ತುಮಕೂರು: ನಗರದ ಅಶೋಕ ಲಾಡ್ಜ್ನಲ್ಲಿ ಬುಧವಾರ ಬೆಳಗ್ಗೆ ಪತ್ನಿಯ ಕಾಲನ್ನೇ ಮಚ್ಚಿನಿಂದ ಕತ್ತರಿಸಿ ವಿಕೃತಿ ಮೆರೆದ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯಕ್ಕೆ ಕಾರಣ ಏನೆಂದು ಬಯಲಾಗಿದ್ದು, ಆಸ್ಪತ್ರೆಯಲ್ಲಿರುವ ಪತ್ನಿ ತನ್ನ ಗಂಡನ ಅಕ್ರಮ ಸಂಬಂಧದ ಬಾಯ್ಬಿಟ್ಟಿದ್ದಾಳೆ.
ಗಂಡನಿಂದ ಹಲ್ಲೆಗೆ ಒಳಗಾದಾಕೆ ಹೆಸರು ಅನಿತಾ. ಗದಗ ತಾಲೂಕು ಪಾಪನಾಶಿ ತಾಂಡಾದ ಬಾಬು(34) ಆರೋಪಿ. ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಬಾಬು ನಾಲ್ಕು ವರ್ಷದ ಹಿಂದೆ ಮಧುಗಿರಿ ಮೂಲದ ಅನಿತಾಳನ್ನು ಮದುವೆ ಆಗಿದ್ದ. ಮದುವೆಯಾದ ಕೆಲವೇ ದಿನಗಳಲ್ಲಿ ಸಂಸಾರದಲ್ಲಿ ಬಿರುಕು ಮೂಡಿದ್ದರಿಂದ ಇವರಿಬ್ಬರೂ ದೂರವಾಗಿ ವಿಚ್ಛೇದನ ಬಯಸಿದ್ದರು. ದೂರವಿದ್ದ ಪತ್ನಿಯನ್ನು ಮಾತನಾಡುವ ನೆಪದಲ್ಲಿ ತುಮಕೂರಿನ ಲಾಡ್ಜ್ಗೆ ಬುಧವಾರ ಬೆಳಗ್ಗೆ ಕರೆಸಿಕೊಂಡು ಆಕೆಯ ಕಾಲು ಕತ್ತರಿಸಿದ್ದಾನೆ. ಇದೇ ವೇಳೆ ತಾನೂ ಚಾಕುವಿನಿಂದ ಚುಚ್ಚಿಕೊಂಡು ಹೈಡ್ರಾಮಾ ಸೃಷ್ಟಿಸಿದ್ದ. ಇದ್ಯಾವುದಕ್ಕೂ ಕರಗದ ಪತ್ನಿ, ಈ ಕೃತ್ಯಕ್ಕೆ ಕಾರಣ ಏನೆಂದು ಹೇಳಿದ್ದಾಳೆ.
ಬಳಿಕ ಆಂಬುಲೆನ್ಸ್ಗೆ ಕರೆ ಮಾಡಿ, ಲಾಡ್ಜ್ ಸಿಬ್ಬಂದಿಗೆ ವಿಷಯ ಮುಟ್ಟಿಸಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದ್ದ. ವಿಷಯ ತಿಳಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕೊಲ್ಲುವ ಉದ್ದೇಶದಿಂದಲೇ ಲಾಡ್ಜ್ಗೆ ಹೆಂಡತಿಯನ್ನು ಕರೆಸಿಕೊಂಡ ಬಾಬು, ಬ್ಯಾಗ್ನಲ್ಲಿ ಮಚ್ಚನ್ನೂ ತಂದಿದ್ದ. ತೊಡೆ ಭಾಗಕ್ಕೆ ಮಚ್ಚಿನೇಟು ಬಿದ್ದು, ಗಂಭೀರ ಗಾಯಗೊಂಡ ಅನಿತಾಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನನ್ನ ಗಂಡನಿಗೆ ಅಕ್ರಮ ಸಂಬಂಧ ಇತ್ತು. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಮಾತನಾಡುವ ನೆಪದಲ್ಲಿ ಕರೆಸಿಕೊಂಡು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಅನಿತಾ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ ಹೋಟೆಲ್ನಲ್ಲಿ ಎಚ್ಡಿಕೆ ರಾಸಲೀಲೆ ಆಡಿಕೊಂಡಿದ್ರು… ವಿವಾದದ ಕಿಡಿ ಹೊತ್ತಿಸಿದ ಯೋಗೇಶ್ವರ್
ತುಂಬಾ ದಪ್ಪಗಿದ್ದೀನಿ, ಕ್ಷಮಿಸಿ ಪಪ್ಪಾ… ತಂದೆ ಮೊಬೈಲ್ಗೆ ಸಂದೇಶ ರವಾನೆ: ಬೆಳಗಾಗುವಷ್ಟರಲ್ಲಿ ನಡೆದೇಹೋಯ್ತು ದುರಂತ