ಚಿಕ್ಕಮಗಳೂರು: ಸದ್ಯದ ಪರಿಸ್ಥಿತಿಯಲ್ಲಿ ವಧು-ವರರಿಗೆ ಉಡುಗೊರೆಯಾಗಿ ಏನೆಲ್ಲಾ ಕೊಡಬಹುದು? ಪೆಟ್ರೋಲ್!ಆಶ್ಚರ್ಯ ಬೇಡ, ಇಂಧನ ಬೆಲೆ ಗಗನಕ್ಕೇರುತ್ತಿರುವ ಪರಿಣಾಮ ಇದು ಈಗಿನ ಟ್ರೆಂಟ್ ಆಗುವ ಎಲ್ಲ ಲಕ್ಷಣ ಗೋಚರಿಸುತ್ತಿದೆ.
ಇದಕ್ಕೆ ಮೂಡಿಗೆರೆ ಪಟ್ಟಣದ ಬಂಟರ ಭವನದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ಮರ್ಕಲ್ ಮತ್ತು ವೈಷ್ಣವಿ ಅವರ ಮದುವೆಯೇ ಸಾಕ್ಷಿ. ಮುಹೂರ್ತ ಮುಗಿದ ಬಳಿಕ ರಿಸೆಪ್ಷನ್ಗೆ ನಿಂತಿದ್ದ ನವದಂಪತಿಗೆ ಸಚಿನ್ರ ಮೂವರು ಸ್ನೇಹಿತರು ತಲಾ ಒಂದು ಲೀಟರ್ ಪೆಟ್ರೋಲ್ ಇದ್ದ ಬಾಟಲಿಯನ್ನ ವಧು-ವರರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಪೆಟ್ರೋಲ್ ಹಿಡಿದು ವೇದಿಕೆಗೆ ಬಂದ ಸ್ನೇಹಿತರನ್ನ ಕಂಡು ಅರೆಕ್ಷಣ ನವದಂಪತಿ ಹಾಗೂ ಅಲ್ಲಿ ನೆರೆದಿದ್ದ ಸಂಬಂಧಿಕರು ಶಾಕ್ ಆಗಿದ್ದರು.
ನಿಮ್ಮಿಬ್ಬರ ಮದುವೆಗೆ ನಮ್ಮ ಕಡೆಯಿಂದ ಈ ಗಿಫ್ಟ್ ಎಂದು ಸ್ನೇಹಿತರು ಹೇಳುತ್ತಿದ್ದಂತೆ ನವದಂಪತಿ ನುಸುನಕ್ಕರು. ಪೆಟ್ರೋಲ್ ರೇಟ್ ದುಬಾರಿ ಆಗಿದೆ. ಅದಕ್ಕೆ ಇದನ್ನ ಕೊಡ್ತಿದ್ದಾರೆ. ಈರುಳ್ಳಿ ದರ ಹೆಚ್ಚಾದಗಲೂ ವಧು-ವರರಿಗೆ ಅದೆಲ್ಲೋ ಈರುಳ್ಳಿಯನ್ನ ಗಿಫ್ಟ್ ಆಗಿ ಕೊಟ್ಟಿದ್ದರಂತೆ. ಅಡುಗೆ ಸಿಂಡರ್ ಅನ್ನೂ ಉಡುಗೊರೆ ತರ ಕೊಟ್ಟು ಕೇಂದ್ರ ಸರ್ಕಾರವನ್ನ ಅಣಕಿಸುತ್ತಿದ್ದಾರೆ ಎಂದು ನೆರೆದಿದ್ದ ಜನ ಮಾತನಾಡಿಕೊಂಡರು. ಪೆಟ್ರೋಲ್ ಅನ್ನು ಉಡುಗೊರೆಯಾಗಿ ಕೊಟ್ಟ ದೃಶ್ಯ ಸಖತ್ ವೈರಲ್ ಆಗಿದೆ.
ಸರ್ವರೂ ಎಚ್ಚರದಿಂದ ಇರಬೇಕು… ಇಂದು ಬೆಳ್ಳಂಬೆಳಗ್ಗೆ ಕಾರ್ಣಿಕ ನುಡಿದ ಮೈಲಾರಸ್ವಾಮಿ
ಬೇಯಿಸಿದ ಮೊಟ್ಟೆ ತಿಂದು ಪ್ರಾಣಬಿಟ್ಟ ಮಹಿಳೆ! ಮೊಟ್ಟೆ ಪ್ರಿಯರನ್ನ ಬೆಚ್ಚಿಬೀಳಿಸುತ್ತೆ ಈ ಘಟನೆ