ಚಂಡಿಗಢ: ಪ್ರವಾಸಿ ತಾಣ ವೀಕ್ಷಣೆಗೆ ಬಂದಿದ್ದ ಎಂಟು ಮಂದಿ ಪ್ರವಾಸಿಗರು ಕೇಬಲ್ ಕಾರಿನಲ್ಲಿ ಸಿಲುಕಿದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಪುರ್ವಾನೋ ಪ್ರವಾಸಿ ತಾಣ ವೀಕ್ಷಣೆಗೆ ಬಂದಿದ್ದ ವೇಳೆ ಮಧ್ಯದಲ್ಲೇ ಕೇಬಲ್ ಕಾರು ನಿಂತುಹೋಗಿದೆ. ಇದರಿಂದ ಕಂಗಾಲಾದ ಪ್ರವಾಸಿಗರ ರಕ್ಷಣೆಗೆ ಸೇನೆ ಹೆಲಿಕಾಪ್ಟರ್ನೊಂದಿಗೆ ಧಾವಿಸಿತು.
ಸೋಮವಾರ ಮಧ್ಯಾಹ್ನ ರಕ್ಷಣಾ ಕಾರ್ಯಾಚರಣೆ ಕೈಗೊಂಡಿರುವ ಸೇನೆ ಕೊನೆಗೂ ಎಂಟು ಮಂದಿಯನ್ನು ಹೆಲಿಕಾಪ್ಟರ್ ಮೂಲಕ ಪ್ರವಾಸಿಗರನ್ನು ರಕ್ಷಿಸಲಾಯಿತು.
ಪುರ್ವಾನೋದಲ್ಲಿರುವ ಪ್ರಸಿದ್ಧ ಖಾಸಗಿ ರೆಸಾರ್ಟ್ ವೀಕ್ಷಣೆಗೆ ಇದೇ ಕೇಬಲ್ ಕಾರು ಮೂಲಕ ಹೋಗಲಾಗುತ್ತದೆ. ಈ ವೇಳೆ ತಾಂತ್ರಿಕ ದೋಷದಿಂದ ಅರ್ಧದಲ್ಲೇ ನಿಂತು ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಜಾರ್ಖಂಡ್ನಲ್ಲಿ ಕೇಬಲ್ ಕಾರು ದುರಂತ ಸಂಭವಿಸಿತ್ತು. ಈ ವೇಳೆ ಮೂವರು ಮೃತಪಟ್ಟಿದ್ದರು. (ಏಜೆನ್ಸೀಸ್)