More

    ರಾಮನಗರದಲ್ಲಿ ಕಾಂಗ್ರೆಸ್​ ಮುಖಂಡನ ಕೊಲೆ: 49 ದಿನದ ಬಳಿಕ ಬಯಲಾಯ್ತು ಸೊಸೆ ರಹಸ್ಯ

    ರಾಮನಗರ: ಬಿಡದಿಯ ಬಾನಂದೂರು ಭೈರವನದೊಡ್ಡಿ ಬಳಿ ಫೆಬ್ರವರಿಯಲ್ಲಿ ನಡೆದಿದ್ದ ಕಾಂಗ್ರೆಸ್​ ಮುಖಂಡನ ಹತ್ಯೆ ಪ್ರಕರಣ ಭೇದಿಸಿರುವ ಬಿಡದಿ ಪೊಲೀಸರು ಮೃತ ವ್ಯಕ್ತಿಯ ಸೊಸೆ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

    ಫೆ.25ರಂದು ಕಾಂಗ್ರೆಸ್​ ಮುಖಂಡ ಗಂಟಪ್ಪ (55) ಅವರನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಕೊಲೆ ರಹಸ್ಯ ಬಯಲಾಗಿದೆ. ಗಂಟಪ್ಪನನ್ನು ಸೊಸೆ ಚೈತ್ರಾಳೇ ಕೊಲೆ ಮಾಡಿರುವುದು ಗೊತ್ತಾಗಿದೆ.

    ಗಂಟಪ್ಪ ಅವರು ತನ್ನ ಪುತ್ರ ನಂದೀಶ್​ ಮತ್ತು ಚೈತ್ರಾಳ ವಿವಾಹಕ್ಕೆ ಒಪ್ಪಿಗೆ ನೀಡಿರಲಿಲ್ಲ. ವಿರೋಧದ ನಡುವೆಯೂ ಮದ್ವೆಯಾದ ಇಬ್ಬರನ್ನೂ ಎರಡು ವರ್ಷಗಳಿಂದ ಮನೆಗೆ ಸೇರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ಚೈತ್ರಾ, ನವೀನ್​ ಜತೆ ಕೊಲೆಗೆ ಸಂಚು ರೂಪಿಸಿ, ಇದಕ್ಕಾಗಿ 30 ಗ್ರಾಂ ಚಿನ್ನದ ಸರವನ್ನು ಮುಂಗಡವಾಗಿ ನೀಡಿದ್ದಳು. ಮತ್ತಷ್ಟು ಹಣ ನೀಡುವ ಭರವಸೆಯನ್ನೂ ನೀಡಿದ್ದಳು. ಅದರಂತೆ ಫೆ.25ರಂದು ಗಂಟಪ್ಪನನ್ನು ಹತ್ಯೆ ಮಾಡಲಾಗಿತ್ತು. ಸುಮಾರು 50 ದಿನ ಸತತ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ ಮತ್ತು ಆಯುಧಗಳನ್ನು ವಶ ಪಡಿಸಿಕೊಂಡಿದ್ದಾರೆ.

    ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟು PSIಗೆ ಬೆವರಿಳಿಸಿ ಭಾರೀ ಸುದ್ದಿಯಾಗಿದ್ದ ತುಮಕೂರು SPಗೆ ಆತ್ಮಹತ್ಯೆ ಬೆದರಿಕೆ!

    ಬಾಡಿಗೆ ಮನೆ ತೋರಿಸೋ ನೆಪದಲ್ಲಿ ಕರೆಸಿ ಮಾಡಬಾರದ್ದು ಮಾಡಿದ್ರು… ದಪ್ಪಗಿದ್ದರಿಂದ ಶವ ಸಾಗಿಸದೆ ಅಲ್ಲೇ ಬಿಟ್ರು…

    ಜ್ಯೋತಿಷಿ ಮಾತು ನಂಬಿ ಸಾವಿನ ಮನೆ ಬಿಟ್ಟು ಲಾಡ್ಜ್​ಗೆ ಹೋದ ಮಾಲೀಕನಿಗೂ-ಕುಟುಂಬಕ್ಕೂ ಕಾದಿತ್ತು ಭಾರಿ ಆಘಾತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts