ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಅಂದುಕೊಂಡಂತೆ ಆಗುತ್ತಿಲ್ಲ. ಏಕೆಂದರೆ ಆರ್ಸಿಬಿ ಪಾಲಿಗೆ ಹೊಸ ಅಧ್ಯಾಯ ದೊಡ್ಡ ಹೊಡೆತ ನೀಡಿದ್ದು, ಆಡಿರುವ 8 ಪಂದ್ಯಗಳ ಪೈಕಿ 7ರಲ್ಲಿ ಸೋತು 1ರಲ್ಲಿ ಗೆಲ್ಲುವ ಮೂಲಕ ಅನಧಿಕೃತವಾಗಿ ಪ್ಲೇಆಫ್ನಿಂದ ಹೊರಬಿದ್ದಿದೆ. ಹಾಲಿ ಆವೃತ್ತಿಯಲ್ಲಿ ಆರ್ಸಿಬಿ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವರು ಕಿಡಿಕಾರುತ್ತಿದದು, ಇದಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಆರನ್ ಫಿಂಚ್ ಕಾರಣವನ್ನು ನೀಡಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಸುದ್ದಿವಾಹಿನಿಯ ಸಂದರ್ಶನದಲ್ಲಿ ಆರ್ಸಿಬಿಯ ಪ್ರದರ್ಶನದ ಕುರಿತು ಮಾತನಾಡಿದ ಆರನ್ ಫಿಂಚ್ ಹಾಲಿ ಟೂರ್ನಿಯಲ್ಲಿ ಸತತ ಸೋಲುಗಳ ಕುರಿತಾದ ಕಾರಣಗಳನ್ನು ವಿವರಿಸುತ್ತ ಹೋಗಿದ್ದಾರೆ.
ಹಾಲಿ ಟೂರ್ನಿಯಲ್ಲಿ ಆರ್ಸಿಬಿ ಸತತವಾಗಿ ಸೋಲಲು ನನ್ನ ಪ್ರಕಾರ ಎರಡು ಕಾರಣಗಳಿವೆ. ಮೊದಲನೆಯದ್ದು, ಹೆಚ್ಚಾಗಿ ಬ್ಯಾಟ್ಸ್ಮನ್ಗಳ ಮೇಲೆ ಅವಲಂಬಿತರಾಗುವುದು ಮತ್ತು ಎರಡನೇಯದ್ದು ವಿಶ್ವದರ್ಜೆಯ ಸ್ಪಿನ್ನರ್ ತಂಡದಲ್ಲಿ ಇಲ್ಲದೇ ಇರುವುದು ಎಂದು ಹೇಳುತ್ತೇನೆ. ಏಕೆಂದರೆ ಕಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿಗೆ ಸ್ಪಿನ್ನರ್ನ ಕೊರತೆ ಎದ್ದು ಕಾಣಿಸುತ್ತಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮತದಾನಕ್ಕಾಗಿ ರ್ಯಾಪಿಡೋ ವತಿಯಿಂದ ಉಚಿತ ಸೇವೆ; ಯಾರೆಲ್ಲಾ ಇದರ ಸೇವೆ ಪಡೆಯಬಹುದು, ಇಲ್ಲಿದೆ ಮಾಹಿತಿ
ಮಧ್ಯಮ ಕ್ರಮಾಂಕದಲ್ಲಿ ಆಸ್ಟ್ರೇಲಿಯಾ ಮೂಲದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಇಳಿಸುವುದು ಸೂಕ್ತವಲ್ಲ ಎಂದು ಹೇಳುತ್ತೇನೆ. ಏಕೆಂದರೆ ಕೆಲವೊಮ್ಮೆ ತಂಡದಿಂದ ಹೊರಗುಳಿದಿರುವ ಆಟಗಾರರು ಮರಳಿ ಕಣಕ್ಕಿಳಿದರೆ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಾರೆ. ಏಕೆಂದರೆ ಅತಿ ದುಬಾರಿ ಬೆಲೆಗೆ ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿಸಲಾಗಿದ್ದು, ಮಧ್ಯಮ ಕ್ರಮಾಂಕದ ಬದಲು ಟಾಪ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಲಾಗುತ್ತಿದೆ.
ನನ್ನ ಪ್ರಕಾರ ಹಾಲಿ ಆವೃತ್ತಿಯಲ್ಲಿ ಆರ್ಸಿಬಿ ಪರ ಕ್ಯಾಮರೂನ್ ಗ್ರೀನ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ದುಬಾರಿ ಮೊತ್ತ ಪಡೆದರು ತಾವಾಡುತ್ತಿರುವ ತಂಡಕ್ಕೆ ನ್ಯಾಯ ಒದಗಿಸದೆ ಇರುವುದು ಸೂಕ್ತವಲ್ಲ. ಇಷ್ಟರ ಹೊರತಾಗಿಯೂ ಆರ್ಸಿಬಿ ಒಂದು ವೇಳೆ ಪ್ಲೇಆಫ್ ಪ್ರವೇಶಿಸಿದರೆ ಅದು ದೊಡ್ಡ ಪವಾಡವೇ ಆಗಿರುತ್ತದೆ ಎಂದು ಮಾಜಿ ಕ್ರಿಕೆಟಿಗ ಆರನ್ ಫಿಂಚ್ ಅಭಿಪ್ರಾಯಪಟ್ಟಿದ್ದಾರೆ.