ಹೈದರಾಬಾದ್: ಟಾಲಿವುಡ್ ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ನಡುವೆ ಲವ್ವಿಡವ್ವಿ ಇರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಶೀಘ್ರದಲ್ಲೇ ಮದುವೆ ಆಗುವುದಾಗಿ ಹೊಸ ವರ್ಷದ ಸಂದರ್ಭದಲ್ಲಿ ವಿಡಿಯೋ ಮೂಲಕ ಇಬ್ಬರು ಅಧಿಕೃತವಾಗಿ ಘೋಷಣೆ ಮಾಡಿದ್ದರು. ವಿಡಿಯೋದಲ್ಲಿ ನರೇಶ್ ಮತ್ತು ಪವಿತ್ರಾ ಪರಸ್ಪರ ಚುಂಬಿಸುವ ದೃಶ್ಯವಿತ್ತು. ಸದ್ಯ ಇಬ್ಬರು ಸಂಬಂಧದಲ್ಲಿದ್ದು, ಒಂದೇ ಸೂರಿನಡಿ ವಾಸಿಸುತ್ತಿದ್ದಾರೆ. ಸೂಪರ್ ಸ್ಟಾರ್ ಕೃಷ್ಣ ಅವರ ಸಾವಿನ ಬೆನ್ನಲ್ಲೇ ನರೇಶ್ ಮದುವೆ ಮಾಡಿಕೊಳ್ಳಲು ಏಕೆ ಉತ್ಸುಕರಾಗಿದ್ದಾರೆ ಎಂಬ ಕುತೂಹಲಕಾರಿ ಪ್ರಶ್ನೆಗೆ ಟಾಲಿವುಡ್ನ ಹಿರಿಯ ನಿರ್ಮಾಪಕ ಚಿಟ್ಟಿಬಾಬು ಬಹಿರಂಗಪಡಿಸಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡುವ ವೇಳೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆ ಕುರಿತು ಮಾತನಾಡಿದ ಚಿಟ್ಟಿಬಾಬು, 2019ರಲ್ಲಿ ನರೇಶ್ ಅವರ ತಾಯಿ ವಿಜಯ ನಿರ್ಮಲಾ ಮರಣದ ನಂತರ ಅವರು ಒಬ್ಬಂಟಿಯಾದರು ಮತ್ತು ಅವರು ತಮ್ಮ ಬಯಲಾಜಿಕಲ್ ಅಥವಾ ಜನ್ಮ ಕೊಟ್ಟ ತಂದೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಸೂಪರ್ಸ್ಟಾರ್ ಕೃಷ್ಣ ಅವರೊಂದಿಗೆ ನಾನಕ್ರಮ್ಗುಡದಲ್ಲಿರುವ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಸಾವಿನ ನಂತರವೂ ನರೇಶ್ ತೀವ್ರ ದುಃಖಿತರಾದರು. ಜೀವನದಲ್ಲಿ ಒಂಟಿಯಾಗಿ ಸಂಕಟ ಅನುಭವಿಸುತ್ತಿದ್ದರು. ಹೀಗಾಗಿ ಮದುವೆಯಾಗಲು ನಿರ್ಧರಿಸಿ, ಪವಿತ್ರಾ ಅವರೊಂದಿಗಿನ ವಿವಾಹದ ಬಗ್ಗೆ ಅಧಿಕೃತ ಘೋಷಣೆ ಮಾಡಿದರು ಎಂದು ಹೇಳಿದ್ದಾರೆ.
ಅಂದಹಾಗೆ ತೆಲುಗು ಚಿತ್ರರಂಗದಲ್ಲಿ ಪೋಷಕ ನಟ ನರೇಶ್ ಹಾಗೂ ಕನ್ನಡ, ತೆಲುಗು ಚಿತ್ರಗಳಲ್ಲಿ ಪೋಷಕ ನಟಿ ಪವಿತ್ರಾ ಲೋಕೇಶ್ ನಡುವೆ ಸಂಬಂಧ ಇರುವುದಾಗಿ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ, ಮಾಧ್ಯಮಗಳ ಮುಂದೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತು. ತಮಗೆ ಪತಿಯಿಂದ ಅನ್ಯಾಯವಾಗಿದ್ದು, ನ್ಯಾಯ ಕೊಡಿಸಬೇಕೆಂದು ರಮ್ಯಾ ಬೇಡಿಕೆ ಇಟ್ಟಿದ್ದರು. ಇದಕ್ಕೆ ಪುಷ್ಟಿ ಕೊಡುವಂತೆ ನರೇಶ್ ಹಾಗೂ ಪವಿತ್ರಾ ಹೋಟೆಲ್ನಲ್ಲಿ ಒಂದೇ ರೂಮಿನಲ್ಲಿ ನೆಲೆಸಿದ್ದರು. ಇಷ್ಟೆಲ್ಲಾ ನಡೆದ ಮೇಲೂ ಪವಿತ್ರಾ ಲೋಕೇಶ್ ಮಾತ್ರ ತಮ್ಮ ಹಾಗೂ ನರೇಶ್ ನಡುವಿನ ಸಂಬಂಧದ ಬಗ್ಗೆ ಯಾವುದೇ ಮಾಹಿತಿ ಬಿಚ್ಚಿಟ್ಟಿರಲಿಲ್ಲ. ನರೇಶ್ ಕೇವಲ ತನಗೆ ಒಬ್ಬ ಒಳ್ಳೆಯ ಗೆಳೆಯ ಎಂದೇ ವಾದಿಸಿದ್ದರು.
ಆದರೆ ನರೇಶ್ 2023ರ ಹೊಸ ವರ್ಷಕ್ಕೆ ಹೊಸ ಸುದ್ದಿ ಎಂಬಂತೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದರು. ವಿಡಿಯೋದಲ್ಲಿ ನರೇಶ್ ಕ್ಯಾಂಡಲ್ ಲೈಟ್ನಲ್ಲಿ ಪವಿತ್ರಾ ಲೋಕೇಶ್ ಅವರೊಂದಿಗೆ ಕೇಕ್ ಕತ್ತರಿಸಿ, ಪರಸ್ಪರ ತಿನ್ನಿಸಿದ್ದಾರೆ. ನಂತರ ಇಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಚುಂಬಿಸಿದ್ದಾರೆ. 2023ರ ಹೊಸ ವರ್ಷಕ್ಕೆ ಶುಭಾಶಯ ಕೋರುತ್ತಾ, ಈ ಹೊಸ ವರ್ಷಕ್ಕೆ ನಿಮ್ಮೆಲ್ಲರ ಹಾರೈಕೆ ಬೇಕು. ಸದ್ಯದಲ್ಲೇ ನಾವಿಬ್ಬರೂ ಮದುವೆಯಾಗಲಿದ್ದೇವೆ ಎಂದು ಪವಿತ್ರಾ ಲೋಕೇಶ್ರೊಂದಿಗಿನ ಸಂಬಂಧಕ್ಕೆ ಮುದ್ರೆ ಒತ್ತಿದರು. (ಏಜೆನ್ಸೀಸ್)
ನರೇಶ್ಗೆ ಪೋರ್ನ್ ವಿಡಿಯೋಗಳನ್ನು ನೋಡುವ ಚಟವಿದೆ: ಗಂಡನ ಮುಖವಾಡ ಕಳಚಿದ 3ನೇ ಪತ್ನಿ ರಮ್ಯಾ