ಮಂಗಳೂರು: ಉಳ್ಳಾಲದ ಮಾಜಿ ಶಾಸಕ ದಿ. ಬಿ.ಎಂ.ಇದಿನಬ್ಬ ಪುತ್ರ ಬಿ.ಎಂ.ಬಾಷಾ ಅವರ ಮನೆ ಮೇಲೆ ಮತ್ತೆ ಎನ್ಐಎ ದಾಳಿ ಮಾಡಿದ್ದು, ಬಿ.ಎಂ.ಪಾಷಾ ಅವರ ಸೊಸೆ ದೀಪ್ತಿ ಅಲಿಯಾಸ್ ಮರಿಯಂ ಎಂಬುವರನ್ನ ಬಂಧಿಸಿದೆ.
ಐಸಿಎಸ್ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆ ಕಳೆದ ಆ.4ರಂದು ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಬಿ.ಎಂ.ಬಾಷಾ ಅವರ ಮನೆ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದರು. ಅಂದು ಬಾಷಾನ ಕಿರಿಯ ಪುತ್ರ ಅಬ್ದುಲ್ ರೆಹಮಾನ್ನನ್ನು ಬಂಧಿಸಿದ್ದರು. ಆ ವೇಳೆ ಬಾಷಾರ ಮತ್ತೊಬ್ಬ ಪುತ್ರ ಅನಾಸ್ ಎಂಬಾತನ ಪತ್ನಿ ದೀಪ್ತಿ ಅಲಿಯಾಸ್ ಮರಿಯಂ ಮೇಲೆ ಅನುಮಾನ ಬಂದಿತ್ತಾದರೂ ಅವರಿಗೆ ಸಣ್ಣ ಮಗುವಿದ್ದ ಕಾರಣ ಎನ್ಐಎ ಅಧಿಕಾರಿಗಳು ಕೇವಲ ವಿಚಾರಣೆ ನಡೆಸಿ ಬಿಟ್ಟದರು. ಇದೀಗ ಮತ್ತೆ ಮನೆಗೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ದೀಪ್ತಿಯನ್ನು ವಶಕ್ಕೆ ಪಡೆದಿದೆ.
ಉಳ್ಳಾಲದ ಮನೆಯಿಂದ ಟೆಂಪೋ ಟ್ರಾವೆಲರ್ ವಾಹನದಲ್ಲಿ ದೀಪ್ತಿಯನ್ನು ಕರೆದುಕೊಂಡು ಹೋದ ಎನ್ಐಎ ತಂಡ, ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿ ದೆಹಲಿಗೆ ಕರೆದುಕೊಂಡು ಹೋಗಲಿದೆ ಎಂದು ತಿಳಿದು ಬಂದಿದೆ.
ಏಯ್ ಗಂಡಸ್ತನ ತೋರ್ಸು ಬಾ.. ಎನ್ನುತ್ತಲೇ ಕಿತ್ತಾಡಿದ ಸಂಸದ-ಸಚಿವ: ರಾಮನಗರದಲ್ಲಿ ಸಿಎಂ ಎದುರೇ ಹೈಡ್ರಾಮ
ಕರೊನಾ ಸೋಂಕಿತೆಯ ಪ್ರಾಣ ಉಳಿಸಿತು ವಯಾಗ್ರ ಔಷಧ! 45 ದಿನದ ಬಳಿಕ ಕೋಮಾದಿಂದ ಹೊರ ಬಂದ ನರ್ಸ್