ಚಿಕ್ಕಮಗಳೂರು: ನಟ ಪುನೀತ್ ರಾಜ್ಕುಮಾರ್ ನಮ್ಮೊಂದಿಗೆ ಇಲ್ಲವಾದರೂ ಕೋಟ್ಯಂತರ ಅಭಿಮಾನಿಗಳ ಪಾಲಿಗೆ ಅವರೇ ‘ರಾಜಕುಮಾರ’. ಅಪ್ಪು ಫೋಟೋವನ್ನು ಅಸಂಖ್ಯಾತ ಜನರು ಮನೆಗಳಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಪುನೀತ್ ಭೂತಾಯಿಯ ಮಡಿಲು ಸೇರಿದ್ದರೂ ಅಭಿಮಾನಿಗಳಿಗೆ ಅವರ ಮೇಲಿರುವ ಪ್ರೀತಿ ಕಿಂಚಿತ್ತೂ ಕರಗಿಲ್ಲ. ಅಪ್ಪುಗಾಗಿ ಅವರ ಮನ ಮಿಡಿಯುತ್ತಲೇ ಇದೆ, ಅವರಿಗಾಗಿ ಕಂಬನಿ ಸುರಿಸುತ್ತಲೇ ಇದ್ದಾರೆ. ‘ಮತ್ತೆ ಹುಟ್ಟಿ ಬನ್ನಿ ಅಪ್ಪು’, ‘ನಗುವಿನ ದೇವರು ಪುನೀತ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂಬ ಬರಹದೊಂದಿಗೆ ಅಪ್ಪು ಅವರ ಭಾವಚಿತ್ರವುಳ್ಳ ಬ್ಯಾನರ್ಗಳನ್ನು ಪುನೀತ್ ಅಭಿಮಾನಿಗಳು ಊರು ತುಂಬೆಲ್ಲಾ ಹಾಕಿ, ಅವರಿಗೆ ನಮಿಸುತ್ತಲೇ ಇದ್ದಾರೆ. ಕನ್ನಡಿಗರಿಗೆ ಅಪ್ಪು ಮೇಲಿರುವ ಭಾವನಾತ್ಮಕ ಸಂಬಂಧವನ್ನ ಹೇಳಲು ಪದಗಳೇ ಸಾಲುವುದಿಲ್ಲ. ಆದರೆ, ಇಲ್ಲೊಬ್ಬ ದುಷ್ಕರ್ಮಿ ಅಪ್ಪು ಫ್ಲೆಕ್ಸ್ ಹರಿದು ವಿಕೃತಿ ಮೆರೆದಿದ್ದಾನೆ.
ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ಅಪ್ಪು ಅಭಿಮಾನಿಗಳು ಹಾಕಿದ್ದ ಫ್ಲೆಕ್ಸ್ ಅನ್ನು ಯುವಕನೊಬ್ಬ ಹರಿದು ಹಾಕಿದ್ದಾನೆ. ಇದನ್ನ ಕಂಡು ಕೋಪಗೊಂಡ ಜನರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅದೇ ಫ್ಲೆಕ್ಸ್ ಅನ್ನು ಆತನ ಮೇಲೆ ಹೊದಿಸಿ ರಸ್ತೆಯಲ್ಲಿ ನಡೆಸಿಕೊಂಡೇ ಪೊಲೀಸ್ ಠಾಣೆಗೆ ಕರೆ ತಂದ ಘಟನೆ ಸೋಮವಾರ ನಡೆದಿದೆ. ಪುನೀತ್ ಅವರ ಫ್ಲೆಕ್ಸ್ ಅನ್ನು ಹರಿಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಪುನೀತ್ ಬಗ್ಗೆ ಅಶ್ಲೀಲ ಪದ ಬಳಸಿ ಅವಮಾನ: ಸುದೀಪ್ ಮಗಳು ಸಾನ್ವಿಯಿಂದ ಹಿಗ್ಗಾಮುಗ್ಗಾ ತರಾಟೆ
ಪುನೀತ್ ನೆನಪಲ್ಲಿ ಮತ್ತೊಂದು ದೊಡ್ಡ ಕಾರ್ಯಕ್ರಮ: ಕನ್ನಡ ಕಿರುತೆರೆ ವತಿಯಿಂದ ‘ಅಪ್ಪು ಅಮರ’