More

    ಮಂಗಳೂರು-ಬೆಂಗಳೂರು ನಡುವೆ ವಾರದಲ್ಲಿ ಮೂರು ದಿನ ವಿಶೇಷ ರೈಲು ಸಂಚಾರ

    ಮಂಗಳೂರು: ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಅನುಕೂಲವಾಗುವಂತೆ ಮಂಗಳೂರು ಸೆಂಟ್ರಲ್​ ಮತ್ತು ಬೆಂಗಳೂರು ಸಿಟಿ ಜಂಕ್ಷನ್​ ನಡುವೆ ಮೈಸೂರು ಮಾರ್ಗದಲ್ಲಿ ಜುಲೈ 26ರಿಂದ ಆಗಸ್ಟ್​ 31ರ ತನಕ ವಾರದಲ್ಲಿ ಮೂರು ದಿನ ವಿಶೇಷ ರಾತ್ರಿ ರೈಲು ಸೇವೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

    ನಿರಂತರ ಮಳೆ ಮತ್ತು ಭೂಕುಸಿತ ಪರಿಣಾಮ ರಸ್ತೆ ಸಂಪರ್ಕ ಮಾರ್ಗ ಸಮಸ್ಯೆ ಆಗಿರುವುದರಿಂದ ಮಂಗಳೂರು- ಬೆಂಗಳೂರು ನಡುವೆ ದಿನಂಪ್ರತಿ ಹೆಚ್ಚುವರಿ ರೈಲು ಒದಗಿಸುವಂತೆ ಪಶ್ಚಿಮ ಕರಾವಳಿ ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಮಾಡಿದ ಮನವಿಗೆ ರೈಲ್ವೆ ಮಂಡಳಿ ಈ ಮೂಲಕ ಸ್ಪಂದಿಸಿದೆ.

    ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಡಲಿರುವ ಹೊಸ ರೈಲು ವಿವಿಧ ನಿಲ್ದಾಣಗಳಿಗೆ ತಲುಪುವ ಸಮಯ ಹೀಗಿದೆ..
    ಕೆಂಗೇರಿ- ರಾತ್ರಿ 8.49
    ರಾಮನಗರ- ರಾತ್ರಿ 9.13
    ಚನ್ನರಾಯಪಟ್ಟಣ- ರಾತ್ರಿ 9.24
    ಮಂಡ್ಯ- ರಾತ್ರಿ 9.54
    ಮೈಸೂರು ಜಂಕ್ಷನ್​- ರಾತ್ರಿ 11
    ಕೃಷ್ಣರಾಜನಗರ- ರಾತ್ರಿ 11.49
    ಹೊಳೆನರಸಿಪುರ- ರಾತ್ರಿ 12.43
    ಹಾಸನ- ರಾತ್ರಿ 1.35
    ಸಕಲೇಶಪುರ- ಬೆಳಗಿನಜಾವ 3
    ಸುಬ್ರಹ್ಮಣ್ಯ ರೋಡ್​- ಬೆಳಗ್ಗೆ 6.10
    ಕಬಕಪುತ್ತೂರು- ಬೆಳಗ್ಗೆ 7
    ಬಂಟ್ವಾಳ- ಬೆಳಗ್ಗೆ 7.30
    ಪಡೀಲ್-​ ಬೆಳಗ್ಗೆ 8.25
    ಮಂಗಳೂರು ಸೆಂಟ್ರಲ್- ಬೆಳಗ್ಗೆ​ 09.05

    ಮಂಗಳೂರಿನಿಂದ ಸಂಜೆ 6.35ಕ್ಕೆ ಹೊರಡುವ ರೈಲು ವಿವಿಧ ನಿಲ್ದಾಣಗಳಿಗೆ ತಲುಪುವ ಸಮಯ ಹೀಗಿದೆ…
    ಮಂಗಳೂರು ಜಂಕ್ಷನ್- ಸಂಜೆ​ 6.48
    ಪಡೀಲ್​- ಸಂಜೆ 7.10
    ಬಂಟ್ವಾಳ- ಸಂಜೆ 7.20
    ಕಬಕಪುತ್ತೂರು- ಸಂಜೆ 7.48
    ಸುಬ್ರಹ್ಮಣ್ಯ ರೋಡ್​- ರಾತ್ರಿ 8.40
    ಸಕಲೇಶಪುರ- ರಾತ್ರಿ 9.20
    ಹಾಸನ- ಮಧ್ಯರಾತ್ರಿ 12.25
    ಹೊಳೆನರಸಿಪುರ- ಮಧ್ಯರಾತ್ರಿ 1.13
    ಕೃಷ್ಣರಾಜನಗರ- ರಾತ್ರಿ 2.08
    ಮೈಸೂರು ಜಂಕ್ಷನ್​- ಬೆಳಗಿನ ಜಾವ 3
    ಮಂಡ್ಯ- ಬೆಳಗಿನ ಜಾವ 3.54
    ಚನ್ನರಾಯಪಟ್ಟಣ- ಬೆಳಗಿನಜಾವ 4.30
    ರಾಮನಗರ- ಬೆಳಗಿನಜಾವ 4.42
    ಕೆಂಗೇರಿ- ಬೆಳಗಿನಜಾವ 5.11
    ಬೆಂಗಳೂರು ಸಿಟಿ ಜಂಕ್ಷನ್​- ಬೆಳಗ್ಗೆ 6.15

    ಮಂಗಳೂರು ಮತ್ತು ಬೆಂಗಳೂರು ಸಂಪರ್ಕಿಸುವ ಹತ್ತಿರದ ಶಿರಾಡಿ ಘಾಟ್​ ಮಾರ್ಗ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ದಿನಂಪ್ರತಿ ಉಭಯ ನಗರಗಳ ನಡುವೆ ತಲಾ ಒಂದು ಹಗಲು ರೈಲು ಮತ್ತು ರಾತ್ರಿ ರೈಲು ಇದೆ. ಈ ಮಾರ್ಗದಲ್ಲಿ ಹೆಚ್ಚುವರಿ ರೈಲಿನ ಅವಶ್ಯಕತೆ ತುಂಬಾ ಇದೆ ಎಂದು ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

    ಯಾವ ದಿನ ಸಂಚಾರ?: ಮಂಗಳೂರಿನಿಂದ ಬೆಂಗಳೂರು ನಗರಕ್ಕೆ ಜುಲೈ 27ರಿಂದ ಆ.31ರ ತನಕ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ 06548 ನಂಬರ್​ನ ರೈಲು ಸಂಚರಿಸಲಿದೆ. ಬೆಂಗಳೂರಿನಿಂದ ಮಂಗಳೂರಿಗೆ ಜುಲೈ 26ರಿಂದ ಆಗಸ್ಟ್​ 30ರ ತನಕ ಪ್ರತಿ ಭಾನುವಾರ, ಮಂಗಳವಾರ ಮತ್ತು ಗುರುವಾರ 06547 ನಂಬರಿನ ರೈಲು ಸಂಚರಿಸಲಿದೆ.

    ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ

    ಆಟವಾಡುತ್ತಲೇ ಅಪ್ಪನ ವಾಹನಕ್ಕೆ ಬಲಿಯಾದ ಕಂದಮ್ಮ! ವಾಹನ ರಿವರ್ಸ್​ ತೆಗೆದುಕೊಳ್ಳುವಾಗ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts