ಹುಬ್ಬಳ್ಳಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಆಪರೇಷನ್ ಕಮಲವನ್ನು ವಿಫಲಗೊಳಿಸಿ, ಬಹುಮತ ಸಾಬೀತಪಡಿಸಿದ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಜಿಲ್ಲಾಧ್ಯಕ್ಷ ಅನಂತಕುಮಾರ ಬುಗಡಿ, ಮುಖಂಡರಾದ ವಿಕಾಸ ಸೊಪ್ಪಿನ, ಕಿಶೋರ ಶೆಟ್ಟಿ, ಶಶಿಕುಮಾರ ಸುಳ್ಳದ, ಬಸವರಾಜ ತೇರದಾಳ, ನವೀನಸಿಂಗ್ ರಜಪೂತ, ಎಂ.ಎಸ್.ಹುಬ್ಳಿಕರ, ಮಲ್ಲಪ್ಪ ತಡಸದ, ಹಸನಸಾಬ ಇನಾಮದಾರ, ಬಾಬು ಶೇಖ್, ಇತರರಿದ್ದರು.