ಭುವನೇಶ್ವರ್: ಒಡಿಶಾದ ಆಸಿಡ್ ದಾಳಿಯ ಸಂತ್ರಸ್ತೆ ಪ್ರಮೋದಿನಿ ರೌಲ್ ಹೊಸ ಜೀವನ ಪ್ರಾರಂಭಿಸಲು ಸಜ್ಜಾಗಿದ್ದಾರೆ. ಆಸಿಡ್ ದಾಳಿಯಿಂದ ಅನೇಕ ವರ್ಷಗಳವರೆಗೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದ ಪ್ರಮೋದಿನಿ ಬಾಳಿಗೆ ಸರೋಜ್ ಸಾಹು ಬೆಳಕಾಗಿ ಬಂದಿದ್ದಾರೆ.
ಪ್ರಮೋದಿನಿ ಮತ್ತು ಸರೋಜ್ ಮದುವೆ ಸೋಮವಾರ (ಮಾರ್ಚ್ 1) ಒಡಿಶಾದ ಜಗತ್ಸಿಂಗ್ಪುರದಲ್ಲಿ ಕುಟುಂಬ ಹಾಗು ಆಪ್ತರ ಸಮ್ಮುಖದಲ್ಲಿ ನಡೆದಿದೆ. ನವಜೋಡಿಗಳು ಸಪ್ತಪದಿ ತುಳಿಯುವ ಮೂಲಕ ನಿಜವಾದ ಪ್ರೀತಿ ಏನು ಎಂಬುದನ್ನು ಪ್ರತಿಯೊಬ್ಬರಿಗೂ ನಿರೂಪಿಸಿದ್ದಾರೆ.
ಇದನ್ನೂ ಓದಿರಿ: ಅಪ್ರಾಪ್ತೆ ಜತೆಗಿನ ಅಶ್ಲೀಲ ಫೋಟೋ ವೈರಲ್ ಮಾಡಿದ ದುರುಳರು
28 ವರ್ಷದ ಪ್ರಮೋದಿನಿಯನ್ನು ರಾಣಿ ಹೆಸರಿನಿಂದಲೂ ಕರೆಯುತ್ತಾರೆ. 2018ರ ಪ್ರೇಮಿಗಳ ದಿನದಂದು ಬಹುಕಾಲದ ಸ್ನೇಹಿತ ಸರೋಜ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸರಳ ಸಮಾರಂಭದಲ್ಲಿ ಇಬ್ಬರು ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದರು. ಈ ವೇಳೆ 20 ಮಂದಿ ಆಸಿಡ್ ಸಂತ್ರಸ್ತರು ಡ್ಯಾನ್ಸ್ ಸಹ ಮಾಡಿದ್ದರು.
ಆಸಿಡ್ ದಾಳಿ ಹಿನ್ನೆಲೆ ಏನು?
ಪ್ರಮೋದಿನಿ ಜೀವನ ಕರಾಳ ತಿರುವು ಪಡೆದುಕೊಂಡಿದ್ದೇ 2009ರ ಮೇ 4ರಂದು. ಮದುವೆ ಪ್ರಸ್ತಾವನೆಯನ್ನು ನಿರಾಕರಿಸಿದ್ದಕ್ಕೆ ಪ್ಯಾರಾಮಿಲಿಟಿರ್ ಜವಾನ್ ಓರ್ವ ಪ್ರಮೋದಿನಿ ಮೇಲೆ ಜಗತ್ಸಿಂಗ್ಪುರದಲ್ಲಿ ಆಸಿಡ್ ದಾಳಿ ಮಾಡಿದ್ದ. ಈ ವೇಳೆ ರಾಣಿಗೆ ಕೇವಲ 16 ವರ್ಷವಷ್ಟೇ. ಶೇ.80 ರಷ್ಟು ಸುಟ್ಟಗಾಯಗಳಿಂದ ಬಳಲಿದ ರಾಣಿ ತನ್ನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಳು. ಸುಮಾರು 9 ತಿಂಗಳು ಕಾಲ ಐಸಿಯುನಲ್ಲಿ ಇದ್ದಳು. ಸುಮಾರು 5 ವರ್ಷ ಕಟಕ್ ಆಸ್ಪತ್ರೆಯಲ್ಲಿ ರಾಣಿ ನೋವಿನ ದಿನಗಳನ್ನು ಕಳೆದಳು.
ಕತ್ತಲಾಗಿದ್ದ ಬಾಳಿಗೆ ಬೆಳಕಾಗಿ ಬಂದ ಸರೋಜ್
2014ರಲ್ಲಿ ರಾಣಿ ಖಾಸಗಿ ಕ್ಲೀನಿಕ್ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೆಡಿಕಲ್ ರೆಪ್ರೆಸೆಂಟೇಟಿವ್ ಸರೋಜ್ ಭೇಟಿಯಾಗುತ್ತದೆ. ಇಬ್ಬರ ಭೇಟಿ ಪ್ರೇಮಕ್ಕೆ ತಿರುಗುತ್ತದೆ. ಬಳಿಕ ರಾಣಿಯನ್ನು ನೋಡಿಕೊಳ್ಳಲು ಮತ್ತು ಆಕೆಯ ಆರೈಕೆ ಮಾಡಲು ಸರೋಜ್ ತನ್ನ ಕೆಲಸವನ್ನು ತೊರೆಯುತ್ತಾನೆ. ರಾಣಿ ಗುಣಮುಖಳಾಗಲು ಆರಂಭಿಸಿದಾಗ 2015ರಲ್ಲಿ ಶೀರೋಸ್ ಸಹಾಯವಾಣಿಯಲ್ಲಿ ಕೆಲಸಕ್ಕೆ ಸೇರುತ್ತಾಳೆ. ಇತ್ತ ಸರೋಜ್ ಕೆಫೆಯೊಂದರಲ್ಲಿ ಸೇರಿಕೊಳ್ಳುತ್ತಾರೆ.
ಹೀಗಿರುವಾಗ 2016ರಲ್ಲಿ ಸರೋಜ್, ರಾಣಿಗೆ ಮದುವೆ ಪ್ರಸ್ತಾವನೆ ಮುಂದಿಡುತ್ತಾನೆ. ಆದರೆ, ಸರೋಜ್ನನ್ನು ನೋಡುವಷ್ಟು ಆಕೆಯ ದೃಷ್ಟಿ ಇರುವುದಿಲ್ಲ. ಹೀಗಿರುವಾಗ 2017ರ ಜುಲೈನಲ್ಲಿ ಮತ್ತೊಂದು ಆಪರೇಷನ್ ಆದಾಗ ರಾಣಿಗೆ ಸ್ವಲ್ಪ ದೃಷ್ಟಿ ಬರುತ್ತದೆ. ಇದಾದ ಬಳಿಕ ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ. ಇದೀಗ ಮದುವೆಯಾಗು ಮೂಲದ ಹೊಸ ಬಾಳು ಪ್ರವೇಶಿಸಿದ್ದಾರೆ. (ಏಜೆನ್ಸೀಸ್)
ಇನ್ಸ್ಟಾಗ್ರಾಂನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ, ವಿಶ್ವದ ಮೊದಲ ಕ್ರಿಕೆಟರ್ ದಾಖಲೆ ಬರೆದ ಕೊಹ್ಲಿ..!
ಬೀಡಾಸ್ಟಾಲ್ ಬಳಿ ಪತ್ತೆಯಾಯಿತು ಡೆಡ್ಬಾಡಿ!; ಮೂರು ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ..
ಭ್ರಷ್ಟಾಚಾರ ಸಾಬೀತು: ಫ್ರಾನ್ಸ್ನ ಈ ಮಾಜಿ ಅಧ್ಯಕ್ಷರಿಗೆ ಜೈಲು ಶಿಕ್ಷೆ ಸಿಕ್ಕಿತು