More

    ಕುದಿವ ಎಣ್ಣೆಗೆ ಬಲಿಯಾದ ಮೂರು ವರ್ಷದ ಕಂದಮ್ಮ; ಫಲಿಸಲಿಲ್ಲ 25 ದಿನಗಳ ಜೀವನ್ಮರಣ ಹೋರಾಟ

    ಹೊಸಕೋಟೆ: ಒಲೆಯ ಮೇಲೆ ಕಾಯಲು ಇಟ್ಟಿದ್ದ ಬಿಸಿ ಎಣ್ಣೆಯನ್ನು ಮೈಮೇಲೆ ಸುರಿದುಕೊಂಡಿದ್ದ 3 ವರ್ಷದ ಬಾಲಕ 25 ದಿನಗಳ ಜೀವನ್ಮರಣ ಹೋರಾಟ ನಡೆಸಿ ಕಡೆಗೂ ಕಾಲನ ಕರೆಗೆ ಓಗೊಟ್ಟಿದ್ದಾನೆ. ನಗರದ ಎಂವಿ ಬಡಾವಣೆಯ ರವಿ ಹಾಗೂ ಪ್ರತಿಮಾ ದಂಪತಿಯ ಮುದ್ದಿನ ಮಗು ಡಿ.15ರಂದು ಇಹಲೋಕ ತ್ಯಜಿಸಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

    ಆಟವಾಡಲು ಹೋಗಿ ಸುಟ್ಟುಕೊಂಡ:
    ನ.25ರಂದು ತಾಯಿ ಪ್ರತಿಮಾ ಅಡುಗೆ ತಯಾರಿಯಲ್ಲಿದ್ದರು. ಈ ವೇಳೆ ಬಾಂಡಲಿಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲೆ ಕಾಯಲು ಇಟ್ಟಿದ್ದರು. ಅಡುಗೆ ಮನೆಯ ಬಳಿಯೇ ಆಟವಾಡುತ್ತಿದ್ದ ಮಗು ಅಚಾನಕ್ ಆಗಿ ಕುದಿಯುತ್ತಿದ್ದ ಎಣ್ಣೆ ಬಾಂಡಲಿಯನ್ನು ಮೈಮೇಲೆ ಎಳೆದುಕೊಂಡಿದೆ. ಬಿಸಿ ಎಣ್ಣೆಯಿಂದ ಮುಖ ಸೇರಿ ದೇಹದ ಶೇ.70 ಭಾಗ ಸುಟ್ಟು ಹೋಗಿತ್ತು. ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗುವನ್ನು ಉಳಿಸಿಕೊಳ್ಳಲು ವೈದ್ಯಲೋಕಕ್ಕೆ ಸಾಧ್ಯವಾಗಿಲ್ಲ.

    ಸುಂದರ ಕನಸು ಮಣ್ಣುಪಾಲು:
    ಮಗುವಿನ ತಂದೆ ರವಿ ಬಾಲ್ಯದಿಂದಲೂ ಬೇರೆಯವರ ಮನೆಯಲ್ಲಿ ಮನೆಕೆಲಸದಾಳಗಿ ದುಡಿಯುತ್ತಿದ್ದ, ಆ ಮನೆ ಮಾಲೀಕರೇ ಹುಡುಗಿಯನ್ನು ನೋಡಿ ಮದುವೆ ಮಾಡಿಸಿದ್ದರು. ಬಳಿಕ ಮನೆ ಕೆಲಸ ಬಿಟ್ಟು ದಂಪತಿ ಇಬ್ಬರು ಕೂಲಿ ಕೆಲಸಕ್ಕೆ ಸೇರಿಕೊಂಡು ಹೊಸ ಜೀವನ ಆರಂಭಿಸಿದ್ದರು. ಇವರ ಬಾಳನೌಕೆಗೆ ಮನೋಜ್ ಆಗಮಿಸಿದ್ದ. ಮಗನ ಸುಂದರ ಭವಿಷ್ಯ ಕಂಡಿದ್ದ ದಂಪತಿ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts