More

    ಪೌರತ್ವ ಕಾಯ್ದೆ ಬೆಂಬಲಿಸಿ ಬಿಜೆಪಿ ಪಂಜಿನ ಮೆರವಣಿಗೆ

    ಯಾದಗಿರಿ: ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಶುಕ್ರವಾರ ಸಂಜೆ ನಗರದ ಶಾಸ್ತ್ರೀ ವೃತ್ತದಿಂದ ಸುಭಾಷ ವೃತ್ತದವರಗೆ ಪಂಜಿನ ಮೆರವಣಿಗೆ ನಡೆಯಿತು.

    ಪಕ್ಷದ ಜಿಲ್ಲಾ ಪ್ರಧಾನಕಾರ್ಯದಶರ್ಿ ಶರಣಗೌಡ ಬಾಡಿಯಾಳ ಮಾತನಾಡಿ, ದೇಶದಲ್ಲಿ ಭಾರಿ ಚರ್ಚೆಯಾಗುತ್ತಿರುವ ಪೌರತ್ವ ಕಾಯ್ದೆಯಿಂದ ಪ್ರತಿಯೊಬ್ಬ ಭಾರತೀಯರಿಗೂ ಅನುಕೂಲಕರವಾಗಿದೆ. ದೇಶದಲ್ಲಿನ ಮುಸ್ಲಿಮರಿಗೆ ಈ ಕಾಯ್ದೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ವಿರೋಧ ಪಕ್ಷಗಳು ಅನಗತ್ಯವಾಗಿ ಜನರಿಗೆ ತಪ್ಪು ಮಾಹಿತಿ ನೀಡಿ ದೇಶದಲ್ಲಿ ಗೊಂದಲವನ್ನುಂಟು ಮಾಡುತ್ತಿದ್ದಾರೆ ಎಂದು ಹೇಳಿದರು.

    ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂಗೂರೇಶ್ವರ ಮಾಲಿಪಾಟೀಲ್, ಪ್ರತಿಯೊಬ್ಬ ಭಾರತೀಯ ನಾಗರಿಕ ಈ ಕಾಯ್ದೆಯನ್ನು ಗೌರವಿಸಬೇಕು. ದೇಶದ ರಕ್ಷಣೆಗಾಗಿ ಈ ಕಾಯ್ದೆ ಅಗತ್ಯವಿದೆ ಎಂದು ಹೇಳಿದರು.

    ಇದಕ್ಕೂ ಮೊದಲು ಶಾಸಕ ವೆಂಕಟರಡ್ಡಿ ಮುದ್ನಾಳ್ ಹಾಗೂ ಸುರಪುರ ಶಾಸಕ ನರಸಿಂಹ ನಾಯಕ ಮೆರವಣಿಗೆಗೆ ಚಾಲನೆ ನೀಡಿದರು. ಸಿದ್ದಣಗೌಡ ಕಾಡಂನೂರ, ವೆಂಕಟರೆಡ್ಡಿ ಅಬ್ಬೆತುಮಕೂರ, ಪರಶುರಾಮ ಕುರಕುಂದಿ, ಸಾಬು ಚಂಡ್ರಿಕಿ, ಹಣಮಂತ ಇಟಗಿ, ಸುರೇಶ ಅಂಬಿಗೇರ, ರುದ್ರಗೌಡ, ದೇವಿಂದ್ರಪ್ಪ ಯರಗೋಳ, ಅಂಬಯ್ಯ ಶಾಬಾದಿ, ಮಾರುತಿ ಕಲಾಲ್, ಎಸ್.ಪಿ.ನಾಡೇಕರ್, ಶಿವಣ್ಣ ಹೂನೂರ, ಶರಣಗೌಡ ತಳಕ, ಬಸವರಾಜ ಗೊಂದೆನೂರ, ಮಹೇಶ ಕುರಕುಂಬಳಾ, ಮಲ್ಲಿಕಾಜರ್ುನ ಕುರಕುಮಬಳಾ, ಶರಣಗೌಡ ಅಲ್ಲಿಪುರ, ಶಿವರಾಜ ದಾಸನಕೇರಿ, ವೆಂಕಟರೆಡ್ಡಿ ಪಗಲಾಪುರ, ಮೌನೇಶ ಬೆಳಗೇರ, ವೀಣಾ ಮೋದಿ, ಸುನಿತಾ ಚವ್ಹಾಣ್, ಸ್ನೇಹಾ ರಾಸೋಳಕರ್, ಶಕುಂತಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts