More

    ಕೇಬಲ್​ ಕಾರಿನಲ್ಲಿ ಸಿಲುಕಿದ ಪ್ರವಾಸಿಗರ ರಕ್ಷಣೆಗೆ ಹೆಲಿಕಾಪ್ಟರ್ ಸಮೇತ ಧಾವಿಸಿದ ಸೇನೆ

    ಚಂಡಿಗಢ: ಪ್ರವಾಸಿ ತಾಣ ವೀಕ್ಷಣೆಗೆ ಬಂದಿದ್ದ ಎಂಟು ಮಂದಿ ಪ್ರವಾಸಿಗರು ಕೇಬಲ್​​ ಕಾರಿನಲ್ಲಿ ಸಿಲುಕಿದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.

    ಇಲ್ಲಿನ ಪುರ್ವಾನೋ ಪ್ರವಾಸಿ ತಾಣ ವೀಕ್ಷಣೆಗೆ ಬಂದಿದ್ದ ವೇಳೆ ಮಧ್ಯದಲ್ಲೇ ಕೇಬಲ್​ ಕಾರು ನಿಂತುಹೋಗಿದೆ. ಇದರಿಂದ ಕಂಗಾಲಾದ ಪ್ರವಾಸಿಗರ ರಕ್ಷಣೆಗೆ ಸೇನೆ ಹೆಲಿಕಾಪ್ಟರ್​​ನೊಂದಿಗೆ ಧಾವಿಸಿತು.

    ಸೋಮವಾರ ಮಧ್ಯಾಹ್ನ ರಕ್ಷಣಾ ಕಾರ್ಯಾಚರಣೆ ಕೈಗೊಂಡಿರುವ ಸೇನೆ ಕೊನೆಗೂ ಎಂಟು ಮಂದಿಯನ್ನು ಹೆಲಿಕಾಪ್ಟರ್​ ಮೂಲಕ ಪ್ರವಾಸಿಗರನ್ನು ರಕ್ಷಿಸಲಾಯಿತು.

    ಪುರ್ವಾನೋದಲ್ಲಿರುವ ಪ್ರಸಿದ್ಧ ಖಾಸಗಿ ರೆಸಾರ್ಟ್​ ವೀಕ್ಷಣೆಗೆ ಇದೇ ಕೇಬಲ್​ ಕಾರು ಮೂಲಕ ಹೋಗಲಾಗುತ್ತದೆ. ಈ ವೇಳೆ ತಾಂತ್ರಿಕ ದೋಷದಿಂದ ಅರ್ಧದಲ್ಲೇ ನಿಂತು ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
    ಕಳೆದ ಏಪ್ರಿಲ್​ ತಿಂಗಳಿನಲ್ಲಿ ಜಾರ್ಖಂಡ್​​ನಲ್ಲಿ ಕೇಬಲ್​ ಕಾರು ದುರಂತ ಸಂಭವಿಸಿತ್ತು. ಈ ವೇಳೆ ಮೂವರು ಮೃತಪಟ್ಟಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts