕ್ತಿ ಹೆಚ್ಚಿಸಿದ ಸ್ಪರ್ಧೆ

    ಹಾನಗಲ್ಲ: ‘ವಿಜಯವಾಣಿ’ ದಿನಪತ್ರಿಕೆ ವತಿಯಿಂದ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯಲ್ಲಿ ಹಾನಗಲ್ಲ ವಿಧಾನಸಭಾ ಕ್ಷೇತ್ರದ ವಿಜೇತರನ್ನು ಪಟ್ಟಣದ ಸರಸ್ವತಿ ಮಹಿಳಾ ಮಂಡಳದ ಸದಸ್ಯೆಯರು ಶುಕ್ರವಾರ ಆಯ್ಕೆ ಮಾಡಿದರು.

    ಮಂಡಳದ ಅಧ್ಯಕ್ಷೆ ಪಾರ್ವತಿಬಾಯಿ ಕಾಶೀಕರ, ಪದಾಧಿಕಾರಿಗಳಾದ ಶಾರದಾ ಉದಾಸಿ, ವಿಜಯಲಕ್ಷ್ಮೀ ಗುಡಗುಡಿ, ಶಾಂತಕ್ಕ ಹೊಳಲದ, ಅಕ್ಕಮ್ಮ ಕುಂಬಾರಿ, ಪುಷ್ಪಾ ಬಸ್ತಿ, ವೀಣಾ ಗುಡಿ, ವಿಜಯಲಕ್ಷ್ಮೀ ಹಳ್ಳಿಕೇರಿ, ರೂಪಾ ಗೌಳಿ, ದಮಯಂತಿ ದೇಶಪಾಂಡೆ, ಲೀಲಾ ಭಟ್, ಅಕ್ಕಮ್ಮ ಸುಗಾವಿ, ಲೀಲಾವತಿ ಗುಡಿ, ವಿಜಯಕ್ಕ ಕಬ್ಬೂರ ಇತರರು ಉಪಸ್ಥಿತರಿದ್ದರು.

    ವಿಜೇತರನ್ನು ಆಯ್ಕೆಗೊಳಿಸಿದ ಮಹಿಳಾ ಮಂಡಳದ ಅಧ್ಯಕ್ಷೆ ಪಾರ್ವತಿಬಾಯಿ ಕಾಶೀಕರ ಮಾತನಾಡಿ, ‘ವಿಜಯವಾಣಿ’ ಪತ್ರಿಕೆ ಪ್ರತಿದಿನ ಹೊಸ ಹೊಸ ಪ್ರಶ್ನೆಗಳ ಮೂಲಕ ಮಹಿಳೆಯರಲ್ಲಿ ಕ್ರಿಯಾಶೀಲತೆ ಹಾಗೂ ಆಸಕ್ತಿ ಹುಟ್ಟಿಸಿದೆ. ಬೆಳಗ್ಗೆ ಪತ್ರಿಕೆ ಬಂದೊಡನೆ ಅಂದಿನ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸವನ್ನು ಹಚ್ಚುವಂತಿತ್ತು. ಇಂಥ ಸ್ಪರ್ಧೆಗಳು ಮೇಲಿಂದ ಮೇಲೆ ಪ್ರಕಟವಾಗುತ್ತಿರಲಿ. ಪತ್ರಿಕೆಯ ಓದುಗರನ್ನು ಹೆಚ್ಚಿಸಲು ಇಂಥ ಕಾರ್ಯ ಸಹಕಾರಿಯಾಗುತ್ತವೆ ಎಂದರು.

    ಹಾನಗಲ್ಲ ವಿಧಾನಸಭಾ ಕ್ಷೇತ್ರ

    • ಕವಿತಾ ಬೆಂಚಿಹಳ್ಳಿ, ಸಿಂಗಾಪುರ ಪ್ಲಾಟ್
    • ರತ್ನವ್ವ ಮೂಲಿಮನಿ ಈಶ್ವರನಗರ
    • ಪ್ರತಿಭಾ ಪಿ.ಬಿ., ಗಂಗಾನಗರ
    • ಕುಸುಮಾ ಶಂಕ್ರಿಕೊಪ್ಪ, ಆಡೂರ
    • ವಸಂತಲತಾ, ಹೊಸಪೇಟೆ ಓಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts