ಹುಬ್ಬಳ್ಳಿ: ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಾರಾಟವಾಗಿದ್ದ ಗಂಡು ಮಗು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪತ್ತೆಯಾಗಿದೆ.
ರೇಣುಕಾ ಕಾಂಬಳೆ ಮತ್ತು ಮಂಜುನಾಥ ದಂಪತಿಗೆ ಗಂಡು ಮಗು ಜನಿಸಿತ್ತು. ಹೆತ್ತಮ್ಮ ಮತ್ತು ಸಂಬಂಧಿಕರೇ ಈ ಮಗುವನ್ನು ಕಳೆದ ಆಗಸ್ಟ್ 26ರಂದು ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸ್ಟಾಪ್ ನರ್ಸ್ ಕಸ್ತೂರಿ ಮೂಲಕ ಸಿಂಧಗಿಯ ಆಟೋ ಚಾಲಕರೊಬ್ಬರಿಗೆ ಮಾರಾಟ ಮಾಡಿದ್ದಳು. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು.
ಘಟನೆ ಕುರಿತು ಸೆ.12ರಂದು ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನರ್ಸ್ ಕಸ್ತೂರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಮಗುವಿನ ತಂದೆ ಮಂಜುನಾಥನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿತ್ತು. ಮಗುವಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.
ಇಷ್ಟೆಲ್ಲ ಬೆಳವಣಿಗೆ ಬಳಿಕ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ, ಆ ಮಗುವನ್ನು ಖರೀದಿಸಿ ಸಾಕುತ್ತಿದ್ದ ಆಟೋ ಚಾಲಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆತಂದಿದ್ದ. ಮಗುವನ್ನು ತೀವ್ರ ನಿಗಾಘಟಕದಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತಿದೆ. ಈ ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ತನಗೆ ಮಕ್ಕಳಿಲ್ಲದ ಕಾರಣ ಮಗುವನ್ನು ಪಡೆದಿದ್ದಾಗಿ ಆಟೋ ಚಾಲಕ ಹೇಳಿದ್ದಾನೆ.
ನನ್ನ ತಂದೆಗೆ ಹಲವು ಕಾಲ್ಗರ್ಲ್ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್ ಮಾಡ್ತಿದ್ದ…
ಪತ್ನಿ ಕಣ್ಣೆದುರೇ ನವವಿವಾಹಿತ ದುರಂತ ಸಾವು! ಅಳಿಯನ ಪ್ರಾಣ ಉಳಿಸಲು ಹೋದ ಅತ್ತೆಯೂ ಬದುಕಲಿಲ್ಲ
ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್