More

    ಹಳೇ ದ್ವೇಷಕ್ಕೆ ವ್ಯಾಪಾರಿ ಕೊಲೆ; ಕಾರಣ ಕೇಳಿದರೇ ಶಾಕ್

    ಬೆಂಗಳೂರು: ಹಳೆಯ ದ್ವೇಷಕ್ಕೆ ಪೀಠೋಪಕರಣ ವ್ಯಾಪಾರಿಯನ್ನು ಮಾರಕಾಸದಿಂದ ಹಲ್ಲೆ ನಡೆಸಿ ದುಷ್ಕರ್ಮಿ ಕೊಲೆ ಮಾಡಿದ್ದಾನೆ. ಬಿಎಚ್‌ಎಲ್ ಲೇಔಟ್ ಕೃಷ್ಣಪ್ಪ ಗಾರ್ಡನ್ ನಿವಾಸಿ ತಬ್ರೇಜ್ ಪಾಷಾ (37) ಮೃತ ವ್ಯಾಪಾರಿ. ಈತನ ಹತ್ಯೆ ಮಾಡಿದ ಆರೋಪಿ ಶಬೀರ್ ಎಂಬಾತನ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ತಬ್ರೇಜ್ ಪಾಷಾ ಮತ್ತು ಶಬೀರ್ ನಡುವೆ 9 ತಿಂಗಳ ಹಿಂದೆ ಜಗಳವಾಗಿತ್ತು. ಆರೋಪಿ ತನ್ನ ಪತ್ನಿ ವಿಚಾರವಾಗಿ ತಬ್ರೇಜ್ ಪಾಷಾ ಮನೆ ಬಳಿಗೆ ಹೋಗಿ ಜಗಳ ಮಾಡಿದ್ದ. ಮತ್ತೆ ಇದೇ ವಿಚಾರಕ್ಕೆ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು. ಬುಧವಾರ ಮಧ್ಯಾಹ್ನ 2.30ರಲ್ಲಿ ಕೃಷ್ಣಪ್ಪ ಗಾರ್ಡನ್ ಬಳಿ ಇಬ್ಬರು ಮುಖಾಮುಖಿ ಆಗಿದ್ದು, ಜಗಳ ಶುರುವಾಗಿದೆ.

    ವಿಕೋಪಕ್ಕೆ ತಿರುಗಿದಾಗ ಆರೋಪಿ ಶಬೀರ್, ಮಾರಕಾಸದಿಂದ ತಬ್ರೇಜ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ತೀವ್ರ ರಕ್ತಸ್ರಾವ ಉಂಟಾಗಿ ತಬ್ರೇಜ್ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಮೃತ ವ್ಯಕ್ತಿಯ ಪತ್ನಿ ಕೊಟ್ಟ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಿಲಕನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts