More

    ಮಾಡಬಾರದ್ದು ಮಾಡಿ ಪುನೀತ್​ ಅಭಿಮಾನಿಗಳ ಮನಸ್ಸಿಗೆ ಘಾಸಿ ಮಾಡಿದ: ಇವನ ವರ್ತನೆ ನೋಡಿದ್ರೆ ಹಿಡಿಶಾಪ ಹಾಕ್ತೀರಿ

    ಚಿಕ್ಕಮಗಳೂರು: ನಟ ಪುನೀತ್​ ರಾಜ್​ಕುಮಾರ್​ ನಮ್ಮೊಂದಿಗೆ ಇಲ್ಲವಾದರೂ ಕೋಟ್ಯಂತರ ಅಭಿಮಾನಿಗಳ ಪಾಲಿಗೆ ಅವರೇ ‘ರಾಜಕುಮಾರ’. ಅಪ್ಪು ಫೋಟೋವನ್ನು ಅಸಂಖ್ಯಾತ ಜನರು ಮನೆಗಳಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಪುನೀತ್​ ಭೂತಾಯಿಯ ಮಡಿಲು ಸೇರಿದ್ದರೂ ಅಭಿಮಾನಿಗಳಿಗೆ ಅವರ ಮೇಲಿರುವ ಪ್ರೀತಿ ಕಿಂಚಿತ್ತೂ ಕರಗಿಲ್ಲ. ಅಪ್ಪುಗಾಗಿ ಅವರ ಮನ ಮಿಡಿಯುತ್ತಲೇ ಇದೆ, ಅವರಿಗಾಗಿ ಕಂಬನಿ ಸುರಿಸುತ್ತಲೇ ಇದ್ದಾರೆ. ‘ಮತ್ತೆ ಹುಟ್ಟಿ ಬನ್ನಿ ಅಪ್ಪು’, ‘ನಗುವಿನ ದೇವರು ಪುನೀತ್​ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂಬ ಬರಹದೊಂದಿಗೆ ಅಪ್ಪು ಅವರ ಭಾವಚಿತ್ರವುಳ್ಳ ಬ್ಯಾನರ್​ಗಳನ್ನು ಪುನೀತ್​ ಅಭಿಮಾನಿಗಳು ಊರು ತುಂಬೆಲ್ಲಾ ಹಾಕಿ, ಅವರಿಗೆ ನಮಿಸುತ್ತಲೇ ಇದ್ದಾರೆ. ಕನ್ನಡಿಗರಿಗೆ ಅಪ್ಪು ಮೇಲಿರುವ ಭಾವನಾತ್ಮಕ ಸಂಬಂಧವನ್ನ ಹೇಳಲು ಪದಗಳೇ ಸಾಲುವುದಿಲ್ಲ. ಆದರೆ, ಇಲ್ಲೊಬ್ಬ ದುಷ್ಕರ್ಮಿ ಅಪ್ಪು ಫ್ಲೆಕ್ಸ್​ ಹರಿದು ವಿಕೃತಿ ಮೆರೆದಿದ್ದಾನೆ.

    ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ಅಪ್ಪು ಅಭಿಮಾನಿಗಳು ಹಾಕಿದ್ದ ಫ್ಲೆಕ್ಸ್​ ಅನ್ನು ಯುವಕನೊಬ್ಬ ಹರಿದು ಹಾಕಿದ್ದಾನೆ. ಇದನ್ನ ಕಂಡು ಕೋಪಗೊಂಡ ಜನರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅದೇ ಫ್ಲೆಕ್ಸ್​ ಅನ್ನು ಆತನ ಮೇಲೆ ಹೊದಿಸಿ ರಸ್ತೆಯಲ್ಲಿ ನಡೆಸಿಕೊಂಡೇ ಪೊಲೀಸ್​ ಠಾಣೆಗೆ ಕರೆ ತಂದ ಘಟನೆ ಸೋಮವಾರ ನಡೆದಿದೆ. ಪುನೀತ್ ಅವರ ಫ್ಲೆಕ್ಸ್ ಅನ್ನು ಹರಿಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ಪುನೀತ್​ ಬಗ್ಗೆ ಅಶ್ಲೀಲ ಪದ ಬಳಸಿ ಅವಮಾನ: ಸುದೀಪ್​ ಮಗಳು ಸಾನ್ವಿಯಿಂದ ಹಿಗ್ಗಾಮುಗ್ಗಾ ತರಾಟೆ

    ಪುನೀತ್​ ನೆನಪಲ್ಲಿ ಮತ್ತೊಂದು ದೊಡ್ಡ ಕಾರ್ಯಕ್ರಮ: ಕನ್ನಡ ಕಿರುತೆರೆ ವತಿಯಿಂದ ‘ಅಪ್ಪು ಅಮರ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts