ಮಂಗಳೂರು: ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಅನುಕೂಲವಾಗುವಂತೆ ಮಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ಸಿಟಿ ಜಂಕ್ಷನ್ ನಡುವೆ ಮೈಸೂರು ಮಾರ್ಗದಲ್ಲಿ ಜುಲೈ 26ರಿಂದ ಆಗಸ್ಟ್ 31ರ ತನಕ ವಾರದಲ್ಲಿ ಮೂರು ದಿನ ವಿಶೇಷ ರಾತ್ರಿ ರೈಲು ಸೇವೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ನಿರಂತರ ಮಳೆ ಮತ್ತು ಭೂಕುಸಿತ ಪರಿಣಾಮ ರಸ್ತೆ ಸಂಪರ್ಕ ಮಾರ್ಗ ಸಮಸ್ಯೆ ಆಗಿರುವುದರಿಂದ ಮಂಗಳೂರು- ಬೆಂಗಳೂರು ನಡುವೆ ದಿನಂಪ್ರತಿ ಹೆಚ್ಚುವರಿ ರೈಲು ಒದಗಿಸುವಂತೆ ಪಶ್ಚಿಮ ಕರಾವಳಿ ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಮಾಡಿದ ಮನವಿಗೆ ರೈಲ್ವೆ ಮಂಡಳಿ ಈ ಮೂಲಕ ಸ್ಪಂದಿಸಿದೆ.
ಬೆಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಡಲಿರುವ ಹೊಸ ರೈಲು ವಿವಿಧ ನಿಲ್ದಾಣಗಳಿಗೆ ತಲುಪುವ ಸಮಯ ಹೀಗಿದೆ..
ಕೆಂಗೇರಿ- ರಾತ್ರಿ 8.49
ರಾಮನಗರ- ರಾತ್ರಿ 9.13
ಚನ್ನರಾಯಪಟ್ಟಣ- ರಾತ್ರಿ 9.24
ಮಂಡ್ಯ- ರಾತ್ರಿ 9.54
ಮೈಸೂರು ಜಂಕ್ಷನ್- ರಾತ್ರಿ 11
ಕೃಷ್ಣರಾಜನಗರ- ರಾತ್ರಿ 11.49
ಹೊಳೆನರಸಿಪುರ- ರಾತ್ರಿ 12.43
ಹಾಸನ- ರಾತ್ರಿ 1.35
ಸಕಲೇಶಪುರ- ಬೆಳಗಿನಜಾವ 3
ಸುಬ್ರಹ್ಮಣ್ಯ ರೋಡ್- ಬೆಳಗ್ಗೆ 6.10
ಕಬಕಪುತ್ತೂರು- ಬೆಳಗ್ಗೆ 7
ಬಂಟ್ವಾಳ- ಬೆಳಗ್ಗೆ 7.30
ಪಡೀಲ್- ಬೆಳಗ್ಗೆ 8.25
ಮಂಗಳೂರು ಸೆಂಟ್ರಲ್- ಬೆಳಗ್ಗೆ 09.05
ಮಂಗಳೂರಿನಿಂದ ಸಂಜೆ 6.35ಕ್ಕೆ ಹೊರಡುವ ರೈಲು ವಿವಿಧ ನಿಲ್ದಾಣಗಳಿಗೆ ತಲುಪುವ ಸಮಯ ಹೀಗಿದೆ…
ಮಂಗಳೂರು ಜಂಕ್ಷನ್- ಸಂಜೆ 6.48
ಪಡೀಲ್- ಸಂಜೆ 7.10
ಬಂಟ್ವಾಳ- ಸಂಜೆ 7.20
ಕಬಕಪುತ್ತೂರು- ಸಂಜೆ 7.48
ಸುಬ್ರಹ್ಮಣ್ಯ ರೋಡ್- ರಾತ್ರಿ 8.40
ಸಕಲೇಶಪುರ- ರಾತ್ರಿ 9.20
ಹಾಸನ- ಮಧ್ಯರಾತ್ರಿ 12.25
ಹೊಳೆನರಸಿಪುರ- ಮಧ್ಯರಾತ್ರಿ 1.13
ಕೃಷ್ಣರಾಜನಗರ- ರಾತ್ರಿ 2.08
ಮೈಸೂರು ಜಂಕ್ಷನ್- ಬೆಳಗಿನ ಜಾವ 3
ಮಂಡ್ಯ- ಬೆಳಗಿನ ಜಾವ 3.54
ಚನ್ನರಾಯಪಟ್ಟಣ- ಬೆಳಗಿನಜಾವ 4.30
ರಾಮನಗರ- ಬೆಳಗಿನಜಾವ 4.42
ಕೆಂಗೇರಿ- ಬೆಳಗಿನಜಾವ 5.11
ಬೆಂಗಳೂರು ಸಿಟಿ ಜಂಕ್ಷನ್- ಬೆಳಗ್ಗೆ 6.15
ಮಂಗಳೂರು ಮತ್ತು ಬೆಂಗಳೂರು ಸಂಪರ್ಕಿಸುವ ಹತ್ತಿರದ ಶಿರಾಡಿ ಘಾಟ್ ಮಾರ್ಗ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ದಿನಂಪ್ರತಿ ಉಭಯ ನಗರಗಳ ನಡುವೆ ತಲಾ ಒಂದು ಹಗಲು ರೈಲು ಮತ್ತು ರಾತ್ರಿ ರೈಲು ಇದೆ. ಈ ಮಾರ್ಗದಲ್ಲಿ ಹೆಚ್ಚುವರಿ ರೈಲಿನ ಅವಶ್ಯಕತೆ ತುಂಬಾ ಇದೆ ಎಂದು ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.
ಯಾವ ದಿನ ಸಂಚಾರ?: ಮಂಗಳೂರಿನಿಂದ ಬೆಂಗಳೂರು ನಗರಕ್ಕೆ ಜುಲೈ 27ರಿಂದ ಆ.31ರ ತನಕ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ 06548 ನಂಬರ್ನ ರೈಲು ಸಂಚರಿಸಲಿದೆ. ಬೆಂಗಳೂರಿನಿಂದ ಮಂಗಳೂರಿಗೆ ಜುಲೈ 26ರಿಂದ ಆಗಸ್ಟ್ 30ರ ತನಕ ಪ್ರತಿ ಭಾನುವಾರ, ಮಂಗಳವಾರ ಮತ್ತು ಗುರುವಾರ 06547 ನಂಬರಿನ ರೈಲು ಸಂಚರಿಸಲಿದೆ.
ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ
ಆಟವಾಡುತ್ತಲೇ ಅಪ್ಪನ ವಾಹನಕ್ಕೆ ಬಲಿಯಾದ ಕಂದಮ್ಮ! ವಾಹನ ರಿವರ್ಸ್ ತೆಗೆದುಕೊಳ್ಳುವಾಗ ದುರಂತ