ಮುಂಬೈ: ತರಬೇತಿ ನಿರತ ಗಗನಸಖಿ ರೂಪಾಲ್ ಓಗ್ರೆ(24) ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ವಿಕ್ರಮ್ ಅತ್ವಾಲ್ ಪೊವೈ (ಮನೆ ಕೆಲಸದವ) ಲಾಕಪ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿಕ್ರಮ್ ಅತ್ವಾಲ್(40) ತನ್ನ ಪ್ಯಾಂಟ್ನಿಂದಲ್ಲೇ ಜೈಲಿ ಲಾಕಪ್ನೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉನ್ನತ ಸುದ್ದಿ ಮೂಲಗಳು ತಿಳಿಸಿವೆ. ಛತ್ತೀಸ್ಗಢ ಮೂಲದ ರೂಪಾಲ್ ಓಗ್ರೆರನ್ನು ಸೆಪ್ಟೆಂಬರ್ 3ರಂದು ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಅಂಧೇರಿ ಠಾಣೆ ಪೊಲೀಸರು ಆರೋಪಿ ಪತ್ತೆಗಾಗಿ 12 ತಂಡಗಳನ್ನು ರಚಿಸಿದ್ದರು. ಫ್ಲಾಟ್ನಲ್ಲಿ ಕೆಲಸಕ್ಕಿದ್ದ ವಿಕ್ರಮ್ನನ್ನು ತನಿಖಾ ತಂಡ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹತ್ಯೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದ. ಸೆಪ್ಟೆಂಬರ್ 06ರಂದು ಆರೋಪಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು. ಲಾಕಪ್ನಲ್ಲಿ ಇದ್ದ ವೇಳೆ ಆರೋಪಿ ತನ್ನ ಪ್ಯಾಂಟ್ನಿಂದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.