ತಿರುಪತಿ: ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕಾಗಿ ಕೋಟ್ಯಂತರ ಭಕ್ತರು ಚಾತಕಪಕ್ಷಿಗಳಂತೆ ಕಾಯುತ್ತಾರೆ. ಇದೊಂದು ಸಲ ದರ್ಶನದ ಟಿಕೆಟ್ ಬುಕಿಂಗ್ ಆದ್ರೆ ಸಾಕಪ್ಪ ಎಂದು ಮನದಲ್ಲೇ ದೇವರನ್ನ ನೆನೆದು ಟಿಕೆಟ್ ಪಡೆಯಲು ಯತ್ನಿಸುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ವಿಶೇಷ ದರ್ಶನದ ನಕಲಿ ಟಿಕೆಟ್ ಅನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ, ಭಕ್ತರನ್ನು ವಂಚಿಸುತ್ತಿದ್ದ ಜಾಲ ಪತ್ತೆಯಾಗಿದೆ.
ವಿಶೇಷ ದರ್ಶನದ ನಕಲಿ ಟಿಕೆಟ್ ಅನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ, ಭಕ್ತರನ್ನು ವಂಚಿಸುತ್ತಿದ್ದ ಆರೋಪದ ಮೇರೆಗೆ ಟಿಟಿಡಿ ಅಧಿಕಾರಿಗಳು ತಿರುಮಲ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿದ್ದಾರೆ. ತೆಲಂಗಾಣದಿಂದ ಬಂದಿದ್ದ ಭಕ್ತರು ಮಧ್ಯವರ್ತಿಯ ಬಳಿ 300 ರೂ. ಮೌಲ್ಯದ ಟಿಕೆಟ್ಗೆ ತಲಾ 3,300 ರೂ. ತೆತ್ತು ಖರೀದಿಸಿ, ದೇವರ ದರ್ಶನಕ್ಕೆ ಮುಂದಾಗಿದ್ದರು. ಪ್ರವೇಶದ್ವಾರದ ಬಳಿ ಭಕ್ತರ ಬಳಿ ಇದ್ದ ಟಿಕೆಟ್ ಪರಿಶೀಲಿಸಿದಾಗ ಅದು ನಕಲಿ ಎಂಬುದು ಸ್ಪಷ್ಟವಾಗಿತ್ತು.
ಹೊಸ ವರ್ಷದಂದು ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಮಧ್ಯಪ್ರದೇಶದಿಂದ ಬಂದಿದ್ದ ಕುಟುಂಬದವರು 300 ರೂ. ಮೌಲ್ಯದ ವಿಶೇಷ ದರ್ಶನದ ಟಿಕೆಟ್ ಅನ್ನು ತಲಾ 7 ಸಾವಿರ ರೂ.ಗೆ ಖರೀದಿಸಿದ್ದರು. ಅದು ಕೂಡ ನಕಲಿ ಎಂದು ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಟಿಟಿಡಿ ಅಧಿಕಾರಿಗಳು ತಿರುಮಲ 1 ಟೌನ್ ಪೊಲೀಸ್ ಠಾಣೆಯಲ್ಲಿ ಬಾಲಾಜಿ (ಮಧ್ಯವರ್ತಿ), ಅರುಣ್ (ಲಡ್ಡು ಮಾರಾಟ ಕೌಂಟರ್ನ ಉದ್ಯೋಗಿ), ಎ.ಕೃಷ್ಣರಾವ್ (ಎಸ್ಪಿಎಫ್ ಕಾನ್ಸ್ಟೆಬಲ್), ನಾಗೇಂದ್ರ (ತ್ರಿಲೋಕ್ ಏಜೆನ್ಸಿ ಟಿಕೆಟ್ ಮಾರಾಟ ಕೌಂಟರ್ನ ಮಾಜಿ ಉದ್ಯೋಗಿ) ವಿರುದ್ಧ ದೂರು ದಾಖಲಿಸಿದ್ದಾರೆ.
ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಮಲ 2 ಟೌನ್ ಪೊಲೀಸ್ ಠಾಣೆಯಲ್ಲಿ ಚೆಂಗರೆಡ್ಡಿ (ಮಧ್ಯವರ್ತಿ), ಜೆ. ದೇವೇಂದ್ರ ಪ್ರಸಾದ್ ಮತ್ತು ಇ. ವೆಂಕಟ್ (ತ್ರಿಲೋಕ್ ಏಜೆನ್ಸಿ ಟಿಕೆಟ್ ಮಾರಾಟ ಕೌಂಟರ್ನ ಮಾಜಿ ಉದ್ಯೋಗಿಗಳು) ವಿರುದ್ಧ ದೂರು ದಾಖಲಿಸಲಾಗಿದೆ.
ಹಣಕ್ಕಾಗಿ ಒಂದೂವರೆ ವರ್ಷದಲ್ಲಿ 3 ಮದ್ವೆಯಾದ ಭೂಪ! ಮೈಸೂರಿನ ವಕೀಲನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ
ಅದು ನಮ್ಮಿಬ್ಬರ ಕರುಳ ಬಳ್ಳಿ ಜಗಳ, ಅಕ್ಕನ ಮಗಳೋ- ಮಾವನ ಮಗನೋ ಎಂಬಂತೆ ಜಗಳ ಆಗಿದೆ ಅಷ್ಟೇ…
ಮಗನನ್ನು ಅಂಗನವಾಡಿಗೆ ಸೇರಿಸಿದ ಚನ್ನಪಟ್ಟಣದ ಜಡ್ಜ್! ನ್ಯಾಯಾಧೀಶರ ನಡೆ ಕಂಡು ಹುಬ್ಬೇರಿಸಿದ ಸ್ಥಳೀಯರು