More

    ಗಗನಸಖಿ ಹತ್ಯೆ ಪ್ರಕರಣ; ಪೊಲೀಸ್​ ಲಾಕಪ್​ನಲ್ಲಿ ಆರೋಪಿ ಆತ್ಮಹತ್ಯೆ

    ಮುಂಬೈ: ತರಬೇತಿ ನಿರತ ಗಗನಸಖಿ ರೂಪಾಲ್​ ಓಗ್ರೆ(24) ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ವಿಕ್ರಮ್​ ಅತ್ವಾಲ್​ ಪೊವೈ (ಮನೆ ಕೆಲಸದವ) ಲಾಕಪ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಆರೋಪಿ ವಿಕ್ರಮ್​ ಅತ್ವಾಲ್​(40) ತನ್ನ ಪ್ಯಾಂಟ್​ನಿಂದಲ್ಲೇ ಜೈಲಿ ಲಾಕಪ್​ನೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉನ್ನತ ಸುದ್ದಿ ಮೂಲಗಳು ತಿಳಿಸಿವೆ. ಛತ್ತೀಸ್​ಗಢ ಮೂಲದ ರೂಪಾಲ್​ ಓಗ್ರೆರನ್ನು ಸೆಪ್ಟೆಂಬರ್​ 3ರಂದು ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು.

    ಪ್ರಕರಣ ದಾಖಲಿಸಿಕೊಂಡ ಅಂಧೇರಿ ಠಾಣೆ ಪೊಲೀಸರು ಆರೋಪಿ ಪತ್ತೆಗಾಗಿ 12 ತಂಡಗಳನ್ನು ರಚಿಸಿದ್ದರು. ಫ್ಲಾಟ್​ನಲ್ಲಿ ಕೆಲಸಕ್ಕಿದ್ದ ವಿಕ್ರಮ್​ನನ್ನು ತನಿಖಾ ತಂಡ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹತ್ಯೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದ. ಸೆಪ್ಟೆಂಬರ್​ 06ರಂದು ಆರೋಪಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು. ಲಾಕಪ್​ನಲ್ಲಿ ಇದ್ದ ವೇಳೆ ಆರೋಪಿ ತನ್ನ ಪ್ಯಾಂಟ್​ನಿಂದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts